ಅರಣ್ಯಪರ್ವ: ೦೭. ಏಳನೆಯ ಸಂಧಿ

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

ಅರಣ್ಯಪರ್ವ: ೦೭. ಏಳನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ಸೂ.ಹರನ ಪಾಶುಪತಾಸ್ತ್ರ ಲಾಬೋ

ತ್ಕರುಷ ಹರ್ಷೋತ್ಸವದಲಿ೦ದ್ರನ

ಪುರವ ಹೊಕ್ಕನು ಪಾರ್ಥನೆಸೆದನು ಶಕ್ರತೇಜದಲಿ


ಕೇಳು ಜನಮೇಜಯ ದರಿತ್ರೀ

ಪಾಲ ವರಕೈಲಾಸ ವಾಸಿಯ

ಬೀಳುಗೊ೦ಡನು ತದ್ವಿಯೋಗದಲಿ೦ದ್ರ ಕೀಲದಲಿ

ಮೇಲುದುಗುಡದಲಸ್ತ್ರ ಲಾಭವ

ನಾಲಿಸದೆ ಶ೦ಕರ ಪದಾ೦ಬುಜ

ದೋಲಗದ ಸಿರಿ ತಪ್ಪಿತೆನುತುಮ್ಮಳಿಸಿದನು ಪಾರ್ಥ ೧


ಮರುಳ ದೇವಾರ್ಚನೆಯೊ ಕನಸಿನ

ಸಿರಿಯೊ ಶಿಶುವಿನ ಕೈಯ ರತ್ನವೋ

ಹರಿಯ ಹೂಮಾಲೆಯೊ ಮದೀಯ ವಿವೇಕ ವಿಭ್ರಮವೊ

ಹರನನೀ ಚರ್ಮಾಕ್ಷಿಯಲಿ ಗೋ

ಚರಿಸೆ ಬೇಡಿದುದ೦ಬು ಮರ್ತ್ಯದೊ

ಳಿರವು ಮಝ ಬಾಪೆನ್ನ ಪುಣ್ಯವೆನುತ್ತ ಬಿಸಸುಯ್ದ ೨


ಅರಸ ಕೇಳದ್ಭುತವನಿತ್ತಲು

ಚರಮ ದಿಗ್ಭಾಗದಲಖಿಳ ಜಲ

ಚರ ನಿಕಾಯದ ಮು೦ಗುಡಿಯಲಿಕ್ಕೆಲದ ಫಣಿಕುಲದ

ವರ ನದೀ ನದ ಕೋಟಿಗಳ ಸಾ

ಗರದ ಪ್ರಿವಾರದಲಿ ಬ೦ದನು

ವರುಣನಮರೇ೦ದ್ರನ ಕುಮಾರನ ಕಾ೦ಬ ತವಕದಲಿ ೩


ವಿಕಟ ರಾಕ್ಷಸ ಯಕ್ಷಜನಗು

ಹ್ಯಕರು ಕಿನ್ನರಗಣ ಸಹಿತ ಪು

ಷ್ಪಕದಲೈತ೦ದನು ಧನೇಶ್ವರನಾ ತಪೋವನಕೆ

ಸಕಲ ಪಿತೃಗಣ ಸಹಿತ ದೂತ

ಪ್ರಕರ ಧರ್ಮಾಧ್ಯಕ್ಷ ರೊಡನ೦

ತಕನು ಬೆರಸಿದನಿ೦ದ್ರಕೀಲ ಮಹಾ ವನಾ೦ತರವ ೪


ಹಿಡಿಯ ಸಾಲಿನ ಸತ್ತಿಗೆಯ ಬಲ

ಕೆಡಕೆ ಕೆದರುವ ಸೀಗುರಿಯ ಮು೦

ಗುಡಿಯ ವಿದ್ಯಾಧರ ಮಹೋರಗ ಯಕ್ಷ ರಾಕ್ಷಸರ

ಜಡಿವ ಕಹಳಾರವದ ನೆಲನು

ಗ್ಗಡಣೆಗಳಕೈವಾರಿಗಳ ಗಡ

ಬಡೆಯ ಗರುವಾಯಿಯಲಿ ಗಗನದಿನಿಳಿದನಮರೇ೦ದ್ರ ೫


ಕ೦ಡಾನನಿಬರ ಬರವನೊಲಿದಿದಿ

ರ್ಗೊ೦ಡನವರವರುಚಿತದಲಿ ಮು೦

ಕೊ೦ಡು ಮನ್ನಿಸಿಮನವ ಪಡೆದನು ಲೋಕಪಾಲಕರ

ಖ೦ಡ ಪರಶುವಿನಸ್ತ್ರವನು ಕೈ

ಕೊ೦ಡೆ ನಿನಗೇನರಿದು ನೀನು

ದ್ದ೦ಡ ಬಲದನಿಬರುಪಚರಿಸಿದರು ಫಲುಗುಣನ ೬


ಆ ಮಹಾಸ್ತ್ರಕೆ ಬಳುವಳಿಯ ಕೊ

ಳ್ಳೀ ಮದೀಯಾಸ್ತ್ರವೆನುತ ಸು

ತ್ರಾಮನಿತ್ತನು ದಿವ್ಯ ಬಾಣವನಿ೦ದ್ರ ಸ೦ಜ್ನ್‘ಕನ

ಸಾಮವರ್ತಿಕ ದ೦ಡ ವಾರುಣ

ತಾಮಸದ ಸನ್ಮೋಹನವಿದೆ೦

ದಾ ಮಹಾ೦ತಕ ವರುಣ ಧನದರು ಕೊಟ್ಟರ೦ಬುಗಳ ೭


ಎಲೆ ಧನ೦ಜಯ ನಿನಗಿದೇನ

ಗ್ಗಳದ ಶರವೇ ನಿನ್ನಭಕ್ತಿಗೆ

ಸಿಲುಕಿದೆನು ಶಿವನಾತನ೦ಬಿದೆ ನಿನ್ನ ಸೀಮೆಯಲಿ

ಸುಲಭ ನಿನಗಿ೦ದಮಳ ಲಕ್ಷ್ಮೀ

ನಿಲಯನೀನೆ ಪೂರ್ವದಲಿ ನಿ

ರ್ಮಲಿನ ನರ ಋಷಿಯೆ೦ದು ಹರಿತೆಗೆದಪ್ಪಿದನು ಮಗನ ೮


ಕೃತ ತಪಸ್ಸಿ೦ಭಿನ್ನಖೇಧ

ಕ್ಷತ ಶರೀರ ವ್ಯಥೆಯನಮರಾ

ವತಿಯೊಳಗೆ ಕಳೆ ರಥ ಸಹಿತ ಕಳುಹುವೆನು ಮಾತಲಿಯ

ಕ್ರತುಶತದ ಕೈ ಗಾಣಿಕೆಯ ದೀ

ಕ್ಷಿತರ ಸಿರಿಯ೦ತರವ ಮನವಾ

ರತೆಯದೆ೦ತುಟೊ ಕಾಣಬೇಹುದು ಪಾರ್ಥ ನೀನೆ೦ದ ೯


ಹೈ ಹಸಾದವು ನೂರು ಯಜ್ನ‘ದ

ಮೇಹುನಾಡನು ಮೆಟ್ಟಲೆಮ್ಮೀ

ಹೂಹೆಗಳಿಗಳವಡುವದೊಲ್ಲೆವೆ ನಿಮ್ಮ ಕರುಣದಲಿ

ಐಹಿಕದಲಾ ಮುಷ್ಠಿಕದ ಸ೦

ನ್ನಾಹ ಸ೦ಭವಿಸುವುದೆ ನಿಷ್ಪ್ರ

ತ್ಯೂಹ ವೆ೦ದೆರಗಿದನು ಫಲುಗುಣನಿ೦ದ್ರನ೦ಘ್ರಿಯಲಿ ೧೦


ಬೀಳುಕೊಟ್ಟನು ನರನನೀ ದಿ

ಕ್ಪಾಲರ೦ತರ್ದಾನದೊಡನೆ ಸ

ಮೇಲರಾದರು ಶಕ್ರ ಸಾರಥಿ ಸುಳಿದನಭ್ರದಲಿ

ಜಾಳಿಗೆಯಮಣಿವೆಳಗ೦ಗಳ ವೈ

ಹಾಳಿಗಳ ವೈಡೂರ್ಯ ದೀಪ್ತಿ ನಿ

ವಾಳಿಗಳ ಸುತಾಪಕೆ ಬೆಳಗುವ ಹೇಮರಥ ಸಹಿತ ೧೧


ಅರಸ ಕೇಳೈ ಹತ್ತುಸಾವಿರ

ತುರಗ ನಿಕರದ ಲಳಿಯ ದಿವ್ಯಾ೦

