ಪುಟ:Keladinrupa Vijayam.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚಮಾಶ್ವಾಸಂ ಬಗ್ಗದ ಮನ್ನೆಯರದಟಂ ಮಗ್ಗಿಸಿ ತದ್ಧರಿತ್ರಿಯಂ ವಶಗೈದಂ | ಮತ್ತಮವಲ್ಲದಾಯನರಗೌಡಂ ಮೊಸರರೊಂಟೆಯಂ ಮಾಡಿಕೊಂಡಿರಲಾಕೊಂಟೆಸೀಮೆಗಳಂ ತೆಗೆದುಕೊಂಡು ಕೊಂಟೆಯಂ ಕೆಡಹಿ ಸಿದ್ದೇಶ್ವರದೊಳೆ 1 ನವೀನಪರಿಷ್ಕರಣಮಂ ನಿರ್ಮಾಣಂಗೈಸಿದ ನಂತಮಲ್ಲದೆಯುಂ || & ಹಿರಿಯಹನುಮೇಂದ್ರಸುತನಂ ಪೊರೆದೆಡತೊರೆ ಗಾಜನೂರು ಸೀಮೊಗೆಯ ಸುಪಿ | ಸ್ವರಮಾದ ಎಕ್ಕುವಳ್ಳಿಯ ವರಕೊಂಟತ್ರಯವನಾನೃಪಂ ವಶಗೈದಂ || ೩೪ - ಅದೆಂತೆಂದೊಡೆ, ತರಿಕೆರೆಯ ಹಿರಿಯಹನುಮಪ್ಪನಾಯಕನಸು ತರಿರ್ವರುಂ ತಂದೆ ಹಸುಗೆಗೆಟ್ಟು ಕೊಟ್ಟಂತಿರದೆ ತಮ್ಮೊಳೀವಾದಿಸಿ ಪೊಣರ್ದು ಕಿರಿಯಾತಂ ಕಡವೂರಂ ತೆಗೆದುಕೊಳಲಿ ಪಿರಿಯಾನಿ ರಿಗೆ ಬಿ ಸಿ ಕಳುಪಲೆ ಚಿಕ್ಕಕಲ್ಲಪ್ಪನೆಂಬ ದಳವಾಯ ಸಂಗಡಂ ಸೈನಮಂ ಕೂಡಿಸಿ ಕಳುಸಲಾ ಚಿಕ್ಕ ಕುಮಾರಂ ಬೇಲೂರ ವೆಂಕ ಚಾದ್ರಿನಾಯಕರ್ಮ್ಮೇಸೂರವರ್ಚಿಕ್ಕನಾಯಕನಹಳ್ಳಿಯವರ್ಚಿ೦ತನಕಲ್ಲ ವರ್ಸೀರೆದ ರಂಗನಾಯಕರ್ಮ೦ತಾದವರ ಸೈನಮಂ ಬರಿಸಿಕೊಂಡು ಹೇರಳಬಲಮಂ ಮಾಡಿಕೊಂಡಿದಿರ್ಚಿ ನಿಂಲೆ, ಪಿರಿಯ ಕುಮಾರ ನಿತ್ತರಿಸಿ ನಿಲಶಕವಾಗಿ ಮತ್ತಮಿಕ್ಕೇರಿಗೆ ಬಿಸಿ ಕಳುಪಲಾಗಳಾ ವೆಂಕಟಪ್ಪನಾಯಕ ಸೈನ್ಯಸಹಿತಂ ಇಕ್ಕೇರಿಯಿಂ ತಾನೆ ತೆರಳ್ತರ ಲಾಗಳ ಏರಿಯು ಕುಮಾರನೆಂದು ಗಂಗೂರೆಡೆಯೋಳ್ಳಂಧಿಸಿ, ಸಿಮೊಗೆ ಗಾಜನೂರು ಲಕ್ಕುವಳ್ಳಿಯ ಸೀಮೆ ಕೊಂಟೆಗಳ ಕಾಣಿಕೆರೂಪಾ ಗಿತ್ತು ಮರೆವುಗಲಭಯವಿತ್ತು ತುಂಗಭದ್ರಾ ನದಿಯನುತ್ತರಿಸಲಾವಾ ರ್ತಯಂ ಕೇಳು ಕಿರಿಯ ಕುಮಾರನ ಸಹಾಯಕ್ಕೆ ಬಂದವರ್ಧೆ 1 ಶಿವೇಶ್ಚರದೊಳೆ (ಈ.)