ಪುಟ:ಹನುಮದ್ದ್ರಾಮಾಯಣಂ.djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

282 ಹನುಮದ್ರಾಮಾಯಣ, ಬಂದುದು ಪುಷ್ಪಕಮಾ ಗುಣ | ಸಿಂಧುಭರದ್ವಾಜನುಟಜದೆಡೆಗಂ ಭರದಿಂ | ೯೭ || ನಿಲದಿಳಿಸುತೆ ರಥಮಂ ರಘು | ಕುಲಜಂ ಸೌಮಿತ್ರಿತವೆರಸುಂ ಮಿಗೆ ತ || ಲಯಮನೊಳವೊಕ್ಕುಂ ಮುನಿ | ತಿಲಕನ ಚರಣಕ್ಕೆ ಮಣಿದು ನಿಂದಂ ನಲವಿಂ 11 ೯೮ [. ಕಾಣುತಿದಿರೆಳ್ಳು ಭುವನ | ತ್ರಾಣಾ ನೀಂ ಬಂದುದಿಂದು ಮದ್ಯಾಗ್ಯಮಲಾ | ಕೊಣಿಯೊಳವತರಿಸಿ ಮುನಿ | ಶ್ರೇಣಿಯನುರೆ ಕಾಯ್ದೆ ಹರಿಯೆ ಶರಣಾಗೆಂದಂ || ೯೯ | ನೀನೇ ಶುದ್ಧ ಬ್ರಹ್ಮಂ | ನೀನೇ ಸಚರಾಚರಾತ್ಮಕಂ ತ್ರಿಗುಣಯುತಂ || ನೀನೇ ಮಾಯಾರಹಿತಂ || ನೀನೇ ಪರದೈವವೆಂದು ನುತಿಸಿದನಾಗಳ್ || ೧೦೦ || ರವಿಸುತನಂ ಕಂಡುಂ ಕಪಿ | ನಿವಹಮನೊಡಗೊಂಡು ವಾರ್ಧಿಯಂ ಕಟ್ಟಿ ಮಹಾ || ಹವದೊಳ್ ರಾವಣಮುಖದಾ | ನವರಂ ಸಂಹರಿಸಿ ಬಂದುದಂ ತಾಂ ಬಲ್ಲೆ೦ | ೧೦೧ | ಭೂಭಾರಮದಳಿದುದರಿo ! ಸೌಭಾಗ್ಯಂಒಡೆದುದೈದೆ ದಿವಿಜಾನೀಕಂ || ಶೋಭಾನ್ವಿತವೆಂದೆನಿಸಿದು | ದೀ ಭಾರತವರ್ಷಮೆಂದೊಡೆಂದಂ ರಾಮಂ { ೧೦೨ || ಮುನಿಪಾ ತವಕೃಪೆಯಿಂದಂ ! ದನುಜಾಳಿಯನ್ನೆದೆ ಕೊಂದು ಬಂದೆಂ ಭರದಿಂ || ದನುಜರ್ ಪದುಳಿಗರೇ ಮ | ಜನನಿಯರುಂ ಸೌಖ್ಯದಿಂದಮಿರ್ಪ್ಪರೆ ಪೇಳಾ || ೧೩ || ಲೇಸಿಂದಿರ್ಷ್ಪರವರ್ ಮುನಿ || ವೇಷದೊಳಂ ಭರತನಿರ್ಷ್ಪನೀ ದಿವಸಂ ನೀಂ || ವಾಸಂಗೆಯ್ದ ಪುದೆಂದೆನು | ತಾ ಶಮದಮವರ್ಯನುಸಿರ್ದೊಡೆಂದಂ ರಾಮಂ || ೧೦೪ ||