ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

170 ಕರ್ಣಾಟಕ ಕವಿಚರಿತೆ [15ನೆಯ

ಸೌರಾಷ್ಟ್ರ೦ ಸೋಮನಾಧಂ ಪ್ರಭು ಗಿರಿಶಪದಕ್ಷೇಪಿತಂ ಚಿತ್ತಭಕ್ತಿ | 
ಶ್ರೀರಾಮಂ ಗುಮ್ಮಟಾರ್ಯ೦ ವಿರಚಿತವೆನಿಪರ್ಧೆ೦ದುಳಿಸ್ತ್ರವಾಖ್ಯಂ || 
ಎಂಬ ಅಶುದ್ಧವಾದ ಭಾಗದಿಂದ ತಿಳಿಯುತ್ತದೆ. ಇದರಿಂದ ಕವಿ 
ಸೌರಾಷ್ಟ್ರದ ಸೋಮನಾಥನ ಭಕ್ತನೆಂದು ತೋರುತ್ತದೆ. ಗುಮ್ಮಟಾರ್ಯ
ಎಂಬ ಹೆಸರಿದ್ದರೂ ಜೈನಕವಿಯಲ್ಲವೆಂದು ತಿಳಿಯಬಹುದಾಗಿದೆ. ಇವನ  
ಕಾಲವು ಸುಮಾರು 1500 ಆಗಿರಬಹುದೆಂದು ಊಹಿಸುತ್ತೇವೆ.
    ಇವನ ಗ್ರಂಥ |
                      ಅರ್ಧೇ೦ದುಮೊಳಿಶತಕ
                 ಇದು 108 ವೃತ್ತಗಳನ್ನು ಒಳಗೊಂಡಿದೆ ; ಕೆಲವು ಪದ್ಯಗಳು ಅ ರ್ಧೆ೦ದುಮೌಳಿ ಎಂದೂ ಕೆಲವು ಅತ್ಯಂತಶುದ್ಧ ಎಂದೂ ಮುಗಿಯುತ್ತವೆ. 

ಗ್ರಂಥವು ಭಕ್ತಿವೈರಾಗ್ಯಗಳನ್ನು ಬೋಧಿಸುತ್ತದೆ ; ಶೈವಾಗಮೋಕ್ತಂ, ಶಮದಮುನಿಯತಾರ್ಥಪ್ರದಂ ಎಂದು ಕವಿ ಇದನ್ನು ವಿಶೇಷಿಸಿ ಹೇಳಿದ್ದಾನೆ. ಇದರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ_

ಮಸಿಯಂ ಪಾಲಿಂದೆ ಕರ್ಚಲ್ ಬಿಳಿದೆನಿಕುಮೆ ಕಲ್ ನೀರೊಳೆಂತಿರ್ದೊಡಂ ಮೆ |
ಲ್ಪ ಸಮಂತೇನಕ್ಕು ಮೇ ಕಂಬಿಯೊಳವಸಿ ಚಿರಂ ಕಟ್ಟಿರಲ್ ನಾಯ ಬಾಲಂ ||
ಸಸಿನಂ ತಾನಕ್ಕುಮೇ ದುರ್ಗುಣದೊಳನುದಿನಂ ಮೆಚ್ಚುವಟ್ಟಿರ್ದನಂ ಮಾ |
ಣಿಸಲೆನ್ನಂ ಬರ್ಕುಮೇ ಸದ್ವಚನಶತದೊಳಂ ನೋಟ್ಟೂಡತ್ಯಂತಶುದ್ಧಾ ||
ಆಸತ್ತುಂ ನಿದ್ರೆಗೆಯು೦ ಪಸಿದುಮಲಸಿಯುಂ ದುಃಖದೊಳ್ ಚಿಂತಿಸುತ್ತುಂ |
ಬೇಸತ್ತುಂ ಸರ್ವರೋಗಗ್ರಹಭಯಚಕಿತಾವಸ್ಥೆಯೊಳ್ ಕೂಡಿದಂದುಂ || 
ಕೂಸಾಗಿರ್ದಂದು ಮಾಯಾವ್ಯಸನಭರದೊಳಂ ಮುತ್ತೊಡಂ ನಿಮ್ಮಶತ್ವಾ |
ಭ್ಯಾಸ೦ ಮುಚಿತ್ತದೊಳ್ ಸಂಕ್ರಮಿಸುಗೆಯೆನಗೆಂದೆಂದುಮರ್ಧೇಂದುಮಳೀ ||           ಆನಾರ್ಗೆನಪ್ಪೆನೆಲ್ಲಿಂದೊದೆದೆನೆನಗೆ ನಂಟರ್ಕಳಾರೆನ್ನ ಪೋಪ | 

ಸ್ಥಾನಂ ತಾನಾವುದೆನ್ನಂ ಪಿಡಿದು ತಿರಿಪತಿರ್ದಸ್ಪರಾರೆನ್ನ ಜನ್ಮಂ || ತಾನೇತಕ್ಕಾದುದೆಂದಿಂತಿದ ಮೊದಲ ಬೇರಾವುದೇನೆಂದು ತನ್ನಿಂ | ತಾನೇ ನಿಶ್ಚಸಿ ತನ್ನಂ ತಿಳಿಯೆ ನಿಜಪದಂ ತೋರ್ಪದತ್ಯಂತಶುದ್ಧಾ|| ಅಳೆಪಾರಾರಾಯುಮಂ ಕಂಧಿಸದು ಕದಡದಾರಾರ ಗುಣ್ಪುಳ್ಳ ಧೈಯ್ಯಂ | ಗಳನಾರಾರೊಳ್ಳನಳ್ಳೆಸದು ಮಸುಳಿಸದಾರಾರ ಪೆರ್ಚಿರ್ದ ತೇಜಂ ||