ಯಾರಿವನು - ಕಾವೇರಿ ಏಕೆ ಓಡುವೆ

ವಿಕಿಸೋರ್ಸ್ದಿಂದ

ಚಿತ್ರ: ಯಾರಿವನು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ:"ರಾಜನ್‌-ನಾಗೇಂದ್ರ"
ಗಾಯನ: ಡಾ. ರಾಜ್‍ಕುಮಾರ್


ಕಾವೇರಿ ಏಕೆ ಓಡುವೆ ನನ್ನಲ್ಲಿ ಪ್ರೀತಿ ಇಲ್ಲವೇ?

ಬಳಿ ಸೇರದೆ ಮಾತಾಡದೇ ಹೀಗೇಕೇ ನೋಡುವೆ? ||ಪಲ್ಲವಿ||
ನನ್ನಲೇಕೇ ಕೋಪವು, ನೀನೆ ನನ್ನಾ ಜೀವವು
ನಿನಗೊಂದು ಕಿವಿಮಾತು ಇದೆ ಬಾರೇ..

||ಪಲ್ಲವಿ||

ಬಿಸಿಲಲ್ಲಿ ಬಾಯಾರಿ ಓಡಿ ಬಂದೆನು

ನನ್ನ ದಾಹ ಮುಗಿದಾಗ ಜಾರಿಕೊಳುವೆನು
ದೇವಿ ಕನಿಕರಿಸು ಅರೆಕ್ಷಣ
ಬಲ್ಲೇ ನಿನ್ನ ಮನವನಾ

ನಿನ್ನ ಅಂದ ಇನ್ನೆಲ್ಲೂ ನಾನು ಕಾಣೆನು
ನಿನಗಾಗಿ ಈ ನನ್ನ ಜೀವ ಕೊಡುವೆನು

ನನ್ನಾ ಹೃದಯವನು ಅರಿಯೆಯಾ?
ನನ್ನಾ ಪ್ರೇಮ ಬಯೆಸೆಯಾ?

ಈ ಮೌನ ಸರಿಯಲ್ಲ ಬಳಿ ಬಾ ಬಾ ಬಾ

ನನ್ನಾಸೆ ನಿನಗೆ ಇಲ್ಲವೇ? ನಾ ನಿನ್ನ ನಲ್ಲನಲ್ಲವೇ
ನಿನಗಾಗಿಯೇ ನಾ ಬಾಳುವೆ, ಸಂದೇಹ ಬೇಡವೇ

ನೀ ಹೀಗೆ ಹೋದರೇ, ಇರುಳಲ್ಲಾ ತೊಂದರೆ
ಸುಖನಿದ್ರೆ ಬಳಿ ಬಾರೇ..

||ಪಲ್ಲವಿ||

ತಂಗಾಳಿ ಸೆರೆಗೆಳೆದು ಆಟಾವಾಡಲು
ಮೈ ಅಂದ ಕಂಡಾಗ ಕಣ್ಣು ಹಾಕಲು

ಏಕೆ ದುರದುರನೇ ನೋಡುವೇ? ನನ್ನಾ ಕಂಡು ಸಿಡುಕುವೇ?

ಕವಿಯಾಗಿ ನಿನಗೊಂದು ಕವಿತೆ ಹಾಡಲೇ?
ಋಷಿಯಾಗಿ ಬಳಿಯಲ್ಲೇ ಧ್ಯಾನ ಮಾಡಲೇ?
ಇಲ್ಲೇ ನದಿಯೊಳಗೆ ಮುಳುಗಲೇ?
ಹೇಳೇ ನನ್ನ ಚಂಚಲೆ

ನೋಡಿಲ್ಲಿ, ಯಾರಿಲ್ಲಾ, ಬಳಿಗೇ ಬಾ ಬಾ ಬಾ

||ಪಲ್ಲವಿ||

||ಪಲ್ಲವಿ||


ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