ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ತೃತಿಯಾಶ್ವಾಸಂ



ಕ೦|| ಶ್ರೀವನಿತೆ ವಕ್ಷದೊಳ್ ಮು
      ಕ್ತಾವಳಿಯಂತೆಸೆಯೆ ತೊಟ್ಟಿಲೊಳ್ ಪಟ್ಟಿತ್ತ||
      ಲ್ಭೂವಳಯಂ ಭುಜದೊಳ್ ಶೋ
      ಭಾವಹಮೆನೆ ಪೆಂಪುವೆತ್ತನಭಿನವಪಂಪಂ

      ಎಳನೇಸರಂತೆ ಜಗಮಂ
      ಬೆಳಗಿದನೆಳದಿಂಗಳಂತೆ ಸಕಲ ಧರಿತ್ರೀ||
      ತಳಮನೆರಗಿಸಿದನೆಳವೆಯೊ
      ಳಿಳೆ ಬಣ್ಣಿಸೆ ದಶರಥಂ ಭಗೀರಥಚರಿತಂ

      ಆ ವಂಶಜರ ಗುಣಂಗಳ
      ನಾವಗ ಮೊಳಕೊಂಡು ತನ್ನವಿಶದ ಯಶೋ ಮು||
      ಕ್ತಾವಳಿಯಂ ಧರೆಗಿತ್ತು,ಧ
      ರಾವಲ್ಲಭನತ್ಯುದಾತ್ತನೆನೆ ಪೆಸರ್ವಡೆದಂ,
  
      ಚಿರಕಾಲದ ಕಳಿವೂವೆಂ
      ದಿರದೆ ವಿರಿಂಚಿಯ ಮುಖಾರವಿಂದಮನುಳಿದಾ||
      ದರದಿಂದಿರ್ದಳ್ ಸಿತಮಧು
      ಕರವಧು ವಾಗ್ವಧು ನರೇಂದ್ರ ಮುಖಸರಸಿಜದೊಳ್

      ಜಡದಿಯ ರತ್ನಂಗಳ್ಪೊಂ
      ದೊಡವಿನುಪಾಶ್ರಯದಿನೆಸೆವವೋಲ್ ದಶರಥನಿ೦||
      ಜಡಜಜನ ವಿದ್ಯೆಗಳ್ ನೂ
      ರ್ಮಡಿಸಿದುವಾಶ್ರಯ ವಿಶೇಷಮೇಂ ಕೇವಲಮೇ

      ಅರುವತ್ತು ನಾಲ್ಕು ವಿದ್ಯೆಯ
      ನರಿದುಂ ದಶರಥನ ಚಿತ್ತಮನುರಾಗದಿ ನೇ||
      ನೆಲಗಿದುದೊ ಧರ್ಮಶಾಸ್ತ್ರ
      ಕಜವುಳ್ಳ೦ವಿಕಥೆಯೊಳ್ ಮನಂ ನಿರಿಸುಗುಮೇ