ಪುಟ:ಚಂದ್ರಮತಿ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೬ ಚ೦ದ್ರಮತಿ, - -- - - - ಗುರು--ಆಡಲೇಬಾರದು. ಅಸತ್ಯಕ್ಕೆ ನಾವು ಒಂದುವಿಷಯದಲ್ಲಿ ಅವಕಾಶವನ್ನು ಕೊಟ್ಟರೆ, ಮತ್ತೊಂದು ವಿಷಯದಲ್ಲಿಯೂ ಹಾಗೆಯೇ ಅಸತ್ಯವನ್ನಾಡಬೇಕೆಂಬ ಬುದ್ದಿಯು ಹುಟ್ಟಿ ಕ್ರಮಕ್ರಮವಾಗಿ ನಾವು ಅಸ ತ್ಯಕ್ಕೆ ತವರ್ಮನೆಯಾಗಿ ದುರ್ಗತಿಯನ್ನು ಹೊಂದುವೆವು. ಚ೦ದ್ರ- ಈಗ ನೀವು ಸತ್ಯದ ವಿಷಯದಲ್ಲಿ ಹೇಳಿದುದನ್ನು ಪರಿಶೀಲಿ ಸಿದರೆ, ನಾವು ಯಾವಾಗಲೂ ಶಾಂತತ್ವ ಮೊದಲಾದ ಗುಣಗಳನ್ನೇ ಹೊ೦ ದಿರಬೇಕೆಂದೂ, ಕೋಪಾದಿಗಳಿಗೆ ಯಾವಾಗಲೂ ಅವಕಾಶವನ್ನು ಕೊಡ ಲಾಗದೆಂದೂ ತೋರುವುದು ಗುರು-ಅನ್ನತ, ಅಹಂಕಾರ, ಕೂರತ್ಯ ಮೊದಲಾದುವುಗಳನ್ನು ಕೈಲಾದಷ್ಟು ಮಟ್ಟಿಗೆ ಯಾವಾಗಲೂ ನಾವು ದೂರೀಕರಿಸಿರಬೇಕಾದರೂ ಆಗಾಗ ಒ೦ದೊ೦ದುಬಾರಿ ಯುಕ್ತರೀತಿಯಲ್ಲಿ ಕೋವ ಮೊದಲಾದ ಕೆಲ ವನ್ನು ತೋರಿಸುತ್ತಿರಬೇಕು. ಒಬ್ಬ ಸೇವಕನಾಗಲಿ, ಬಾಲಕನಾಗಲಿ, ತಪ್ಪು ಮಾಡಿದಾಗ ಅವನಮೇಲೆ ನಾವು ಕೋನವನ್ನು ತೋರಿಸದಿದ್ದರೆ ಅವನ ನಡೆಯು ಕೆಟ್ಟು ಹೋಗಿ ಅವನು ದುರ್ಮಾರ್ಗಪ್ರವರ್ತಕನಾಗುವನು ಆದುದರಿಂದ ಕ್ರೂರೋದ್ದೇಶವಾವುದೂ ಇಲ್ಲದೆ ಪರರಿಗೆ ಮೇಯುಂಟಾ ಗುವುದಕ್ಕೋಸುಗ ತಕ್ಕಮಟ್ಟಿಗೆ ಯುಕ್ತ ಕಾಲಗಳಲ್ಲಿ ನಾವು ಕೋಪವನ್ನು ಮಾಡಬೇಕು. ಅದರಂತೆಯೇ ನಾವು ನ್ಯಾಯವಾದ ಸಕಲ ಮನೋರಥ ಗಳನ್ನೂ ಅಪೇಕ್ಷಿಸಬಹುದು. ಅತ್ಯಾಶೆಯನ್ನು ಮಾತ್ರ ತ್ಯಜಿಸಬೇಕು. ಚ೦ದ್ರ-ಉಳಿದ ಸುಗುಣಗಳನ್ನು ಕುರಿತು ತಿಳಿಸಬೇಕಾದುದೇನಾ ದರೂ ಇರುವ ಪಕ್ಷದಲ್ಲಿ ನನ್ನಲ್ಲಿ ಅನುಗ್ರಹವಿಟ್ಟು ಅದನ್ನೂ ತಿಳಿಸಬೇಕು. ಗುರು-ವಿಸ್ತಾರವಾಗಿ ತಿಳಿಸಬೇಕಾದುದಾವುದೂ ಇಲ್ಲ. ಶಾಂತತೆ ಯೊಂದಿದ್ದರೆ ನಮ್ಮ ಇತರ ಸುಗುಣಗಳೆಲ್ಲ ಮತ್ತಷ್ಟು ಪ್ರಕಾಶವನ್ನು ಹೊಂ ದುವುವು. ನೃತ್ಯರೂ, ನೆರೆಹೊರೆಯವರೂ, ಮನೆಯವರೂ ನಮ್ಮ ವಿಷಯ ದಲ್ಲಿ ಅಧಿಕಾನುರಾಗವುಳ್ಳವರಾಗುವರು. ಆಪತ್ಕಾಲಗಳಲ್ಲಿ ನಾವು ಮುಖ್ಯ ವಾಗಿ ಧೈರ್ಯವನ್ನವಲಂಬಿಸಿರಬೇಕು. ಅಂತಹ ಧೈರ್ಯವನ್ನು ಕಳೆದು ಕೊಂಡರೆ, ಅದರಿಂದ ನಮಗೆ ಯಾವಲಾಭವೂ ಉಂಟಾಗದಿದ್ದರೂ, ವಿಪತ್ತುಗಳು ಇಮ್ಮಡಿಯಾಗಿ ತೋರಿ ಅಧಿಕ ದುಃಖವನ್ನುಂಟುಮಾಡುವುವು ;