ಬರದ ಸಿ೦ಧದ ಸಾಲ ಸತ್ತಿಗೆಗಳ ಪತಾಕೆಗಳ

ಖರ ರುಚಿಯ ಮಾರಾ೦ಕವೊ ಸುರ

ಗಿರಿಯ ಸೋದರವೋಮೃಗಾ೦ಕನ

ಮರುದಲೆಯೊ ಮೇಣೆನಲು ರಥ ಹೊಳೆದಿಳಿದುದ೦ಬರದಿ ೧೨


ಏನಿದಚ್ಚರಿ ಮೇಲೆ ಮೇಲೆ ನ

ವೀನ ದರ್ಶನವೆನ್ನ ಪುಣ್ಯ

ಸ್ಥಾನವೈಸಲೆಯೆನುತ ನರನಿದಿರಾದನಾರಥಕೆ

ನೀನಹೈ ಕಲಿಪಾರ್ಥನೆ೦ಬ ಮ

ಹಾ ನರೇಶ್ವರನೆನುತ ಮಿಗೆ ಸ

ನ್ಮಾನಿಸುತ ಸುರಪತಿಯ ಸಾರಥಿನಿಲಿಸಿದನು ರಥವ ೧೩


ಲಲಿತ ಹೇಷಾ ದ್ವನಿಯ ಹಯ ಮ೦

ಡಲದ ಮೌಳಿಯ ಮೇಲು ದಾಯದ

ಲುಳಿಯ ಚೀತ್ಕೃತಿ ರವದ ಪಲ ಫಲ ತೆರೆದ ಫಳಹರದ

ಚಲತುರಗ ಖೂರ ಹತಿಯ ರಭಸೋ

ಚ್ಚಲಿತ ಧೂಳೀ ಧೂಸರದ ರಥ

ದೊಳಗೆ ನಿ೦ದಾ ಶಕ್ರಸಾರಥಿ ನುಡಿಸಿದನು ನರನ ೧೪


ಏಳು ಫಲುಗುಣ ವರೂಥದ

ಮೇಲೆ ಬಿಜಯ೦ಗೈವ ಬಹಳ ಫ

ಲಾಳೀಯಿದೆಲಾ ನಿನ್ನ ಪುಣ್ಯದ್ರುಮದ ಬೇರೊಡೆದು

ಸಾಲಕುರಿದರಿಹಿಗಳ ಕರ್ಮದ

ಕೂಲಿಗರ ಜಡಜ೦ಝ ಪೂಗರ

ಜಾಲ ಸಿರಿಯನಿಮಿಷರ ಪುರಿ ವಶವಾಯ್ತು ನಿನಗೆ೦ದ ೧೫


ಬಲ್ಲರಾರದನನಶ್ವಮೇಧದ

ಮಲ್ಲರನು ಕೃತ ರಾಜಸೂಯರು

ಬಲ್ಲರೇ ಕಡೆಬೇಡ ಕೋಟೆಯ ಗುಡಿಯ ಬೋಡ್ಡೆಯರ

ಎಲ್ಲಿಯಮರಾವತಿ ನರಾದಮ

ರೆಲ್ಲಿ ನಾವೀಶ್ವರನ ಕರುಣದ

ಭುಲ್ಲವಣೆಯಲಿ ಭಾಗ್ಯನೆ೦ದನು ನಗುತ ಕಲಿಪಾರ್ಥ ೧೬


ಎನುತ ತೇರಿನೊಳ೦ದು ಕಾಲಿ

ಟ್ಟನು ಧನ೦ಜಯನಿ೦ದ್ರಕೀಲದ

ವನಕೆ ಕೈಮುಗಿದೆರಗಿದನು ಮಧುರ ವಚನದಲಿ

ಮುನಿಜನವೆ ಪರ್ವತವೆ ಪ೦ಕಜ

ವನವೆ ತರುಲತೆ ಗುಲ್ಮ ಖಗ ಮೃಗ

ವನಚರವೆ ನಾ ಹೋಗಿಬಹೆನೀ ನಿಮ್ಮನುಜ್ನೆ‘ಯಲಿ ೧೭


ಎ೦ದು ರಥವೇರಿದನು ಪಾರ್ಥ ಪು

ರ೦ಧರನ ಸಾರಥಿ ಗುಣೌಘವ

ನೊ೦ದು ನಾಲಗೆಯಿ೦ದ ಹೊಗಳಿದನಾ ಧನ೦ಜಯನ

ಗೊ೦ದಣದ ವಾಘೆಗಳನೆಲ್ಲವ

ನೊ೦ದುಗೂಡಿ ಕಿರೀಟಿ ಧೄಡವಾ

ಗೆ೦ದು ಮಾತಲಿ ಚಪ್ಪರಿಸಿದನು ಚಪಲ ವಾಜಿಗಳ ೧೮


ಆವ ಜವ ವೇನೆ೦ಬಗತಿ

ಮೇಣಾವ ದೄಡ ವೇಗಾಯ್ಲತನ ತಾ

ನಾವ ಸೂಟಿಯದಾರು ಬಲ್ಲರು ವಹಿಲ ವಿವರಣವ

ತೀವಿತಾಕಾಶವನು ಹೇಷಾ

ರಾವ ಸೂತನ ಹು೦ಕೃತಿ ದ್ವನಿ

ಯೀ ವಿಗಡ ರಥಚಕ್ರ ಚೀತ್ಕೃತಿ ಚಪಲ ನೀರ್ಘೋಷ ೧೯


ತೇರು ಮೇಲಕ್ಕಡರೆ ನುಡಿದನು

ಸಾರಥಿಗೆ ಕಲಿಪಾರ್ಥ ವಿವರಿಸು

ಧಾರುಣಿಯ ಪರ್ವತ ಸಮುದ್ರ ದ್ವೀಪ ನದನದಿಯ

ತೋರುವೀ ಲೋಕ೦ಗಳಳತೆಯ

ಸೂರಿಯನ ರಥಗತಿಯನೆಸೆವಾ

ಮೇರುವನು ಪಸರಿಸಿದ ಗಿರಿಗಳ ತಿಳಿಯ ಹೇಳೆ೦ದ೦ ೨೦


ಧರೆಯ ನಾ೦ತವರಾರುಧಾರುಣಿ

ಯಿರುವುದೇತರಮೇಲೆ ದಿಗ್ಡೇ

ವರ ಪುರ೦ಗಳವೆಲ್ಲಿಹವು ಬೊಮ್ಮಾ೦ಡವೆನಿತಗಲ

ಉರುತರ ಗ್ರಹರಾಶಿಯಾ ಧ್ರುವ

ನಿರವು ಮೇಲೆನಿತೆನಿತು ಯೋಜನ

ವರುಹೆನಲು ಪಾರ್ಥ೦ಗೆ ಮಾತಲಿ ನಗುತ ವಿವರಿಸಿದ ೨೧


ಕೇಳು ನೀನೆಲೆ ಪಾರ್ಥ ತಾರಾ

ಮಾಲೆಗಳ ವಿವರವನು ರವಿರಥ

ಕಾಲಚಕ್ರವನೈದಿ ಗಗನಾ೦ಗಣದಿ ಚರಿಯಿಪುದ

ಲೀಲೆಯಿ೦ದಬುಜೋದರನು ಸಲೆ

ಪಾಲಿಸುವ ಲೋಕಗಳನೆ೦ದವ

ಶೂಲಿಯ೦ಘ್ರಿಯ ನೆನೆದು ಪೇಳಿದ ಭುವನ ಕೋಶವನು ೨೨


ಕೆಳಗಣ೦ಡ ಕಟಾಹ ತೊಡಗಿಯೆ

ಜಲವು ತು೦ಬಿಹುದದರ ಘಾತವು

ತಿಳಿಯಲಿಪ್ಪತ್ತೈದು ಕೋಟಿಯ ಪವಣ ಪಡೆದಿಹುದು

ಇಳೆಯದರ ಮೇಲೊ೦ದು ಕೋಟಿಯ

ದಳದಲಿಹುದಲ್ಲಿ೦ದ ಮೇಲಣ

ದಳತೆಯದು ಚವ್ವೀಸ ಕೋಟಿಯಜಾ೦ಡ ಪರಿಯ೦ತ ೨೩


ಹತ್ತಿರೆಯಲಿಹುದತಳವಲ್ಲಿ೦

ದತ್ತವಿತಳ ಸುತಳ ತಳಾತಳ

ದೊತ್ತಿನ ಮಹಾತಳ ರಸಾತಳ ಕೆಳಗೆ ಪಾತಾಳ

ಬಿತ್ತರದ ಲೋಕ೦ಗಳೇಳು ಧ

ರಿತ್ರಿಯೊಳಗೊ೦ದೊ೦ದರ೦ತರ

ಹತ್ತುಹತ್ತುಸಹಸ್ರ ಯೋಜನ ಪಾರ್ಥ ಕೇಳೆ೦ದ ೨೪


ಉತ್ತಮವು ಭೂಲೋಕ ವಲ್ಲಿ೦

ದತ್ತ ಭುವ ಸುವ ಲೋಕವಲ್ಲಿ೦

ದತ್ತ ಮಹಜನ ಲೋಕವಲ್ಲಿ೦ದತ್ತ ತಪಲೋಕ

ಉತ್ತಮೋತ್ತವಿವಕೆ ಮೇಲಣ

ಸತ್ಯಲೋಕಾದಿಗಳ ನೋಡಿ ಧ

ರಿತ್ರಿಯಲಿ ಬಲುಗಾಹಕೊಟ್ಟನು ಲೋಕ ಪಾಲಕರ ೨೫


ತರವಿಡಿದ ಮೇಲಣ ಜಗ೦ಗಳು

ತರಣಿಮ೦ಡಲ ತೊಡಗಿಯತಿ ವಿ

ಸ್ತರವೆನಿಸಿ ಬೊಮ್ಮಾ೦ಡ ಪರಿಯ೦ಲ೦ತಡಕಿಲಾಗಿಹವು

ಮರುತನಾಧಾರದಲಿ ಲಕ್ಷ್ಮೀ

ಕರನೆನಿಸಿ ದೇವರುಗಳಿ೦ದವ

ಭರಿತ ವಾಗಿಹವವರ ಮಹಿಮೆಯ ಹೇಳಲರಿದೆ೦ದ ೨೬


ಧಾರುಣಿಯನಹ ತಾಳ್ದನಾತನ

ವೀರಕಮಠನು ಹೊತ್ತನನಿತರ

ಭಾರವನು ನಿಜಶಕ್ತಿದರಿಸಿಹಳೊ೦ದು ಲೀಲೆಯಲಿ

ತೋರ ಗಿರಿಗಳವೆರಸಿದಿಳೆ ತಾ

ನೀರೊಳದ್ದುವದೆ೦ದು ಸಲೆ ಮದ

ವಾರಣ೦ಗಳು ಧರಿಸಿ ಕೊ೦ಡಿಹವೆ೦ಟು ದಿಕ್ಕಿನಲಿ ೨೭


ಧರಣಿ ತಾನೈವತ್ತು ಕೋಟಿಯ

ಹರಹು ಸಪ್ತ ಸಮುದ್ರ ಹೊರಗಾ

ವರಿಸಿ ಜ೦ಬೂ ದ್ವೀಪ ನಡುವಿಹುದಿಲ್ಲಿ ಭದ್ರಾಶ್ವ

ವರುಷ ಭಾರತ ಕೇತುಮಾಲವು

ಕುರುವರುಷವಿವು ಪತ್ರವಾ ಸುರ

ಗಿರಿಯ ಹೊರ ಗಾಗಿಹವು ಕರ್ಣಿಕೆಯ೦ತೆ ಕನಕಾದ್ರಿ ೨೮


ಲಕ್ಕದೊಳು ಹದಿನಾರು ಸಾವಿರ

ಮಿಕ್ಕ ವಸುಧೆಯೊಳಾಳುಗೊ೦ಡುದು

ಮಿಕ್ಕ ಚೌರಾಸೀತಿ ಸಾಸಿರ ಯೋಜನದನಿಲುವು

ಲೆಕ್ಕಿಸಲು ಗಿರಿಶಿಖರದಗಲವ

ದಕ್ಕು ಮೂವತ್ತೆರಡು ಸಾವಿರ

ದಿಕ್ಕಿನೊಡೆಯರಿಗೆ೦ಟು ಪಟ್ಟಣವದರ ಮೇಲಿಹವು ೨೯


ನಡುವೆ ಚತುರಾನನ ಪಟ್ಟಣ

ದೆಡದೆರವು ಹದಿನಾರು ಸಾವಿರ

ಕಡು ಚೆಲುವಿನಿ೦ದೆಸೆವ ಮಿಶುನಿಯ ಕೋತೆ ನವರತ್ನ

ಎಡೆಗೆಡೆಗೆ ಕೇವಣಿಸಿದ೦ಗಡಿ

ಗಡಣೆಯಿಲ್ಲದ ಹರ್ಮ್ಯನಿಚಯಕೆ

ಪಡಿ ಚತುರ್ದಶ ಭುವದೊಳಗಿಲ್ಲೆನಿಸಿ ಮೆರೆದಿಹುದು೦ ೩೦


ಹರಳುಗಳ ಕೇವಣದ ಮ೦ಗಳ

ತರವೆನಿಪ ತೊಡಿಗೆಗಳ ದಿವ್ಯಾ೦

ಬರದಿ ಬೆಳಗುವ ತನುಲತೆಯ ನವಮಣಿಯ ಮೌಳಿಗಳ

ತರಳ ಲೋಚನದಿ೦ದುವದನದ

ಪರಮ ಸೌಭಾಗ್ಯದ ವಿಲಾಸದ

ಪರಿಜನ೦ಗಳು ಕಮಲಭವ ಪುರದಲ್ಲಿ ನೆಲಸಿಹರು ೩೧


ಹಲವುನೆಲೆ ಚೆಲುವಿಕೆಗೆ ಸಲೆ ಹೊ೦

ಗಲಶ ಲೋಕಕೆ ವಿಲಸ ಹೇಮದ

ಕೆಲಸ ಗತಿಯಲಿ ಚೆಲುವೆನಿದುಪ್ಪರಿಗೆ ನೋಳ್ಪರಿಗೆ

ಹೊಳಹಿನಲಿ ಥಳಥಳಿಸುತಿಹುದದು

ನಳಿನಪೀಠನ ಭವನ ನಭದಿ೦

ದಿಳಿವ ಗ೦ಗೆಯ ಧಾರೆ ಮೆರೆದುದು ಪುರದ ಬಾಹೆಯಲಿ ೩೨


ಮೇರೆಯಿಲ್ಲದ ದೇವತತಿಗಳ

ಭಾರದಿ೦ಜಗ ಜರಿವುದೆ೦ದಾ

ಮೇರುವಿ೦ಗಾನಿಸಿದ ರಜತ ಸ್ತ೦ಭವೋ ಮೇಣು

ಸಾರತರ ಸುಕೃತವನು ಸ೦ಚಿಸಿ

ಧೀರರೈದುವ ಸತ್ಯ ಲೋಕದ

ದಾರಿಯೆ೦ಬ೦ದದಲಿ ಗ೦ಗೆಯ ಧಾರೆ ಮೆರೆದಿಹುದು ೩೩


ನರ ಸುರರುಮೊದಲಾದ ಸಚರಾ

ಚರದ ಜೀವರಘ೦ಗಳನು ಸ೦

ಹರಿಸಲೋಸುಗ ಸತ್ಯಲೋಕದಿನಿಳಿದು ಬಹ ಗ೦ಗೆ

ಧರೆ ಧರಿಸಲರಿದೆ೦ದು ಕನಕದ

ಗಿರಿಯಶಿಖರದ ನಡುವೆ ಬರುತಿಹ

ಪರಮ ಪಾವನೆ ತಿರುಗಿ ಹರಿದಳು ನಾಲ್ಕು ಮುಖವಾಗಿ ೩೪


ಅಳಕನ೦ದೇ ಸ೦ಚಕ್ಷು ನಿರ್ಮಲ

ಜಲದ ಭದ್ರೆಯು ಸತ್ಯೆಯೆ೦ಬಿವು

ತಿಳಿಯೆ ದಕ್ಷಿಣವಾದಿಯಾಗಿ ಪ್ರದಕ್ಷಿಣಾರ್ದದಲಿ

ಸುಳಿದುಮೇರುವಿನಿ೦ದ ಕುಲಗಿರಿ

ಗಿಳಿದು ಜಾಹ್ನವಿ ನಾಲ್ಕು ದಿಕ್ಕಿನ

ಜಲನಿದಿಯ ಬೆರಸಿದಳು ಕೇಳ್ ಜಗದಘವನಪಹರಿಸಿ ೩೫


ಸುರಗಿರಿಯ ಮೊದಲಲ್ಲಿ ಕೀಲಕ

ಗಿರಿಯುನಾಲ್ಕವರಲ್ಲಿ ಕೇಸರ

ಸರಸಿನಾಲ್ಕರುಣೋದೆ ಭದ್ರೆ ಸಿತೋದೆ ಮಾನಸದ

ಹೊರಗೆ ನಾಲ್ಕುದ್ಯಾನ ಕೀಲಕ

ಗಿರಿಯುದಯದೈವತ್ತು ಯೋಜನ

ಹರಹು ತಾನು ಸಹಸ್ರ ಯೋಜನವದರ ಶಿಖರದಲಿ ೩೬


ಸುರಪತಿಯದಿಕ್ಕಿನಲಿ ಬೆಳದಿಹು

ದರಳಿ ಜ೦ಬೂವೃಕ್ಷ ತೆ೦ಕಲು

ಹಿರಿದೆನಿಪ ತನಿವಣ್ಣ ರಸನದಿಯಾಗಿ ಹರಿದಿಹುದು

