ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬

ರಾಮಚಂದ್ರಚರಿತಪುರಾಣಂ

ಮ|| ಬಸಿರಂ ಮೋದಿಕೊಳುತ್ತುಮಳ್ವಿ ನಿಜಧಾತ್ರೀವಕಮಂ ನೋಡಿ ಬೇ|
     ವಸವಂ ನಿಮ್ಮ ಮನಕ್ಕೆ ನಿರ್ಭಯದಿನಾವಂ ತಂದನಾತಂಗೆ ಸೈ||
     ರಿಸೆನಾನೆಂದು ಸುಕೌಶಲ ಕ್ಷಿತಿಭುಜಂ ಕಟ್ಟಾಗ್ರಹಂಗೆಯ್ಯೆ ಸೂ|
     ಚಿಸಿದಳ್ ಕಾಂತೆ ವಸಂತಮಾಲೆ ನಿಜ ಶೋಕೋದ್ರೇಕ ವೃತ್ತಾಂತಮಂ||೪೫||

     ಅದಂ ನೆರೆಯೆ ಕೇಳ್ದು--

ಮ||ಪಸುಗೂಸಿಂಗೆನಗಿತ್ತು ರಾಜ್ಯಪದಮಂ ನಿಂದಂ ತಪೋರಾಜ್ಯದೊಳ್|
     ವಸುಧಾವಲ್ಲಭನಾ ಮುನೀಶ್ವರನ ಪಾದೋಪಾಂತಮಂ ಪೊರ್ದಿ ಸಾ||
     ಧಿಸುವೆಂ ನಿರ್ವೃತಿಸೌಖ್ಯಮಂ ವಿಷಯಸೌಖ್ಯಂ ಮುಖ್ಯಮಲ್ತೆಂದು ಭಾ|
     ವಿಸಿ ಬಿಟ್ಟ೦ ಸಿರಿಯಂ ಸುಕೌಶಲನದೇಂ ವೈರಾಗ್ಯಸಂಪನ್ನನೋ||೪೬||

     ಕಂ|| ಮುನಿಭೋಜನವಿಷ್ಟಂ ಮ
           ಜ್ಜನನಿಯಿನಾಯ್ತೆನ್ನ ದೂಸರಿ೦ ತಾಯ್ಗೇನಾಂ||
           ಮುನಿವೆನೊ ಮುನಿಯಪ್ಪನ್ನೆಗ
           ಮನಶನಮೆನಗೆಂದು ಚಿತ್ತದೊಳ್ ತರಿಸಂದಂ||||೪೭||

     ಅ೦ತು ಪರಿಚ್ಛೇದಿಸಿ--

     ಕಂ|| ಧವಲಾತಪತ್ರ ವಾರಣ
           ವಿವಿಧ ಧ್ವಜ ಚಾಮರ೦ಗಳ೦ ರಾಜ್ಯಶ್ರೀ||
           ಗಿವು ತೊಡವೆಂದವನೊಲ್ಲದೆ
           ಭುವನೇಶಂ ರಾಜಭವನಮಂ ಪೊರಮಟ್ಟಂ||೪೮||

     ಅ೦ತು ಪೊರಮಟ್ಟು ಪಾದಮಾರ್ಗದಿನುಪವನಮನೆಯ್ದಿ ಕೀರ್ತಿಧರ ಭಟ್ಟಾರ
ಕರಂತ್ರಿ ಪ್ರದಕ್ಷಿಣಂಗೆಯ್ದು ದೀಕ್ಷಾಪ್ರಸಾದವೆಂದು ವಂದಿಸಿ ಕುಳ್ಳಿರ್ಪುದುಮಾಗ
ಳಖಿಲಪರಿಜನಂ ಸಂಭ್ರಮಂಬೆರಸು ಬಂದು--

ಮ|| ಎಮಗಿನ್ನಾರ್‌ ಶರಣೆಂದು ಮಾಂಡಲಿಕರುಂ ಸಾಮಂತರುಂ ಮಂತ್ರಿ ವ|
      ರ್ಗಮುಮಂತ:ಪುರಮುಂ ವಿಲಾಸಿನಿಯರುಂ ಬಾಯ್ವಿಟ್ಟು ಪುಯ್ಯಲೆ ಶೋ|
      ಕಮಿದೇಕೀಕೆಯ ಗರ್ಭದರ್ಭಕನೆ ನಿಮ್ಮ ರಕ್ಷಿಸಲ್ಸಾಲ್ಗುಮೆಂ|
      ದು ಮಹಾದೇವಿಗೆ ಚಿತ್ರಮಾಲೆಗವರಂ ಭೂಪಾಲನಪ್ಪೈಸಿದಂ||೪೯||


1 ತಾಯಿನ್ನಂ. ಕ. ಖ. ತಾಯಿ ನಂ. , ಫ, ಚ