ಭಾಮಿನಿ
ಧಾರಿಣೀಸುರರಗ್ರಹಾರವ । ಸೂರೆಗೊಳುತಿಹ ತಸ್ಕರರ ಯಮ । ನೂರ
ಹೊಂದಿಸಿ ಬಳಿಕ ರವಿಯುದಯದಲಿ ಫಲುಗುಣನು ॥ ಸಾರಿ ಗಂಗೆಯ ಮೇಲೆ
ಶೇಷ ಕು। ಮಾರಿ ಲೂಪಿಯನೊಲಿಸಿಯವಳಲಿ । ಚಾರು ಸುತನನು ಪಡೆದು
ಮುಂದಕೆ ತೆರಳನೊಲವಿನಲಿ ।। ೧।।
ರಾಗ ಕಾಂಭೋಜಿ ಝಂಪೆ ತಾಳ
ಪಾರ್ಥಿವಾಗ್ರಣಿ ಕೇಳು ಬಳಿಕಲಲ್ಲಲ್ಲಿರುವ । ತೀರ್ಥ ತೀರ್ಥ೦ಗಳೆಲ್ಲರಲಿ ।।
ಅರ್ತಿಯಲಿ ಮಿಂದು ತಾನಂದು ನೋಡಿದನು । ಪಾರ್ಥನುರೆ ಸೇತುಬಂಧ
ವನು ।।೧।। ಬಂದಲ್ಲಿ ರಘವರ್ಯನಿಂದ ರಚಿಸಿದ ಸೇತು । ಬಂಧವನು ಕಂಡು
ನಸುನಗುತ ।। ಮುಂದೆ ಸೂಕ್ಷ್ಮಾಕಾರದಿಂದ ತಪಿಸುವ ಅನಿಲ । ನಂದನನ ಕಂಡು
ಬೆಸಗೊಂಡ ।। ೨ ।। ಆರು ವನಚರ ನೀನು ಈ ರೀತಿಯಿಂದಬುಧಿ । ತೀರದಲ್ಲಿ
ನೆಲಸಿಕೊಂಡಿರುವ ।। ಕಾರಣವ ಹೇಳೆನುತ ವೀರಪಾರ್ಥನು ಕೇಳೆ । ಮಾರುತಾ
ತ್ಮಜ ನುಡಿದನಾಗ ।। ೩ ।। ಪ್ರಾಣರೂಪನೆನಿಪ್ಪ ವಾಯುವೇ ಜನಕ ನಾ । ಕ್ಷೀಣ
ಬಲ ಹನುಮನೆಂದೆನುತ ।। ಕೋಣಿಯಲಿ ಹೆಸರಾದುದೆನಗೆ ಕೇಳೆಸಲು ಸು ।
ತ್ರಾಣ ಪಾರ್ಥನು ನುಡಿದ ನಗಂತ ।। ೪ ।। ಹನುವ ನೀನೆಂದೆಂಬೆ ತನುವ
ನೋಡಿದಡೆ ಬಡ । ಜಣುಗಿನಂದದೊಳಿರುವೆಯೇಕೆ ।। ಘನತರದ ಕಾಯ
ಮಾತಂಗೆಂದು ಜನರುಸಿರ್ವ । ರೆನಲು ಮಾರುತಿಯೆಂದನದಕೆ ।। ೫ ।।
ರಾಗ ಘಂಟಾರವ ಅಷ್ಟತಾಳ
ಕೇಳಯ್ಯ ನಮ್ಮ ತನು ಬಡವಾದುದ । ಪೇಳಲೇನದ ಹಿಂದೆ ಶರಧಿಗೆ ।
ನೀಲಸೇತುವ ಕಟ್ಟಲು ।। ೧ ।। ತಾಳಿ ಪರ್ವತ ಪೊತ್ತು ಕಲ್ಮರಗಳ । ಸ್ಕೂಲ
ದೇಹವು ಸುರುಟಿದುದು ಕೈ | ಕಾಲುಗಳು ಒಳಸರಿದವು ।। ೨ । ಎಂದ
ಮಾತನು ಕೇಳಿ ಪಾರ್ಥನಂ ।। ಮಂದಹಾಸದಿ ನುಡಿದನಾಗಲೆ । ಗಂಧವಾಹಾತ್ಮ
ಜನೊಳು ।। ೩ ।।