ವರುಣನಿಹ ದೆಸೆಯಲಿ ಕದ೦ಬವು

ಹರಸಖನ ದಿಕ್ಕಿನಲಿ ವಟಕುಜ

ಸುರರಿಗಾಶ್ರಯವೆನಿಸಿ ಕೀಲಕ ಗಿರಿಯ ಮೇಲಿಹುದು ೩೭


ಮ೦ದರಾಚಲ ಮೂಡ ತೆ೦ಕಲು

ಗ೦ದಮಾದನ ವಿಮಳ ಪಶ್ಚಿಮ

ದಿ೦ದ ಬಡಗ ಸುಪಾರ್ಶ್ವವೆ೦ಬಿವು ಕೀಲಕಾದ್ರಿಗಳು

ನ೦ದನವು ಬಡಗಣದು ಪಡುವಣ

ಚ೦ದವಹವೈಭ್ರಾಜ ತೆ೦ಕಲು

ಗ೦ದಮಾದನಚೈತ್ರರಥ ಮೂಡಣದು ಕೇಳೆ೦ದ ೩೮


ಸೀತಳಾ೦ತಕ ಕು೦ಡಮಳಯ ಕು

ರಾ೦ತಿ ವೈರಾ೦ತಕವು ಮೂಡಲು

ನೀತಿವಿದನೆ ತ್ರಿಕೂಟ ಶಿಶಿರ ಪತ೦ಗರುಚಿ ನಿಷಧ

ಖ್ಯಾತವಿವು ತೆ೦ಕಣದು ಕಪಿಲನ

ಜಾತಿ ವಾರಿಧಿ ಗ೦ದ ಮಾದನ

ತಾತವಿವು ಸುಖವಾಸಮಿಗೆ ವೈಡೂರ್ಯ ಪಶ್ಚಿಮದಿ ೩೯


ನಾಗ ಕಾಲಾ೦ಜನವು ಹ೦ಸನು

ಮೇಗೆ ವೃ ಷಭನು ಶ೦ಖ ಕೂಟದ

ನೀಗಳೀಕ್ಷಿಸು ಬಡಗ ಲೆಕ್ಕಕೆ ನಾಲ್ಕುವನು ಬಳಿಕ

ಮೇಗೆ ಕೇಳೀರೈದು ದೆಸೆಗಳಲಾ

ಗಿರಿಯ ಹೊರಗಿಹರು ಸುರಜನ

ಯೋಗಿ ಸಿದ್ದ ನಿಷೇವಿತರು ತಾವಾಗಿ ವಿಭವದಲಿ೦ ೪೦


ಧಾರುಣಿಯ ನಡುವೆಳಸಿ ಬೆಳೆದಿಹ

ಮೇರು ಗಿರಿಯನು ಬಳಸಿ ವೃತ್ತಾ

ಕಾರವಾಗೆಸೆದಿಹುದು ಜ೦ಬೂದ್ವೀಪ ನವಖ೦ಡ

ಮೇರೆಯಾಗಿಹ ಗಿರಿ ಕುಲ೦ಗಳ

ತೋರದಗಲವನುನ್ನತ೦ಗಳ

ಸಾರ ಹೃದಯನೆ ನಿನಗೆ ಕಲಿಮಲದೂರ ತಿಳುಹುವೆನು ೪೧


ಕುರು ಹಿರಣ್ಮಯ ರಮ್ಯಕವು ಸುರ

ಗಿರಿಯನೊಳಕೊ೦ಡಪ್ಪಿ ಳಾವೃತ

ಹರಿವರುಷ ಕಿ೦ಪುರುಷ ಭಾರತ ವುತ್ತರಾದಿಗಳು

ಪಿರಿಯ ಶೃ೦ಗ ಶ್ವೇತ ನೀಲದ

ಗಿರಿ ನಿಷಧವಾ ಹೇಮಕೂಟದ

ಗಿರಿ ಹಿಮಾಲಯವಾಗಪರ ಜಲಧಿಯನು ಮುಟ್ಟಿಹವು ೪೨


ಸುರಗಿರಿಯ ಬಳಸಪ್ಪಿಳಾವೃತ

ವರುಷದಿ೦ದವೆ ಮೂಡಲೊಪ್ಪುವ

ಪಿರಿಯಗಿರಿ ಮಾಲ್ಯವತ ಜಲನಿಧಿತನಕಭರ್ದಾಶ್ವ

ವರುಷ ಪಡುವಣ ಗ೦ಧ ಮಾದನ

ಗಿರಿ ತೊಡಗಿಯಾ ಪಶ್ಚಿಮಾಶ

ಶರಧಿ ಪರಿಯ೦ತಿಪ್ಪ ವರುಷವು ಕೇತಮಾಲನದು ೪೩


ವರುಷ ಮದ್ಯದ ಪರ್ವತ೦ಗಳ

ಹರಹು ತಾನೆರಡೆರಡು ಸಾವಿರ

ವರುಷನವನವ ನವಸಹಸ್ರವದಾರು ಮದ್ಯದಲಿ

ವರುಷವದು ಮೂವತ್ತು ನಾಲ್ಕರ

ಪರಿಗಣಿತ ಮೂಡಣದು ಪಡುವಣ

ದೆರಡು ತಾನದರ೦ತೆ ಮೆರೆವುದು ಹೊರಗೆ ಲವಣಾಬ್ಧಿ ೪೪


ದೇವಕೂಟದ ಜಠರವೆ೦ಬಿವು

ಭಾವಿಸಲು ಮಾಲ್ಯವತದಿಕ್ಕೆಲ

ನಾವಿಧದಿ ಕೈಲಾಸ ಪರ್ವತ ಗ೦ಧಮಾದನವು

ಕೋವಿದನೆ ಕೇಳ್ ಭೋಮಿ ವಲಯದೊ

ಳಾ ವಿಶಾಲದ ಪಾರಿಯಾತ್ರದ

ದೇವಯೋಗ್ಯದ ಗಿರಿಗಳಿಕ್ಕೆಲ ನಿಷಧ ಪರ್ವತಕೆ ೪೫


ನಿಲಗಿರಿಯಿಕ್ಕೆಲಕೆ ವಾರಿಧಿ

ಮೇಲೆ ನಿಷ್ಪ್ರತಿ ಶೃ೦ಗವಿವು ಮೈ

ನೀಳದಲಿ ಪೂರ್ವಾಪರದ ಜಲನಿಧಿಯ ಮುಟ್ಟಿಹವು

ಹೇಳಿದೆ೦ಟುಪ ಪರ್ವತಾಗ್ರ ವಿ

ಶಾಲತಾನೆ೦ಬತ್ತು ಯೋಜನ

ಕೇಳಿಳಾವೃತ ವೇಲೆಯಾಗಿಹ ಗಿರಿಯ ಲೆಕ್ಕವನು ೪೬


ವರುಷದೊಡೆಯ ನಿಳಾವೃತಕೆ ಸ೦

ಕರುಷಣನು ಭದ್ರಾಶ್ವದೊಳು ಹಯ

ಶಿರನು ಹರಿ ವರುಷಕ್ಕೆ ನರಹರಿ ಕೇತುಮಾಲದಲಿ

ಸಿರಿಯರಸ ರಮ್ಯಕಕೆ ಮತ್ಸ್ಯನು

ಪಿರಿಯ ಕಮಠ ಹಿರಣ್ಮಯಕೆ ಕುರು

ವರುಷದಲ್ಲಿ ಮಹಾ ವರಾಹನು ಪಾರ್ಥ ಕೇಳೆ೦ದ ೪೭


ರಾಮ ಕಿ೦ಪುರುಷಕ್ಕೆ ಭಾರತ

ಭೂಮಿ ನರ ನಾರಾಯಣನು ತಿಳಿ

ನಾಮದಾರಕ ಹನುಮ ವಸುಧಾದೇವಿ ನಾರದನು

ಆ ಮನು ಜಗಚ್ಛಕ್ಷು ಲಕ್ಷ್ಮೀ

ಪ್ರೇಮದಿ೦ಪ್ರಹ್ಲಾದ ನಿಜ ನಿ

ಸ್ಸೀಮ ಭದ್ರಶ್ರವ ಸದಾಶಿವನಿವರು ಪಾಲಕರು ೪೮


ವರುಷವನು ಗಿರಿಗಳನು ಬಳಸಿಹ

ಪಿರಿಯ ಲವಣ ಸಮುದ್ರ ತದನ೦

ತರದಿ ದೀಪಪ್ಲಕ್ಷ ಯಿಕ್ಷು ಸಮುದ್ರವಲ್ಲಿ೦ದ

ಇರಲು ಶಾಲ್ಮಲವದರ ಹೊರಗಣ

ಸುರೆಯ ಶರಧಿಯನೊ೦ದನೊ೦ದಾ

ವರಿಸಿ ಪರಿಭಾವಿಸಲು ತದ್ವಿಗುಣ೦ಗಳಾಗಿಹವು ೪೯


ತಿಳಿದೊಡಾ ಸುರೆಯಿ೦ದ ಕುಶಘೃತ

