ಪುಟ:ಚಂದ್ರಮತಿ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆರನೆಯ ಪ್ರಕರಣ & ಸಂಸಾರಸ೦ಬ೦ಧಗಳಾದ ಕೆಲವು ವಿಷಯಗಳನ್ನು ನಿರ್ವಹಿಸುವುದಕ್ಕೂ ಯುಕ್ತಗಳಾಗಿರುವುವು. ಇನ್ನು ಆತ್ಮಶುದ್ದಿಯೆಂದರೇನೋ ಅದನ್ನೂ ದಯೆಯಿಟ್ಟು ತಿಳಿಸಿರಿ. ಗುರು-ಆತ್ಮಕ್ಕೆ ದುಃಖವನ್ನುಂಟುಮಾಡತಕ್ಕ ದುರ್ಗುಣಗಳಾವುವೂ ಇಲ್ಲದಿರುವ ಕಾಲದಲ್ಲಿ ಅದು ಪರಿಶುದ್ದವಾದ ದಶೆಯಲ್ಲಿರುವುದು. ಶರೀ ರಕ್ಕೆ ರೋಗಕಾರಣಗಳಾದ ಅಪಥ್ಯ ಪದಾರ್ಥಗಳು ಹೇಗೋ ಆತ್ಮಕ್ಕೆ ಈ ದುರ್ಗುಣಗಳೂ ಹಾಗೆಯೇ. ಆರೋಗ್ಯಕರಗಳಾದ ಪಥ್ಯ ಪದಾರ್ಥಗಳಂತೆ ಯೇ ಸುಗುಣಗಳು ಆತ್ಮಕ್ಕೆ ಆವಶ್ಯಕವಾದುವುಗಳು. ಯಾವಾಗಲೂ ಸುಗುಣಗಳು ಸಂತೋಷವನ್ನೂ ದುರ್ಗುಣಗಳು ದುಃಖವನ್ನೂ ಉಂಟು ಮಾಡುವುವು. ಸತ್ಯ, ಶಾಂತತ್ವ, ಧೈರ್ಯ, ವಿನಯ, ದಯೆ, ತೃಪ್ತಿ ಮೊದಲಾದುವು ಆತ್ಮಾನಂದವನ್ನುಂಟುಮಾಡತಕ್ಕ ಸುಗುಣಗಳು. ಇವು ಗಳಿಗೆ ವ್ಯತಿರಿಕ್ತಗಳಾಗಿರುವ, ಅನೃತ, ಕೋಪ, ಅಹಂಕಾರ, ಕ್ರೂರತ್ವ, ಆಶೆ ಮೊದಲಾದುವುಗಳು ಆತ್ಮಕ್ಕೆ ಆಯಾಸವನ್ನುಂಟುಮಾಡತಕ್ಕ ದುರ್ಗುಣಗಳು. ಚ೦ದ್ರ-ಈಗ ನೀವು ತಿಳಿಸಿದ ಸುಗುಣದುರ್ಗುಣಗಳ ವಿಷಯದಲ್ಲಿ ಮತ್ತೇನಾದರೂ ಹೇಳತಕ್ಕುದಿರುವುದೇ ! ಗುರು-ಇವೆಲ್ಲವೂ ಇತರರ ವಿಷಯವಾಗಿ ನಾವು ನಡೆದುಕೊಳ್ಳ ಬೇಕಾದ ಧರ್ಮಗಳಲ್ಲಿ ಸೇರುವುವು. ಈಗ ಅವುಗಳ ವಿಷಯದಲ್ಲಿ ಸ್ವಲ್ಪ ತಿಳಿಸುವೆನು. ಸಮಸ್ತ ಶುಭಗಳಿಗೂ ಸತ್ಯವೇ ಮೂಲವಾದುದು; ನಾವು ಪ್ರಾಣಾಂತಕರವಾದ ವಿಪತ್ತು ಸಂಭವಿಸಿದಾಗಲೂ ಸತ್ಯವನ್ನು ತಪ್ಪಬಾರದು; ಸರ್ವಧನವೂ ನಾಶವಾಗಿ ಹೋಗುವಂತಹ ಕಾಲದಲ್ಲಿ ಯಾದರೂ ನಿಶ್ಚಯ ವನ್ನೇ ಹೇಳಬೇಕು. ಸುಳ್ಳಾಡಿದರೆ ಪರಲೋಕಹಾನಿಯುಂಟಾಗುವು ದೊಂದಲ್ಲದೆ, ನಾವು ಅಸತ್ಯವನ್ನಾಡಿದೆವೆಂದು ಇಹಲೋಕದಲ್ಲಿರುವವರೂ ನಮ್ಮಲ್ಲಿ ವಿಶ್ವಾಸವನ್ನಿಡದಿರುವರು. ಚಂದ್ರ-ನಾವು ಯಾವ ವಿಷಯದಲ್ಲಿಯೂ ಅನ್ನ ತವನ್ನಾಡಲೇ ಬಾರದೇ ?