ಪುಟ:ಕನ್ನಡದ ಬಾವುಟ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜೈನರಾದ ಪೂಜ್ಯಪಾದ ಕೊಂಡಕುಂದವರ್ಯರ, ಮಧ್ವಯತಿಯೆ ಬಸವಪತಿಯೆ ಮುಖ್ಯಮತಾಚಾರ್ಯರ, ಶರ್ವ ಪಂಪ ರನ್ನರ, ಲಕ್ಷ್ಮಿಪತಿ ಜನ್ನ ರ, ಷಡಕ್ಷರಿ ಮುದ್ದಣ್ಣರ, ಪುರಂದರವರೇಣ್ಯರ ತಾಯೆ, ನಿನ್ನ ಬಸಿರೆ ಹೊನ್ನ ಗನಿ ವಿದ್ಯಾರಣ್ಯರ ! ಹಳೆಯಬೀಡ ಬೇಲನಾಡ ಮಾಡಮೆನಿತೊ ಸುಂದರಂ ! ಬಿಳಿಯ ಕೊಳದ ಕಾರಕಳದ ನಿಡುಕರೆನಿತೊ ಬಂಧುರಂ! ಇಲ್ಲಿಲ್ಲದ ಶಿಲ್ಪ ಮಿಲ್ಲ ; ನಿನ್ನ ಕಲೆ ನುಡಿವುದಲ್ಲ ! ಹಿಂಗತೆಯಿನಿವಾಲ ಸೊಲ್ಲ ನಮ್ಮ ತೃಷೆಗೆ ದಕ್ಕಿಸುಹೊಸತು ಕಿನ್ನ ರಿಯಲಿ ನಿನ್ನ ಹಳೆಯ ಹಾಡನುಕ್ಕಿಸು ! ಆರ್ಯರಿಲ್ಲಿ ಬಾರದಲ್ಲಿ ಬಾಸೆ ಎಲ್ಲಿ ಸಕ್ಕದಂ? ನಿನ್ನ ನುಡಿಯಿನಚ್ಚುಪಡಿಯನಾಂತರೆನಿತೊ ತಕ್ಕುದಂ ! ಎನಿತೊ ಹಳೆಯ ಕಾಲದಿಂದ ಬರ್ದಿಲಮೀ ಬಾಸೆಯಿಂದ ಕಾಲನ ಮೂದಲಿಸಿ ನಿಂದ ನಿನಗೆ ಮರವೆ ಹೊದೆವುದೆ ? ನಿನ್ನ ನುಡಿಗೆ ನಿನ್ನ ನಡೆಗೆ ಮುದುಪುಮೆಂದುಮೊದೆವುದೆ ? ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ! ಕನ್ನಡ ಕಸ್ತೂರಿಯನ್ನ ಹೊಸತುಸಿರಿಂ ತೀಡದನ್ನ ಸುರಭಿ ಎಲ್ಲಿ ? ನೀನದನ್ನ ನವಶಕ್ತಿಯನೆಬ್ಬಿಸು~ ಹೊಸ ಸುಗಂಧದೊಸಗೆಯಿಂದ ಜಗದಿ ಹಸುರ ಹಬ್ಬಿಸು !