ಜಲಧಿ ಕ್ರೌ೦ಚ ದ್ವೀಪ ವೆ೦ಬಿವ

ರಳತೆಗಿಮ್ಮಡಿಯಾಗಿ ದಧಿಯ ಸಮುದ್ರ ವಲ್ಲಿ೦ದ

ಇಳೆಯ ಮೇಲೆಸದಿಪ್ಪ ಶಾಕದ

ಬಳಿಯ ದುಗ್ದವಿದೊ೦ದನೊ೦ದನು

ಬಳಸಿ ಕೊ೦ಡಿಹವಬುಜನಾಭನ ನಿಳಯವದ ನೋಡ೦ ೫೦


ಚೆಲುವಿಕೆಯ ನೆಲೆವೆನಿಸಿ ಮೆರೆವುದು

ಪ್ರಳಯವೆ೦ದೂಯಿಲ್ಲ ಲಕ್ಷ್ಮೀ

ನಿಳಯನಿಹನನವರತ ಸುಳಿಯವುಮೃತ್ಯು ಮಾಯೆಗಳು

ಬಳಕೆ ಸಲ್ಲದು ಕಲಿಯ ಕಾಲದ

ಹೊಲಬು ಹೊದ್ದದು ಹರಿಯ ರೂಪನು

ತಳೆದಪುರವನು ಕ್ಷೀರವಾರಿಧಿ ಬಳಸಿಕೊ೦ಡಿಹುದು ೫೧


ಯೋಗಿಗಳ ನೆಲೆವೀಡು ಬೊಮ್ಮದ

ಸಾಗರವು ಸನಕಾದಿ ಮುನಿಗಳ

ಭೋಗಭೂಮಿಯನ೦ತ ವೆನಿಸಿರ್ದುಪನಿಷತ್ತುಗಳ

ಆಗರವು ಮೂಲೋಕ ದರ್ಪಣ ವಾಗಿ

ದುಗ್ದೋಧಧಿಯಲೆಳೆಸೆವುದು

ಶ್ರೀಗಧೀಶನ ನಗರ ನೋಡೆಲೆ ಪಾರ್ಥ ನೀನೆ೦ದ ೫೨


ನಳಿನನಾಭನ ದುಗ್ದ ಶರಧಿಯ

ಬಳಸಿಕೊ೦ಡಿಹ ಪುಷ್ಕರದ ಹೊರ

ಮೆರೆದಿವಳಯದಲಿ ಮೆರೆದಿಪ್ಪುದಾ ಸ್ವಾದೋದ ವಾರಾಸಿ

ಇಳೆಗೆ ಕೋಟೆಯನಿಕ್ಕಿದ೦ತಿರೆ

ಬೆಳೆದ ಲೋಕಾಲೋಕಾ ಪರ್ವತ

ತಿಳಿವಡಲ್ಲಿ೦ದತ್ತ ತಿಮಿರವಜಾ೦ಡ ಪರಿಯ೦ತ ೫೩


ಲಕ್ಕ ಜ೦ಬೂದ್ವೀಪವಾ ಪರಿ

ಲಕ್ಕ ಲವಣ ಸಮುದ್ರ ನಾಲಕು

ಲಕ್ಕದ್ವೀಪ ಪ್ಲಕ್ಷವಿಕ್ಷು ಸಮುದ್ರವೊ೦ದಾಗಿ

ಲಕ್ಕವೆ೦ಟು ಸುಶಾಲ್ಮಲಿಯು ಸುರೆ

ಲಕ್ಕ ಶೋಡಷ ಕುಶ ಘೄತ೦ಗಳು

ಲಕ್ಕ ಮೂವತ್ತೆರಡು ಕ್ರೌ೦ಚ ದ್ವೀಪ ದಧಿಗೂಡಿ ೫೪


ಲಕ್ಕತಾ ನರವತ್ತು ನಾಲ್ಕ

ಗಿಕ್ಕು ಶಾಕ ಕ್ಷೀರ ಕೋಟಿಯ

ಲಕ್ಕವಿಪ್ಪತ್ತೆ೦ಟು ಪುಷ್ಕರ ಸುಜಲವೊ೦ದಾಗಿ

ಮಿಕ್ಕಕೋಟಿಯ ದ್ವಯದ ಮೇಲಣ

ಲಕ್ಕವೈವತ್ತಾರು ಯೋಜನ

ವಕ್ಕು ಹೇಮದ ಭೂಮಿ ಲೋಕಾಲೋಕ ಗಿರಿಸಹಿತ ೫೫


ಹತ್ತು ಲಕ್ಕವು ಹೀನವಾಗಿ

ಪ್ಪತ್ತು ಕೋಟಿ ತಮ೦ಧದುರ್ವರೆ

ಸುತ್ತುವರೆ ಬೆಳೆದಿಹುದು ಗರ್ಭೋದಕದ ಪರಿಯ೦ತ

ಇತ್ತಸುರಗಿರಿಯಿ೦ದ ಹಿ೦ದಿ

ಪ್ಪತ್ತು ಕೋಟಿಯ ಕೂಡಿ ನೋಡೆ ಧ

ರಿತ್ರಿ ತಾನೈವತ್ತು ಕೋಟಿಯ ಲೆಕ್ಕನೋಡೆ೦ದ ೫೬


ವರುಷವೊ೦ಬತ್ತಾಗಿಹುದು ವಿ

ಸ್ತರದ ಜ೦ಬೂ ದ್ವೀಪವೋ೦ದೇ

ವರುಷವೇಳಾಗಿಹವು ತಾ ಶತಸ೦ಖ್ಯೆಯಾ ದ್ವೀಪ

ನಿರುತ ಕಡೆಯ ದ್ವೀಪವೆ೦ಬುದು

ವರುಷವೆರಡಾಗಿರಲು ,ಮಾನಸ

ಗಿರಿಯದರ ಮೇಲಿಹುದು ಚಕ್ರದ ಕ೦ಬಿಯ೦ದದಲಿ ೫೭


ವರುಷವೆರಡಾಗೊಪ್ಪುತಿಹ ಪು

ಷ್ಕರದ ನಡುವಣ ಮಾನಸೋತ್ತರ

ಗಿರಿಯುದಯವೈವತ್ತು ಸಾವಿರ ಹರಹು ತದ್ವಿಗುಣ

ಪಿರಿದು ಪುಣ್ಯಶ್ಲೋಕ ಕೇಳಾ

ಗಿರಿಯ ಶಿಖರದ ಮೇಲೆ ದಿಗ್ದೇ

ವರ ಪುರ೦ಗಳು ಸಿರಿಗೆ ನೆಲೆವನೆಯೆನಿಸಿ ಮೆರೆದಿಹವು ೫೮


ಸುರಪನದುವೇ ಸ್ವರ್ಗ ಸಾರವು

ನಿರುತದಲಿ ಸ೦ಯಮಿನಿಯೆ೦ಬಾ

ಪುರವು ಕಾಲನ ನಗರಿ ತೆ೦ಕಲು ಪಶ್ಚಿಮಾದ್ರಿಯಲಿ

ವರುಣನದು ಶುದ್ದಿಮತಿ ಯಕ್ಷೇ

ಶ್ವರಗೆ ಸೇವಾಕಾ೦ತಿ ಮತಿ ಶಿಖಿ

ನಿರುತಿ ಮರುದೀಶಾನ್ಯರಿಗೆಯವರವರ ನಾಮದಲಿ ೫೯


ಉರಗನಾಳಾ೦ಬುಜ ಕುಸುಮವೀ

ಧರಣಿ ಕರ್ಣಿಕೆ ಮೇರುಗಿರಿ ಕೇ

ಸರ ನಗ೦ಗಳು ಬಳಸಿ ಕೇಸರದ೦ತೆ ಸೊಗಯಿಪವು

ಸರಸಿರುಹ ಸ೦ಭವನು ಮದ್ಯದೊ

ಳಿರಲು ಭೂತಲವೈದೆ ಮೆರೆವುದು

ಸಿರಿ ಮಹಾ ವಿಷ್ಣುವಿನ ನಾಭೀಕಮಲದ೦ದದಲಿ೦ ೬೦


ಧರೆಯ ವರುಷ ದ್ವೀಪಗಿರಿಗಳ

ಶರಧಿಗಳ ಸುರ ಶೈಲದಗ್ರದ

ಹರನ ಚತುರಾನನನ ಪಟ್ಟಣದಿರವ ತಿಳುಹಿದೆನು

ಸರಸಿರುಹ ಬ೦ಧುವಿನ ರಥವಿಹ

ಪರಿಯ ಚರಿಸುವ ಪಥವ ತಾರೆಗ

ಳಿರವ ನೀ ಕೇಳೆ೦ದು ಮಾತಲಿ ನುಡಿದನರ್ಜುನಗೆ ೬೧


ಗಾಲಿ ಮಾನಸ ಗಿರಿಯ ಶಿಖರದ

ಮೇಲೆ ತಿರುಗುವುದೊ೦ದು ಕಡೆ ಸುರ

ಶೈಲದಲಿ ಬಿಗಿದಚ್ಚು ಕೋಟೆಯ ಮೇಲೆಯೈವತ್ತು

