ಪುಟ:Keladinrupa Vijayam.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತಿಯಾಶ್ವಾಸಂ ನೃತ್ಯಣುಗರನೀಕ್ಷಿಸಿಪೊರೆ ಯುತ್ತಿಹುದೆಂದೊರೆದು ಕೂರ್ಮೆಯಿಂ ಬೀಳ್ಕೊಟ್ಟಂ || ಇಂತು ರಾಜಯೋಗ್ಯವಾಮಡುಗೊರೆಗಳನಿತ್ತು ಬೀಳ್ಕೊಡಲಿ ಸಂಕಣನಾಯಕ ಸಂತಸಂದಳದು ನಿಜಾನಾಸಮಂ ಸಾರ್ದು ಸುಖ ವಿರುತ್ತು ಮಿರಲೆಂದವಸರದೊಳ್ ರಾಮರಾಯರೊಲಗದೊಳ್ಳುಳ್ಳಿ ರ್ದೆಲ್ಲಾ ದುರ್ಗಂಗಳನ್ನಧೀನವಾದುವವಿದ್ದ ಕರ್ಣರಾಳುತ್ತಿರ್ಪ ಗೋ ವೆಯಗಡವೆಂದೇನಾದೊಡಂಸಾಧಮಾದುತಿಲ್ಲಂತಾದೊಡಮಾಗಡಮಂ ಸಾಧ್ಯಂಗೆಯ್ಸಿಳ್ಳೆಂದು ನಿಜನಿಯೋಗಿಜನರೊಳಾಳಚಿಸಿ ಪಿಂತೆಮ್ಮ ಸಂಸ್ಥಾನಕ್ಕೋದವಿದ ರಾಜಕಾರಂಗಳೊಳತಿಸಾಹಸಂಗೆಯು ಜನಕ ಜ್ಞಂಗಳನಾಗಿಸಿ ಪರಮಪ್ರಖ್ಯಾತಿಯಂಪಡೆದ ಸದಾಶಿವನಾಯಕನಾತ್ಮಜ ನಪ್ರಸಂಕಣನಾಯಕನೆ ತಂದಿರ್ಪನೀತನಮುಖದಿಂದಾದೊಡಮಾಕಾರ ಮಂಸಾಧಿಸಿಳ್ಳಂದು ಮನಂದಂದು ನಿಜಾನುಜನಪ್ಪ ವಿಟ್ಠಲರಾಯ ನನಾರಣಮುಖದ ಕಾರಕ್ಕೆ ಪ್ರಯಾಣವನೊಡರ್ಚಿಸಿ ಸಂಕಣನಾಯ ಕನಕರೆಸಿ ಸ್ಮಮನೋಭಿಪ್ರಾಯವನುಸಿರ್ದು 1 ಬೇಗದಿಂ ನಡೆದೆನ್ನು ಕಜ್ಜಮಂ ಶೇಖರಂಗೆಯುದೆಂದೆರೆದು ಸೇನಾಸಮಹಮಂ ಕೈವ ರ್ತಿಸಿಬೀಳ್ಕೊಡಲೊಡನಾಪ್ರಸ್ತಾವದೊಳೆ | ಶ್ರೀ ವಿಟ್ಠಲರಾಯರ ಕೂ ಡಾವಿಭುವನೈದಿ ದಾಳಿವರಿತಂಬುಧಿವ | ಧ್ಯಾವಂಭನವೆನಿಸಿದ ಗೋವೆಯ ಗಡಮಂ ಸಮೀಕದೊಳಾಧಿಸಿದಂ | ಇಂತು ಗೋವೆಯ ಗಡಮಂ ಕೊಂಡು ಮರಳಡನಾ ಸಂಕಣ ನಾಯಕಂ ರಾಯರಂ ಕಾಣಲತ್ಯಂತಪ್ರಮುದಿತಮಾನಸರಾಗಿ ಮಾಳನ ಹಳ್ಳಿ ಹೋಬಳಿಯನುಚಿತವಾಗಿತ್ತನಪ್ಪafರತ್ನಾಭರಣಾಂಬರತಾಂಬ ಲಮಂ ಭುಜಕೀರ್ತಿ ಮುಂತಾದಬಿರುದುಗಳುಮಂ ತತ್ಪುತ್ರರ್ಗುಚಿತ 1 ಬಿಗಿಯಂ, (ಒ, ಕ)