ಪುಟ:Keladinrupa Vijayam.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

16 ಕೆಳದಿನೃಪವಿಜಯಂ ಅದೆಂತೆಂದೊಡಿಂತು ವಿರಾಜಿಸುತ್ತುವಿರ್ಪ ಭದಪಾಗಜನಪ್ಪ ಚೌಡಪನ ಸ್ವಪ್ನ ದೊಳೆ ಶ್ರೀಮತ್ಪರಮೇಶರಂ ಮನಂಗೊಳಿಪ್ಪ ವೃದ್ದ ಜಂಗಮಸ್ವರೂಪದಿಂ ಪ್ರಸನ್ನನಾಗಿ ಕೆಳದಿಪುರವರದೆಡೆಯೊಳಿ ಸೀಗೆ ವಳ್ಳಿ ಯೆಂಬ ತಾಣದೊಳೆ ತರುಗುಲ್ಕಂತಾಪ್ರತಾನಾವೃತವಾದ ಸೀಗೆ ವೆಳಯ ಮಧ್ಯದೊಳೆ ರಾಮೇಶ್ವರನೆಂಬ ಮಹಾಧಿವಲಿಂಗು ನೆಲೆಸಿರ್ಪು ದಾಲಿಂಗಂ ಬಹುಕಾಲಮಾರಭ್ಯ ವಕಾಚ್ಛಾದಿತವಾಗಿರ್ಪುದಲ್ಲಿ ತಲ್ಲಿಂ ಗವಿರ್ಪುದರ್ಕೆ ಕುರುಹೇನೆಂದೊಡೆ ನಿನ್ನ ಮನೆಯೊಳಸವ ಕಪಿಲೆವ ಣ ದ ಪಸು ಕರುವೆರಸುತಾಣವನೈದಿ ನಿಂದಾಪುತ್ತದ ಮೇಗಡೆಯೊಳ್ ಪ್ರತಿದಿನಂ ಪಲ್ಲರೆದು ಬರುತಿರ್ಪುದೆ ಕುರುಹಾಲಿಂಗಮಂ ಜನರ ಕಣ್ಣ ನಕ್ಕೆ ಗೋಚರವಪ್ಪಂತು ನಿಮಿರ್ಚಿಸಿ ತದ್ರಾಮೇಶ್ವರಲಿಂಗವುಂ ಸದ್ಯ ಕೈಯಿಂದರ್ಚಿಸಲೆ ನಿನಗಖಂಡಪ್ಪ ಶ್ರೀಪತಿಂ ಕೈಸಾರ್ವುದೆಂದುಸಿರ್ದಾ ಜಂಗಮಮೂರ್ತಿ ಯಂತರ್ಧಾನಮನೈದಲೆಳ ರ್ತು ಪರಮರ್ಪಮಿತ ನಾಗಿ ನಿಜಮಾತೃವಪ್ಪ ಬಸವಾಂಬಿಕೆಯೊಳಿಂತು ಕಂಡ ಸೃಷ್ಟ ವನುಸ್ಥಿ ರಲದಂ ಕೇಳ್ಳಿಂತು ಸೃಷ್ಟ ದೊಳೆ ನಿರೂಪಿಸಿ ಪೋದ ಜಂಗಮಮೂರ್ತಿ ಸಾಕ್ಷಾತ್ಪರಮೇಶ್ವರನೆಂಬುದೆ ನಿಶ್ಚಯವಾರಾಮೆರಲಿಂಗಕ್ಕೆ ಭಕ್ತಿ ಯೋಳಿ ನಡೆಕೊಂಡೊಡೆ ಮುಂದೆ ನಿನಗೆ ಮಹಾಭಿವೃದ್ಧಿಯುಂಟದರ್ಕೆ ಸಂದೆಗಮಿಲ್ಲೆಂದುಸಿರಂತಾ ಮಾತಂ ಕೇಳು ಮರುದೆವಸಂ ಬೇಡ ಚರರಂಕಾಕ್ಕಿ ನಿಜಮಂದಿರದೊಳಿರ್ಪ ಕಪಿಲೆವಣ ದ ಪಸುವಾಪ್ರತ್ಯ ದೆಡೆಗೈದಿ ಸುರಭಿಯಂ ಕರೆದು ಬರ್ಪುದಂ ಗೋರಕ್ಷಕರ ಮುಖದಿಂದರಿದಲ್ಲಿ ಗೈದಿ ಯಾಪುವನಗುಳಿನಿ ನೋಡಲದರೊಳೆ ಕಂಗೊಳಿಸುತಿರ್ಸ ಮಂಗಲ ಮೂರ್ತಿಯಪ್ಪ ಶ್ರೀರಾಮೇಶ್ವರಲಿಂಗಮಿರಲ್ಕಂಡು ವಿಸ್ಮಿತನಾಗಿ ಕರ ಸರೋಜಮಂ ಮುಗಿದು ಭಯಭರಿತಭಕ್ತಿಯಿಂ ಪೊಡಮಟ್ಟು ನುತಿಸಿ ಬಳಿಕಾತರುಗುಲ್ಮಲಾಪ್ರತಾನಸೀಕಾಕಂಜಂಗಳಂ ಸವ ರ್ದತಾಣಮಂ ಮನೋಹರವಪ್ಪಂತು ಸೈತುಗೊಳಿಸಿ ತತ್ಕಾಲೊ ಚಿತವಾದ ತೃಣಕುಟಿಯಂ ನಿರ್ಮಿಸಿ ನಿತ್ಯಮಾಲಿಂಗಕ್ಕಂ ಧೂಪದೀಪ ನೈವೇದ್ಯ ನಡೆವಂತು ಕಟ್ಟಲೆಯಂ ರಚಿಸಿ ಪ್ರತಿದಿನಂಗಳ್ಳಿ ತಾಂ