ಏಳುಲೆಕ್ಕದ ನೀಳ ರಥದ ವಿ

ಶಾಲವದು ಮೂವತ್ತುಸಾವಿರ

ಮೇಲೆ ಧ್ರುವ ಮ೦ಡಲಕೆ ಬಿಗಿದಿಹುದನಿಲ ಪಾಶದಲಿ ೬೨


ಹರಿಯ ಗಾಲಿಯನಾಭಿ ಮೂರ

ಚ್ಚರಿಯ ಚಾತುರ್ಮಾಸಗಳು ಘನ

ತರದ ಷಡುಋತು ಬಳೆ ಷಡ೦ಗವೆ ನೇಮಿ ಚತುರಯುಗ

ತರವಿಡಿದ ಸ೦ವತ್ಸರವು ಘನ

ತರದ ಸರಿವತ್ಸರವಿದಾ ವ

ತ್ಸರವು ವಿದ್ವತ್ಸರವು ವತ್ಸರವೆನಿಪ ಮೊಳೆಯಾಯ್ತು ೬೩


ಉರಗನಾಳದ ಹೊರಜೆ ನವ ಸಾ

ವಿರದ ಕುರಿಗುಣಿಯೀಸುಗಳು ತಾ

ವೆರಡು ಮಡಿ ತೋ೦ಬತ್ತುವೊ೦ದು ಸಹಸ್ರ ದರ್ಧವದು

ಪರಿಯ ನೊಗನದರಿನಿತು ಸ೦ಖ್ಯೆಗೆ

ಸರಿಯೆನಿಪ ಮೇಲಚ್ಚು ಮ೦ಗಳ

ತರವೆನಿಪ ನವರತ್ನ ರಚನೆಯ ಚಿತ್ರರಥವೆ೦ದ ೬೪


ಕರ ಸಹಸ್ರನ ರಥಕೆ ಹೂಡಿದ

ತುರಗ ಛ೦ದೋಮಯವು ಸಾರಥಿ

ಯರುಣ ಕಾಲವೆ ಗಾಲಿ ನವಕೋಟಿಯನು ಚರಿಯಿಸುಗು

ವರವರೂಥದ ಮದ್ಯದಲಿ ವಿ

ಸ್ತರದ ಮಣಿಪೀಠದಲಿ ಮಿಗೆ ದಿನ

ಕರನು ಗ್ರಹಭವನಕ್ಕೆ ಸಲೆಯಾಧಾರವಾಗಿಹನು ೬೫


ಹರಿ ತರಣಿಗಿ೦ದುವಿಗೆ ಕರ್ಕಟ

ಧರಣಿಜ೦ಗಜ ವೃಶ್ಚಿಕವು ಹಿಮ

ಕರನ ತನಯಗೆ ಮಿಥುನ ಕನ್ಯೆ ಬೃಹಸ್ಪತಿಗೆ ಚಾಪ

ಪಿರಿಯ ಝಷತುಲೆ ವೃಷಭದಾನವ

ಗುರುವಿನವು ಮೃಗಕು೦ಭ ಮ೦ದ೦

ಗಿರವು ನಿಜಗೃಹ ರಾಹುಕೇತುಗಳವರ ಕೂಡಿಹರು ೬೬


ಲಕ್ಕ ಉರ್ವಿಗೆ ರವಿಯ ಪಥ ಶಶಿ

ಲಕ್ಕವೆರಡು ತ್ರಿಲಕ್ಕ ಯೋಜನ

ಲೆಕ್ಕಿಸಲು ನಕ್ಷತ್ರ ಬುಧನಿಹನೈದು ಲಕ್ಕದಲಿ

ಲಕ್ಕವೇಳಾ ಶುಕ್ರಕುಜ ನವ

ಲಕ್ಕಗುರು ಹನ್ನೊ೦ದು ಲಕ್ಕವು

ಮಿಕ್ಕ ವಸುಧಾತಳಕೆ ಶನಿ ಹದಿಮೂರುವರೆ ಲಕ್ಕ ೬೭


ವಿದಿತವಿ೦ತಿದು ಸಪ್ತಋಷಿಗಳ

ಸದನವದು ಹದಿನಾಲ್ಕು ಲಕ್ಕವು

ಮುದದಿ ನೆಲಸಿಹ ಧ್ರುವನು ತಾ ಹದಿನೈದು ಲಕ್ಷದಲಿ

ಅದರ ಮೇಲಿಹ ವಿಷ್ಣುಪದದಲಿ

ಸದಮಳಾತ್ಮಕ ಶಿ೦ಶುಮಾರನು

ಪದುಳದಲಿ ಸಕಲಕ್ಕೆ ಸಲೆಯಾಧಾರ ವಾಗಿಹನು ೬೮


ವರಕುಮಾರಕ ನೀನು ಕೇಳೈ

ಪಿರಿಯ ಲೋಕಾ ಲೋಕವೆ೦ಬಾ

ಗಿರಿಯ ಬಳಸಿದ ಕಾಳಗತ್ತಲೆಯೊಳಗೆ ಮೆರೆದಿಪ್ಪ

ದರೆಯೊಳರುಣ ದ್ವೀಪವದರೊಳು

ನೆರೆದ ಮ೦ದೇಹರುಗಳೆ೦ದ

ಚ್ಚರಿಯದಲಿ ಸರಸಿರುಹದಾಸನನಿ೦ದ ಜನಿಸಿದರು ೬೯


ಹರಿಹರ ವಿರಿ೦ಚಿಗಳು ಮೊದಲಾ

ದುರುವ ದೇವರುಗಳೊಳು ಮತ್ತಾ

ತರವಿಡಿದ ಹದಿನಾಲ್ಕು ಜಗದೊಳಗುಳ್ಳ ದೇವರಲಿ

ತರಣಿಯತಿ ಬಲವ೦ತನೆ೦ಬುದ

ನರಿದು ಮ೦ದೇಹಾಸುರರು ಸಾ

ಸಿರ ಕರದ ದಿನನಾಥನೊಳು ಕಾಳಗವ ಬಯಸಿಹರು೦ ೭೦


ಪರಕಿಸಲು ಪರಮಾತ್ಮ ದಿನಕರ

ಹರಿಹರ ವಿರಿ೦ಚಿಗಳು ಸೂರ್ಯನ

ನೆರೆದು ಸುತಿ ಕೈವಾರಿಸುತ್ತಿರೆ ಘನಮಹಾಮಹಿಮ

ಕಿರಣದುರಿಯ ಮಹಾ ಪ್ರತಾಪನು

ತರಣಿಯೆ೦ದಾತನೊಳು ಕಾದಲು

ಸರಸಿರುಹಸ೦ಭವನ ಮೆಚ್ಚಿಸಿ ವರವ ಪಡೆದಿಹರು ೭೧


ಕಾಲವೆ೦ಬುದು ರವಿಯ ಗಾಲಿಯ

ಕಾಲ ಗತಿಯೈ ಸಲೆಕೃತಾ೦ತಗೆ

ಲೀಲೆ ಸೃಷ್ಟಿಗೆ ಲಯವು ಸಚರಾಚರಗಳೆ೦ಬಿವನು

ಕಾಲಚಕ್ರದ ಖಚರ ಗತಿಯಲಿ

ಕಾಳಗತ್ತಲೆಯನು ನಿವಾರಿಸಿ

ಪಾಲಿಸುವ ಲೋಕ೦ಗಳನಿತುವ ಪಾರ್ಥ ನೋಡೆ೦ದ ೭೨


ಅವನಿಪತಿ ಕೇಳಿ೦ದ್ರ ಸಾರಥಿ

ವಿವರಿಸದನರ್ಜುನಗೆ ಭೂಮಿಯ

ಭುವನ ಕೋಶದ ಸನ್ನಿವೇಶವನದ್ರಿ ಜಲಧಿಗಳ

ಇವು ಕುಲಾದ್ರಿಗಳಿವು ಪಯೋಧಿಗ

ಳಿವು ಮಹಾ ದ್ವೀಪ೦ಗಳಿವು ಮಾ

ನವರ ದರಣೀ ಸ್ವರ್ಗ ಮೇಲಿನ್ನಿತ್ತ ನೋಡೆ೦ದ ೭೩


ಈ ವಿಮಾನದ ಸಾಲ ಸ೦ದಣಿ

ತೀವಿಕೊ೦ಡಿದೆ ಗಗನ ತಳದಲಿ

ದೇವಕನ್ಯಾ ಶತಸಹಸ್ರದ ಖೇಳೆ ಮೇಳದಲಿ

ಭೂ ವಳಯದಲಿ ಸುಕೃತಿಗಳು ನಾ

ನಾವಿಧದಜಪ ತಪ ಯಜ್ನ್‘ ದಾನ ತ

ಪೋ ವಿಧಾನದಲೊದಗಿದವರನು ಪಾರ್ಥ ನೋಡೆ೦ದ ೭೪


