ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಶತಮಾನ]      ಮಗ್ಗೆಯ ಮಾಯಿದೇವ.
ರ್ಜಲಮಂ ಮಾಡಿ ವಿಮೋಹದಿಂದಕಟ ಪುಣ್ಯಕ್ಕೋಸುಗಂ ಪಾಪಮಂ| 
ವಿಲಸದ್ಭಕ್ತಿವಿಶುದ್ದಿ ಹೀನಭವಿಗಳ ಮಾಟ್ಸರ್ ಶಿವಾವಲ್ಲಭಾ || 
ಮೊದಲಿಲ್ಲೆಂದೆಲೆ ಕರ್ಮಮಂ ಬಡುದೆ ಮತ್ತುಂಟೆಂದು ಮತ್ತ೦ತದ | 
ಕ್ಕಿದುಪಾಯಂ ಪರಿಹಾರಮೆಂದು ಬಡುದೊಂದಂ ಮಾಡಿ ಮತ್ತಾಗಳಂ|| 
ತದು ಹೋಯಿತ್ತು ವಿಮುಕ್ತರೆಂದು ಬಡುದೇ ತಮ್ಮಲ್ಲಿ ತಾವೇ ಎಮೋ| 
ಹದ ಸಂಕಲ್ಪದ ಕರ್ಮಿಗಳ್ ಗಟಿಹುವ‌ರ್ ನೋಡಾ ಶಿವಾವಲ್ಲಭಾ || 
ಪರೆಯೇ ಮಾನಸಭಕ್ತಿ ಚಾಕ್ಷುಷಪದಂ ಪಶ್ಯಂತಿಯೇ ವಾಚಿಕ | 
ಸ್ಫರಣಂ ಮಧ್ಯಮೆಯೇ ಗುರೂಕ್ತಿಮತದಿಂ ಸತ್ಕಾಯಿಕಂ ಭಕ್ತಿ ಮೈ || 
ಖರಿಯೇ ನೋಟ್ಟೂಡದಿಂತು ನಾಲ್ಕುತೆಚಿನಾಗಿರ್ಕು೦ ಮನಶ್ಚಕ್ಷುರು | 
ತ್ತರವಾಕ್ಕಾಯಚತುರ್ವಿಧಪ್ರಣಿಧಿಯೊಳ್ ತಾನೇ ಶಿವಾವಲ್ಲಭಾ ||
             ಐವುರೀಶ್ವರಶತಕ
ಇದರಲ್ಲಿ 113 ವೃತ್ತಗಳಿವೆ; ಪ್ರತಿಪದ್ಯವೂ ಮಹದೈಪುರೀಶ್ವರಾ ಎಂದು ಮುಗಿಯುತ್ತದೆ. ಆರಂಭದಲ್ಲಿ ಐಪುರೀಶ್ವರಸ್ತುತಿ ಇದೆ.  ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ._
ಅಂದಪೆನೆಂಬವಂಗಅರಿಯಬಾರದು ನಿನ್ನ ನಿಜಪ್ರಯತ್ನದಿಂ | 
ದಡುದಪೆನೆನ್ನದಂಗಡಯಬರ್ಪುದು ನೀಂ ಕೃಪೆಮಾಡೆ ಹೋದ್ಯಮೇ || 
ನಲಸುವವಂಗೆ ಸಿಲ್ಕದು ನಿಧಾನಮಯತ್ನಪರಂಗೆ ಭಾಗ್ಯದಿಂ | 
ದಲಸದೆ ಸಿಲ್ಕುವಂತೆ ಪರಮಪ್ರಭುವೇ ಮಹದೈಪುರೀಶ್ವರಾ || 
ಕ್ಷೀರಸಮುದ್ರಸನ್ನಿಧಿಯೊಳಿರ್ದು ಪಿಪಾಸಿತನಾಗಿ ಭೂಮಿಯಂ | 
ಹಾರೆಯನಾಂತಗುಲ್ವಿವನೊಲಾಯ್ತು ಸಮಸ್ತಸುಬೈಕಸಿದ್ಧಿವಿ || 
ಸ್ತಾರಕನಪ್ಪ ನಿನ್ನನುಪದಾವಿಸದಸ್ಯ ಮನುಷ್ಯ ಮಾತ್ರವಂ |  
ಹಾರುವ ಬುದ್ಧಿಯೆನ್ನ ಪರಮಪ್ರಭುವೇ ಮಹದೈಪುರೀಶ್ವರಾ || 
ತನ್ನ ಸತೀಸುತಾನುಚರಬಂಧುಜನಂಗಳುಮಿನ್ನು ಮತ್ತೆ ಮಿ | 
ಕ್ಕನ್ಯರುಮಾತ್ಮದೇಹಕರಣಾದಿಗಳುಂ ಸಲೆ ತಾನುಮೆಲ್ಲರುಂ || 
ನಿನ್ನವರೆಂದು ನಿನ್ನೊಡವೆಯೆಂದು ನಿಜೇಶ್ವರಪೂಜೆಗೆಯ್ಯವಂ |
ಧನ್ಯನದೀಗ ಪೂಜೆ ಪರಮಪ್ರಭುವೇ ಮಹದೈಪುರೀಶ್ವರಾ || 
 ಇವನ ಇತರಗ್ರಂಥಗಳು ನಮಗೆ ದೊರೆತಿಲ್ಲ. 10