ಪುಟ:ನನ್ನ ಸಂಸಾರ.djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀ ಸಂಗ್ರಹ

              ಮುರಿದು, ಸುರರಿಗೆ ಕಳೆಯಯಜ್ಞದ| ವರಪುರೋಡಾಶವನು ವಿಬುಧರು| 
             ಪಿರಿದು ಚಿಂತಿಸಿ ಬಿದಿಯ ಸವಿಯಕೆ ಸಾರಿಬೇಗದಲಿ||
               ದುರುಳರಾಕ್ಷಸ ಚೇಷ್ಟೆಯೆಲ್ಲವ| ನೊರೆದು ಲೋಕೇಶಾಜ್ಞೆಯಿಂದಲಿ| 
                     ವರವಿನಾಯಕನಿಷ್ಟದಾತನ ನವರುತುತಿಸಿದರು           || ೨ || 
                 ಮೂರು ಮೂರ್ತಿಯನೊಂದಿಯೆಲ್ಲ ಕೆ ಕಾರಣಂಗಡ; ಪಂಚಭೂತದ| 
                      ಸೂರಚಂದ್ರರ ಋಕ್ಷಗಣಗಳಪತ್ತು ದಿಕ್ಕುಗಳ ||
              ಫೋರರಾಕ್ಷಸ ಗುಹ್ಯ ಕರ್ಕಳ ಧಾರುಣಿಯೊಳಿಹ ಮರ್ತ್ಯಪಶುಗಳ| 
                  ವಾರಕುತ್ಪತ್ತಿಸ್ಥಿತಿಲಯಕ್ಕೆ ನೀನು ಕಾರಣನು                  ||೩|| 
            ತ್ರಿಗುಣರೂಪವೆ ನಿನಗೆ ನಮಿಪೆವು ಎಗುಣನು ತಿಪೆವು ನಾವು ವಿಭುವೇ 
                 ಜಗದೆ ಬಕುತರಕಾಯ ನಾನಾ ರೂಪವನು ಧರಿಪೆ ||
              ಮಿಗಿಲು ಧರ್ಮಕೆ ಲೆಸಗೆಯವ ವಿಗಡಸಿಂಧುರನಿವನ ನೇತ||
              ಕೊಗೆಯಿಸಿರ್ದಪೆ ? ದೇವ ! ಇ ನಂ ಕೊ೦ದು ಸಲಹುವುದು
            ಎಂದು ರೋದಿಪ ದೇವನಿಕರವ| ನಂದು ಕರುಣಿಸಿ ಸಿದ್ದ ಗಣಪನ। 
                ಮಂದಹರ್ಷದೊಳವತರಿಸಿ ಕೈಮುಗಿದ ದೇವರಿಗೆ ||
           ಸುಂದರೋಕ್ತಿಯನಿದನು ಭಕ್ತಿಗ| ಳಿಂದ ಪಠಿಸಲು ಪೋಪುದೇನೋ 
              ಬೃಂದಮಿದಕಂ ದುಃಖಶಮನಸ್ತುತಿಯ ಪೆಸರಕ್ಕೆ                 || ೫ || 
         ಪರಮನುತಿಯನು ಚೌತಿದಿನದೊಳು ಪರಮಭಕ್ತಿಯೊಳೆನ್ನ ಮುಂದೆಯೆ 
             ಭರದಿ ಪರಿಸರ ದುಃಸಿರೋಗಂಗಳನು ತೊಲಗಿಸುವೆ ||
          ಕರುಣದಿಂದಲೆ ಕಾಮಿತಾರ್ಥವು ನಿರದೆಕೊಡುವೆನು ನಾನು ಗೌರಿಯ|
             ತರಳನಾಗುತ ಪುಟ್ಟಿ ಕೊಲೈನು ದೈತ್ಯಸಿಂಧುರ                   || ೬ || 
           ವರಗಜಾನನನೆಂಬ ನಾಮದೆ೦| ಮೆರೆವೆನೆಲ್ಲೆಡೆಯಲ್ಲಿ ಬೇಗನೆ | 
              ದುರುಳ ದೈತ್ಯನಕೊಂದು ನಿಮ್ಮಯ ಪದವನಿತ್ತಸೆನು ||
           ತೆರಳುವುದು ನೀವೆಂದು ಗಣಪತಿ| ಯೊರೆದು ಮೈಗರೆದಲ್ಲಿ ಗಿರಿಜೆಯ|
           ಗರುಭಕಿಳಿದನು ಧರಿಸಲವತಾರಾಂತರಂಗಳನು                      ||೭ || 
             ಬಸಿರು ಗಿರಿಜೆಗೆ ಬಳೆಯಲಾನಂ ದಿಸಿದಳಾಕೆಯ ದೊರ್ಮೆಗುಹನೆಹ। 
          ರಿಸದೊಳೆನ್ನೊಡನಾಗನುಡಿದಳು ಕೇಳು ಶಂಕರನೆ! | 
        ರಸೆಯ ಬನದೊಳು ಬಗೆಯು ವಿಹರಿಸ| ಲೈಸೆದು ನಿನ್ನೊಡಿರಯ್ಯ ಮಾಗಿಹ। 
               ವಸತಿಯೇರ್ಪಡಿಸೀಗ ಮೆಚ್ಚಿರೆನೀನು ತಿರೆಯೊಳಗೆ               ||೮ ||