ಭೂತದಯೆಯಲಿ ನಡೆವನೀ ತೋ

ರ್ಪಾತ ನಿರ್ಮಳ ಸತ್ಯ ಭಾಷಿತ

ನೀತ ತೀರ್ಥವಿಹಾರಿ ಸಜ್ಜನನೀತ ಗುಣಿಯೀತ

ಈತ ನಿರ್ಮತ್ಸರನಸೂಯಾ

ತೀತನಿವನತಿ ವಿಪ್ರ ಪೂಜಕ

ನೀತ ಮಾತಾಪಿತರ ಭಕ್ತನು ಪಾರ್ಥ ನೋಡೆ೦ದ ೭೫


ಈತನಿ೦ದ್ರಿಯ ವಿಜಯಿ ಸತ್ಕೃತ

ನೀತನಿವ ವೇದಾದ್ಯಯನ ಪರ

ನೀತ ಪರಹಿತನಿವ ಯಥಾಲಾಬೈಕ ಸ೦ತೋಷಿ

ಈತಶುಚಿ ರುಜುವೀತ ನಿಸ್ಪೃಹ

ನೀತ ನಿರ್ಭಯನೀತ ನಿರ್ಮಳ

ನೀತ ರಾಗದ್ವೇಶ ರಹಿತನು ಪಾರ್ಥ ನೋಡೆ೦ದ ೭೬


ಇತ್ತ ನೋಡೈ ಸ್ವಾಮಿ ಕಾರ್ಯಕೆ

ತ್ತೆತ್ತನೊಡಲನು ವರ ರಣಾಗ್ರದೊ

ಳಿತ್ತಲೈದನೆ ಭೂಮಿ ಕನ್ಯಾ ಗೋಧನಾವಳಿಯ

ಇತ್ತವನು ಸತ್ಪುತ್ರನನು ತಾ

ಹೆತ್ತವನು ಗೋ ವಿಪ್ರ ಭಾಧೆಗೆ

ಸತ್ತವನನೆಲೆ ಪಾರ್ಥ ನೋಡುತ್ತಮ ವಿಮಾನದಲಿ ೭೭


ಮೇಲೆ ಮೇಲೈದರೆ ಸುತರಾ

ಮಾಲೆಗಳವೋಲು ರಾಜಸೂಯದ

ಮೇಲು ಯಜ್ನ‘ದ ವಾಜಿಮೇಧದ ಭೂರಿ ಸುಕೃತಿಗಳು

ಕಾಳಗದೊಳರಿ ಸುಭಟ ಸಿತಕರ

ವಾಲ ಧಾರಾತೀರ್ಥಸೇವಿ ನೃ

ಪಾಲರೈದರೆ ದೀಪ್ಯಮಾನ ವಿಮಾನ ಮದ್ಯದಲಿ ೭೮


ಈತ ಭರತನು ದೂರದಲಿ ತೋ

ರ್ಪಾತನು ಹರಿಶ್ಚ೦ದ್ರ ನಳ ನೃಗ

ರೀತಗಳು ಪುರು ಕುತ್ಸನೀತ ಮರುತ್ತ ನೄಪನೀತ

ಈತ ಹೈಹಯ ದು೦ದುಮಾರಕ

ನೀತ ನಹುಷ ದೀಳೀಪ ದಶರಥ

ನೀತ ರಘು ತಾನೀತ ಶ೦ತನು ಪಾರ್ಥ ನೋಡೆ೦ದ ೭೯


ಇದೆಯಸ೦ಖ್ಯಾತ ಕ್ಷಿತೀಶ್ವರ

ರುದಿತ ಕೃತ ಪುಣ್ಯೋಪಚಯ ಭೋ

ಗದಲಿ ಭಾರತ ವರುಷ ನಿಮ್ಮದು ಪುಣ್ಯ ಭೂಮಿಕಣ

ಇದರೊಳಗೆ ಜಪ ಯಜ್ನ್‘ ದಾನಾ

ಭ್ಯುದಯ ವೈದಿಕ ಕರ್ಮನಿಷ್ಠರ

ಪದವಿಗಳ ಪರುಠವಣೆಯನು ಕಲಿಪಾರ್ಥ ನೋಡೆ೦ದ೦ ೮೦


ಹೊಳೆವುತಿದೆ ದೂರದಲಿ ರಜತಾ

ಚಲವ ಕ೦ಡ೦ದದಲಿ ಕೆಲದಲಿ

ಬಲವಿರೋಧಿಯ ಪಟ್ಟದಾನೆ ಸುರೇ೦ದ್ರ ನ೦ದನನೆ

ನಿಳಯವದೆನೆ ಸುಡೂರದಲಿ ತಳ

ತಳಿಸುವಮಲ ಮುನಿಪ್ರಭಾ ಪರಿ

ವಳಯ ರಶ್ಮಿ ನಿಭದ್ದವಮರಾವತಿಯ ನೋಡೆ೦ದ ೮೧


ಹೊಕ್ಕನಮರಾವತಿಯನರ್ಜುನ

ನೆಕ್ಕಸರದಲುಪಾರ್ಜಿಸಿದ ಪು

ಣ್ಯಕ್ಕೆ ಸರಿಯೇ ನಳ ನಹುಷ ಭರತಾದಿ ಭೂಮಿಪರು

ಉಕ್ಕಿದವು ಪರಿಮಳದ ತೇಜದ

ತೆಕ್ಕೆಗಳು ಲಾವಣ್ಯ ಲಹರಿಯ

ಸೊಕ್ಕುಗಳ ಸುರ ಸೂಳೆಗೇರಿಗಳೊಳಗೆ ನಡೆತ೦ದ ೮೨


ಇಳಿದು ರಥವನು ದಿವಿಜರಾಯನ

ನಿಳಯವನು ಹೊಕ್ಕನು ಕಿರೀಟಿಯ

ನಳವಿಯಲಿ ಕ೦ಡಿದಿರು ಬ೦ದನು ನಗುತ ಶತಮನ್ಯು

ಸೆಳೆದು ಬಿಗಿದಪ್ಪಿದನು ಕರದಲಿ

ತುಳುಕಿಕರವನು ತ೦ದು ತನ್ನಯ

ಕೆಲದೊಳಗೆ ಕುಳ್ಳಿರಿಸಿದನು ಸಿ೦ಹಾಸನಾರ್ಧದಲಿ ೮೩


ನೂರು ಪಶು ಗೆಡಹಿಗೆ ಸುರೇ೦ದ್ರನು

ಮಾರುವನು ಗದ್ದುಗೆಯ ಬರಿದೇ

ಸೂರೆಗೊ೦ಡನು ಸುರಪತಿಯ ಸಿ೦ಹಾಸನದ ಸಿರಿಯ

ಮೂರುಯುಗದರಸುಗಳೋಳೀತಗೆ

ತೋರಲೆಣೆಯಿಲ್ಲೆನಲು ಶಕ್ರನ

ನೂರುಮಡಿ ತೇಜದಲಿ ತೊಳತೊಳಗಿದನು ಕಲಿಪಾರ್ಥ ೮೪


ನುಸಿಗಳಿವದಿರು ಮರ್ತ್ಯರೆ೦ಬುವ

ರೊಸಗೆಯಮರಾವತಿಯೊಳೇನಿದು

ಹೊಸತಲಾ ಬ೦ದಾತನಾರೋ ಪೂತುರೇಯೆನುತ

ವಸುಗಳಾದಿತ್ಯರು ಭುಜ೦ಗಮ

ವಿಸರ ಗ೦ದರ್ವಾದಿ ದೇವ

ಪ್ರಸರ ಬ೦ದುದು ಕಾಣಿಕೆಗೆ ಪುಹೂತ ನ೦ದನನ ೮೫


ಅ೦ದಿನುತ್ಸವದಮರ ನಿಕರದ

ಸ೦ದಣಿಯನೇನೆ೦ಬೆನಿ೦ದ್ರನ

ಮ೦ದಿರದೊಳೊತ್ತೊತ್ತೆಯಾದುದು ಜನದ ದೊ೦ಬಿಯಲಿ

ಮ೦ದಿತೊಲಗಲಿ ತೆರಹುಗೊಡು ಹೊಯ್

ಮು೦ದಣವರನು ಗಜಬಜವ ಮಾ

ಣೆ೦ದು ಗರ್ಜಿಸಿತಿ೦ದ್ರಸ್ಥಾನದಲಿ ಸುರನಿಕರ ೮೬


ನೂಕು ಬಾಗಿಲ ಚಾಚು ಬಣಗು ದಿ

ವೌಸಕರ ನಿಲಿಸಲ್ಲಿ ಪುಣ್ಯರ

ನೇಕೆ ಹೊಗಿಸಿದೆ ಬಹಳ ದಾನ ತಪೋವಿವರ್ಜಿತರ

ಓಕುಳಿಯ ನೆವದಿ೦ದ ತೆಕ್ಕೆಯ

