ಪುಟ:ಕಥಾ ಸಂಗ್ರಹ - ಭಾಗ ೨.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೪ ತಯ ಭಾಗ ಆಗ ಭೂಮ್ಯಾಕಾಶಗಳಲ್ಲಿ ಭಯಂಕರವಾದ ಉತ್ಪಾತಗಳಾದುವ, ಇಂದ್ರಾದಿದೇವ ತೆಗಳೆಲ್ಲಾ ಗಡಗಡನೆ ನಡುಗಿದರು, ಮೇಘಗಳು ರಕ್ತವೃಷ್ಟಿಯನ್ನು ಸುರಿಸಿದುವು. ನಕ್ಷತ್ರಗಳು ಭೂಮಿಗೆ ಉದುರಿದುವು. ಇಂದ್ರಧನುಸ್ಸು ಮಾಡಿ ಆಕಾಶದಲ್ಲಿ ಕವಿ ಯಿತು, ಆ ಮೇಲೆ ವಿಶ್ರವಸ್ಸು ಅನ್ಯರ್ಥವಾಗಿ ಆ ಶಿಶುವಿಗೆ ದಶಮುಖನೆಂದು ನಾಮ ಧೇಯವನ್ನಿಟ್ಟನು. ಅನಂತರದಲ್ಲಿ ಮತ್ತೂ ಕೆಲವು ದಿನಗಳು ಗತಿಸಲು ; ಈ ಲೋಕ ಗಳನ್ನೆಲ್ಲಾ ಒಂದೇ ತುತ್ತು ಮಾಡಿ ನುಂಗುವ ದ್ವಿತೀಯ ಯಮನಂತಿರುವ ಕರಾಳಾ ಕಾರನಾದ ಮತ್ತೊಬ್ಬ ಮಗನನ್ನು ಕೈಕಸೆಯು ಹೆತ್ತಳು, ಅವನ ಕಿವಿಗಳು ಬಾನೆಗ ಆಗಿಂತ ದೊಡ್ಡವುಗಳಾಗಿದ್ದುದರಿಂದ ಅವನ ತಂದೆಯು ಅವನನ್ನು ಕುಂಭಕರ್ಣನೆಂದು ಕರೆದನು, ಮತ್ತು ಕೆಲವು ದಿವಸಗಳು ಕಳೆದ ಮೇಲೆ ಆ ಕೈಕಸೆಯು ಸೌಮ್ಯಾ ಕಾರವೂ ಹುಣ್ಣಿಮೆಯ ಚಂದ್ರನಂತೆ ಮುಖವೂ ಕಮಲದೆಸಳುಗಳಂತಿರುವ ಕಣ್ಣಳೂ ವಿಸ್ತಾರ ವಾದ ವಕ್ಷಸ್ಥಲವೂ ತೋರವಾದ ತಲೆಯ ನೀಳವಾದ ತೋಳುಗಳೂ ಆನೆಗಳ ಸೊಂಡಿಲುಗಳಂತಿರುವ ತೊಡೆಗಳೂ ಉಳ್ಳವನಾಗಿ ಸೂರ್ಯನಂತೆ ತೇಜಸ್ಸಿನಿಂದ ಪ್ರಕಾಶಿಸುತ್ತಿರುವವನಾದ ಇನ್ನೊಬ್ಬ ಸುಕುಮಾರನನ್ನು ಹೆತ್ತಳು. ಆ ಮುನಿಯು ಆ ಮಗನನ್ನು ನೋಡಿ ಬಹಳವಾಗಿ ಸಂತೋಷಿಸಿ ಅವನಿಗೆ ವಿಭೀಷಣನೆಂದು ನಾಮ ವ೩೬ನು, ಮತ್ತು ಕೆಲವು ದಿನಗಳು ಗತಿಸಿದ ಮೇಲೆ ಮೊರದೋಪಾದಿಯಲ್ಲಿ ಉಗುರುಗಳುಳ್ಳವಳೂ ವಿಕಾರವಾದ ಒಡಲುಳ್ಳವಳೂ ಆದ ಒಬ್ಬ ಮಗಳನ್ನು ಹೆತ್ತಳು, ಮುನಿಯು ಅವಳಿಗೆ ಶೂರ್ಪನಖಿ ಎಂದು ಹೆಸರಿಟ್ಟನು.” ಈ ನಾಲ್ಕು ಮಂದಿಗಳಲ್ಲಿ ದಶಮುಖ ಕುಂಭಕರ್ಣರೆಂಬವರೇ ಮೊದಲು ವೈಕುಂಠದ್ವಾರಪಾಲಕ ರಾಗಿದ್ದು ಮುನಿಶಾಪದಿಂದ ಎರಡನೆಯ ಜನ್ಮದಲ್ಲಿರುವ ಜಯವಿಜಯರು. ಅನಂತರದಲ್ಲಿ ಆ ಮುನಿಯು ಮೂರು ಮಂದಿ ಮಕ್ಕಳಿಗೂ ಚೌಲೋಪನಯ ನಾದಿ ಕರ್ಮಗಳನ್ನು ವಿಧ್ಯನುಸಾರವಾಗಿ ಮಾಡಿಸಿದನು, ಹಿರಿಯ ಮಗನಾದ ದಶಾ ನನನಿಗೆ ಲೋಕದ ಜನರಿಗೆ ತೊಂದರೆಯನ್ನೂ ಸಂಕಟವನ್ನೂ ಕೊಡುವುದೇ ಬಲುಗೆಲ ಸವಾಗಿದ್ದಿತ್ತು. ಎರಡನೆಯವನಾದ ಕುಂಭಕರ್ಣನಿಗೆ ಸಿಕ್ಕಿದ ಜನರನ್ನು ಹಿಡಿದು ಭಕ್ತಿ ಸುವುದೇ ಮುಖ್ಯೋದ್ಯೋಗವಾಗಿದ್ದಿತ್ತು, ವೇದಶಾಸ್ಕಾಗಮಾದಿಗಳ ವಿನೋದವು ವಿಭೀಷಣನ ಕೃತ್ಯವಾಯಿತು. ಹೀಗಿರಲು ಮತ್ತೊಂದು ದಿವಸ ಪಿತೃ ದರ್ಶನಾರ್ಥ ವಾಗಿ ಲಂಕಾನಗರದಿಂದ ಬಂದು ಹೋಗುತ್ತಿದ್ದ ವೈಶ್ರವಣನನ್ನು ನೋಡಿದ ಕೈಕ ಸೆಯು ತನ್ನ ಹಿರಿಯ ಮಗನನ್ನು ಕರೆದು--ಎಲೈ ದಶವದನನೇ ! ಬ್ರಹ್ಮಕುಲಸಂಜಾ ತನಾದುದಕ್ಕೆ ಈ ಕುಬೇರನಂತೆ ಪೂರ್ಣೆಶ್ವರ್ಯಸಂಪನ್ನನಾದರೆ ಸಾಫಲ್ಯವು. ಹಾಗಾಗದಿದ್ದರೆ ಯಲಹದ ಮರವು ಕಾಯಿಬಿಟ್ಟಂತಾಗುವುದು ಎನಲು ; ಆಗ ದಶ ಮುಖನು-ಎಲೈ ತಾಯಿಯೇ, ನಾನು ಹೆಚ್ಚಾಗಿ ಮಾತಾಡಿದರೆ ನನ್ನನ್ನು ಗಳಹು ತವನೆನ್ನು ವಿರಿ, ನಾನು ನಿಮ್ಮ ದಯೆಯಿಂದ ಇನ್ನು ಮೇಲೆ ತಪಸ್ಸನ್ನು ಮಾಡುವುದಕ್ಕೆ ಆರಂಭಿಸುವೆನು, ಅದರಿಂದ ನಮ್ಮ ಮುತ್ತಜ್ಜನಾದ ಬ್ರಹ್ಮದೇವರನ್ನು ಮೆಚ್ಚಿಸಿ ಬಹು ವಿಧವಾದ ವರಗಳನ್ನು ಪಡೆದು ನಮ್ಮಣ್ಣನಾದ ಈ ಕುಬೇರನ ಭಾಗ್ಯಕ್ಕಿಂತಲೂ