ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೩

ಪಂಚಮಾಶ್ವಾಸಂ

ಪತಿಯ ಪದಾರವಿಂದಮನರಿಂದಮನರ್ಚಿಸಿದಂ ಕಿರೀಟ ಕೀ|
ಲಿತ ಹರಿನೀಲ ರತ್ನ ರುಚಿ ಮಂಜರಿ ಯೆಂಬತಸೀ ಲತಾಂತದಿಂ||೧೨||

ಅ೦ತು ಸರ್ವಾ೦ಗಪ್ರಣತನಾಗಿ--

ಕಂ||ತಂದೆಂ ರಮ್ಯಕ ವನ ಜಿನ
ಮಂದಿರದ ಕೆಲಕ್ಕೆ ಮಿಥಿಳೆಯಿಂ ಜನಕನನೆ೦||
ದಿಂದುಗತಿಗನುಚರಂ ಪೋ
ದಂದಮುಮಂ ಬ೦ದತೆರನುಮ೦ ನೆರೆ ಪೇಳ್ದಿಂ||೧೩||


ಆಗಳಾ ವಿಯಚ್ಚರಾಧಿರಾಜನತಿಹರ್ಷಚಿತ್ತನಂಗಚಿತ್ತಮನಿತ್ತು---

||ಮ||ಸ್ರ||ಗಗನಾಂತರ್ಭಾಗದೊಳ್ ಪೂಗೊಳವಲರ್ದವೊಲಿಂಬಾಗೆ ಚಿತ್ರಾತಪತ್ರ೦|
ಪಗಲಂ ಭೂಷಾಂಶು ಜಾಲಂ ದ್ವಿಗುಣಿಸೆ ಮುಗಿಲ೦ ಮುಟ್ಟಿ ನಾನಾಧ್ವಜ೦ಗಳ್||
ಭಗವಜ್ಜೈನಾಂಘ್ರಿ ಪೂಜಾ ಪರಿಕರ ಸಹಿತಂ ಮಂಗಳಾತೋದ್ಯನಾದ|
ಸ್ಥಗಿತಾಶಾ ಖಂಡನಾಖಂಡಲ ವಿಭವದಿನೇಳ್ತಿಂದನಾ ಖೇಚರೇಂದ್ರಂ||೧೪||


ಆಸಮಯದೊಳ್--

ಕ೦||ಇದು ಖಚರ ಲೋಕಮಿಾಬ
ರ್ಪುದೆ ಖೇಚರ ನಿಚ ಯಮೆಂದು ಮನದೊಳ್ ಜನಕಂ||
ಪದೆದೀಕ್ಷಿಸುವನ್ನೆಗಮದು
ಪುದಿದುದು ಮಣಿ ಮಕುಟ ಕಿರಣದಿಂದಾಬನಮಂ||೧೫||


ಅಂತು ಗಗನ ತಳದಿನವನೀ ತಳಕ್ಕವತರಿಸಿದಿಂದುಗತಿ ಮಂದಗತಿಯಿಂ ಜಿನ ಮಂದಿರಮಂ ಬಲಗೊಂಡೊಳಗಂ ಪೊಕ್ಕು ದರ್ಶನ ಸ್ತುತಿಗೆಯ್ದನೇಕಾರ್ಚನೆಗಳಿ ನರ್ಚಿಸಿ--

      ಕಂ||ಆ ಗಗನ ಚರ ಪ್ರವರಂ
           ಸ್ವಾಗತ ನಂಭಾಷಣಂಗಳಿಂ ಜನಕನನ||
           ಭ್ಯಾಗತನಂ ಮನ್ನಿಸಿದಂ
           ಶ್ರೀಗೆಂತುಂ ವಿನಯಮೊಂದೆ ಭೂಷಣಮಲ್ತೇ||೧೬||


೧.ಸಿತಾಲತಾಂತದಿಂ. ಕ. ಖ.; ಲತಾಂತಮಾಲೆಯಂ