ಪುಟ:ರಮಾನಂದ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೧೯ (ರಮಾನಂದನು ಕೌತುಕದಿಂದ ಕ್ಷೇಮದರ್ಶಿಯನ್ನು ನೋಡುವನು.) ಕ್ಷೇಮದರ್ಶಿ:- ( ಶ್ರೀಮಂತನನ್ನು ಕುರಿತು ) ' ಸುಕುಮಾರರು ಹೊರಡುವದಕೆ ಮೊದಲು ಮಾತ್ರ ಸಮುಖದಲ್ಲಿ ಅನುಮತಿಯನ್ನು, ಪಡೆಯಬೇಕೆಂಬ ಕುತೂಹಲದಲ್ಲಿ ರುವರು, ಆದುದರಿಂದ, ಗುರು ಗಳೂ ಕುವರರೊಡನೆ ದೇವಿಯವರಿಗೆ ಸಂದರ್ಶನಲಾಭವಿತ್ತು, 5 ಬಳಿಕ ತೆರಳಬೇಕೆಂಬುದೇ ನನ್ನ ಪ್ರಾರ್ಥನೆ. ಶ್ರೀಮ೦ತ:- ಪೂಜ್ಯರೆ! ತಮ್ಮ ಅಭಿಮತವೇನು? ವಿದ್ಯಾ:- ( ಎದ್ದು ನಿಂತು) (ಯುಕ್ತವಿಚಾರವ, ತಪಸ್ವಿನಿಯಾದ ನಿನ್ನ ಪತ್ನಿಯನ್ನು ನೋಡಿಬರುವದು ನನಗೂ ಸಮ್ಮತವೇ ಆಗಿದೆ. ಕುಮಾರರು ಮಾತೃ ದೈವವನ್ನು ವಂದಿಸಿ, ಆಶೀರ್ವಾದ ಹೊ೦ದಿಯೇ 10 ಹೊರಡಬೇಕು-ನಡೆಯಿರಿ, ನಾವೆಲ್ಲ ರೂ ಇನ್ನು ಹೊರಡುವ. [ಎಲ್ಲರೂ ಹೊರಡು ವರು. ಸ್ಮಾನ ೩:- ವಸುಮತೀ ದೇವಿಯ ಅಂತಃಪುರ. (ಚೀಟಿಯೊಡನೆ ಶ್ರೀಮಂತನ ಪತ್ನಿಯಾದ ವಸು ಮತೀದೇವಿಯ ಪ್ರವೇಶ.) ವಸುಮತಿ:- ಸಖಿ 1 ನಿಜವಾಗಿ ಹೇಳುವೆಯಾ ? ರವಿವರ್ಮ 15 ಕುಮಾರನು ಬಂದುದನ್ನು ನೀನು ನೋಡಿದೆಯಾ ? ಚೇತಿ:- ದೇವಿ! ನಾನು ನೋಡಿಯೇ ಬಂದು ಹೇಳಿದೆನಲ್ಲ , ಸುಳ್ಳನ್ನು ಹೇಳಿಲ್ಲ, ಕುಮಾರನು ನಿಜವಾಗಿಯೂ ಬಂದಿರುವನು. ' ವಸುಮತಿ:- ಒಂಟಿಯಾಗಿ ಬಂದನೋ ? ಯಾರನ್ನಾದರೂ ಜತೆಗೊಂಡು ಬಂದನೋ ? 20 ಚೇಟಿ: ಅವನ ಸಂಗಡ ನಾಲ್ವರು ಬಂದಿರುವರು. ಆದರೆ ಅವರಲ್ಲಿ ಯಾರೂ ಇಲ್ಲಿಗೆ ಬಂದಿಲ್ಲ, ಎಲ್ಲ ರೂ ಬೇರೆಕಡೆಯಲ್ಲಿ ಉಳಿ | ದಿರುವರು, ರವಿವರ್ಮ ಕುಮಾರನೊಬ್ಬ ನೇ ಇಲ್ಲಿಗೆ ಬಂದಿರುವನು. ವಸುಮತಿ:- ಹಾಗಾದರೆ ನನ್ನನ್ನು ನೋಡಲು ಇನ್ನೂ ಬರ ಲಿಲ್ಲವೇಕೆ? 25