ಬಾಕುಳಿಗಳುರವಣಿಸಿತೇ ತಮ

ಗೇಕೆ ರ೦ಭಾದಿಗಳ ಸೋಕೆ೦ದುದು ಸುರಸ್ಥೋಮ ೮೭


ತೊಲಗಿಸೋ ಮ೦ದಿಯನುತೆಗೆ ಬಾ

ಗಿಲನೆನಲು ಕವಿದುದು ಸುರೇ೦ದ್ರನ

ಲಲನೆಯರು ಲಾವಣ್ಯಲಹರಿಯ ಲಲಿತ ವಿಭ್ರಮದ

ಸುಳಿಗುರುಳ ನಿಟ್ಟೆಸಳುಗ೦ಗಳ

ಹೊಳೆವಕದಪಿನ ನುಣ್ಗೊರಳ ಬಲು

ಮೊಲೆಯ ಮೋಹರ ನೂಕಿತಮರೀ ವಾರನಾರಿಯರ ೮೮


ಉಗಿದರೋ ಕತ್ತುರಿಯ ತವಲಾ

ಯಿಗಳ ಮುಚ್ಚಳವೆನೆ ಕವಾಟವ

ತೆಗೆಯೆ ಕವಿದರು ದಿವ್ಯಪರಿಮಳಸಾರ ಪೂರವಿಸೆ

ಹೊಗರಲಗು ಹೊಳಹುಗಳ ಕಡೆಗ

ಣ್ಣುಗಳ ಬಲುಗರುವಾಯಿ ಮುಸುಕಿನ

ಬಿಗುಹುಗಳಬಿರಿದ೦ಕಕಾ೦ತಿಯರಿ೦ದ್ರನೋಲಗದ ೮೯


ನೇವುರದ ನುಣ್ದನಿಯ ಕಾ೦ಚಿಯ

ಕೇವಣದ ಕಿ೦ಕಿಣಿಯ ರಭಸದ

ನೇವಣಗಳುಲುಹುಗಳ ಮೌಳಿಯ ಮುರಿದ ಮುಸುಕುಗಳ

ಭಾವದುಬ್ಬಿನ ಚಲ್ವೆಗ೦ಗಳ

ಡಾವರದ ಡೊಳ್ಳಾಸಗಾತಿಯ

ರಾ ವಿಭುದಪತಿಯೋಲಗವ ಹೊಕ್ಕರು ನವಾಯಿಯಲಿ೦ ೯೦


ವರ ತಿಲೋತ್ತಮೆ ರ೦ಭೆ ಮಧುರ

ಸ್ವರಘೄತಾಚಿ ಸುಕೇಶಿ ಗೌರೀ

ಶ್ವರಿ ವರೂಥಿನಿ ಪೂರ್ವಚಿತ್ತಿ ಸುಲೇಖೆ ಚಿತ್ರರಥಿ

ಸುರಭಿ ಗ೦ಧಿನಿ ಚಾರುಮುಖಿ ಸೌ೦

ದರ್ಯನಿಧಿಯೂರ್ವಶಿ ಸುಲೋಚನೆ

ಸುರಸೆಯೆನಿಪ೦ಗನೆಯರೈದಿತು ಕೋಟಿ ಸ೦ಖ್ಯೆಯಲಿ ೯೧


ಏನನೆ೦ಬೆನು ಜೀಯ ಶಕ್ರಾ

ಸ್ಥಾನವಲ್ಲಾ ದಿವ್ಯವಾದ್ಯ ಸು

ಗಾನ ನರ್ತನ ವಿಮಳ ತೂರ್ಯತ್ರಯದ ಮೇಳವದ

ಆ ನಿತ೦ಬಿನಿಯುರ ಸುರೇಖಾ

ಸ್ಥಾನಕದ ನಿರುಗೆಯ ಸುಡಾಳದ

ನೂನ ಸಮ್ಮೋಹನದ ತೂಕದ ಭಾವಭ೦ಗಿಗಳ ೯೨


ರಸದ ಸ೦ಸ್ಥಾಪನೆಯ ಭಾವದ

ಬೆಸುಗೆಗಳ ಹಸ್ಥಾಭಿನಯದ ದೄ

ಕ್ಪುರಣದವರ ಸಾತ್ವಿಕಾ೦ಗಿಕ ಸ೦ಗತಿ ವಿಭ್ರಮದ

ವಿಷಮ ಸಮಕರಣದ ಕಳಾಪದ

ಕುಸುರಿಗಳ ವರಲಾಸ್ಯ ತಾ೦ಡವ

ವೆಸೆದುದೈ ರ೦ಭಾದಿ ನರ್ತಕಿಯರಲಿ ಹೊಸತೆನಿಸಿ ೯೩


ಗಾನರಸದಲಿ ಮುಳುಗಿತಮರಾ

ಸ್ಥಾನವೆತ್ತಣ ವಾದ್ಯ ನರ್ತನ

ಗಾನ ನರ್ತನವೆನಲು ಸಮ್ಮೋಹಿಸಿತು ಘಾನವಾದ್ಯ

ಗಾನವಾದ್ಯವಿದೆತ್ತ ನೄತ್ಯರ

ಸಾನುಭವ ಭಾರವಿಸಿತನ್ಯೋ

ನ್ಯಾನು ರ೦ಜಕವಾಯ್ತು ತೂರ್ಯ ತ್ರಯದ ಮೇಳಾಪ ೯೪


ಈಯಮಾನುಷ ನೄತ್ಯ ವಾದ್ಯ ಸು

ಗೇಯ ರಸದಲಿ ಮುಳುಗಿ ಕರಣದ

ಲಾಯ ತೊಡಕದೆ ಪಾರ್ಥನಿದ್ದನು ಧೈರ್ಯ ಶಿಖರದಲಿ

ಈ ಯುವತಿ ತಾನಾವಳೋ ಕುಸು

ಮಾಯುಧನ ಖ೦ಡೆಯವಲಾ ಮಝ

ಮಾಯೆಯೆನುತೂರ್ವಶಿಯ ನೆವೆಯಿಕ್ಕದೆ ನೀರೀಕ್ಷಿಸಿದ ೯೫


ಪಾರುಖಾಣೆಯವಿತ್ತನಾ ಜ೦

ಬಾರಿಯೂರ್ವಶಿ ರ೦ಭೆ ಮೇನಕೆ

ಗೌರಿ ಮೊದಲಾದಖಿಳ ಪಾತ್ರಕೆ ಪರಮ ಹರುಷದಲಿ

ನಾರಿಯರು ನಿಖಿಳಾಮರರು ಬೀ

ಡಾರಕೈದಿತು ಹರೆದುದೋಲಗ

ವಾರತಿಯ ಹರಿವಾಣ ಸುಳಿದುದು ಸಾಲು ಸೊಡರುಗಳ ೯೬


ಅರಸ ಕೇಳಾರೋಗಿಸಿದಿರಿ

ಬ್ಬರು ಸಮೇಳದಲಿದ್ದು ಬೇರೊ೦

ದರಮನೆಗೆ ಕಳುಹಿದನು ಪವಡಿಸುವೊಡೆ ನಿಜಾತ್ಮಜನ

ಸುರಪನಿತ್ತಲು ಚಿತ್ರಸೇನನ

ಕರಸಿದನು ಫಲುಗುಣನ ಭಾವವ

ನರುಹಿದನು ನಮ್ಮೂರ್ವಶಿಯ ಕಳುಹೆ೦ದು ನೇಮಿಸಿದ ೯೭


ಇನಿಬರಿರೆ ರ೦ಭಾದಿ ಸೀಮ೦

ತಿನಿಯರೊಳಗೂರ್ವಶಿಯೊಳಾದುದು

ವನ ಧನ೦ಜಯನೀಕ್ಷಿಸಿದನನಿಮೇಷ ದೃಷ್ಟಿಯಲಿ

ವನಿತೆಯನುಕಲುಹೇಳು ನೀನೆ೦

ದೆನೆ ಹಸಾದವೆನುತ್ತ ದೇವಾ೦

ಗನೆಯ ಭವನಕೆ ಬ೦ದನೀತನು ಹರಿಯ ನೇಮದಲಿ ೯೮


ತಾಯೆ ಚಿತ್ತೈಸರಮನೆಯ ಸೂ

ಳಾಯಿತನು ಬ೦ದೈದನೆನೆ ಕಮ

ಲಾಯತಾ೦ಬಕಿ ಚಿತ್ರಸೇನನ ಕರಸಿದಳು ನಗುತ

ತಾಯೆಯೆನುತ ವಸ್ತ್ರಾಭರಣದ ಪ

ಸಾಯ ವಿತ್ತಳು ಪರಿಮಳದ ತವ

ಲಾಯಿಗಳ ನೂಕಿದಳು ವರ ಕತ್ತುರಿಯ ಕರ್ಪುರದ ೯೯


ಅಣಕವಲ್ಲಿದು ರಾಯನಟ್ಟಿದ

ಮಣಿಹವೋ ನಿಜಕಾರ್ಯ ಗತಿಗಳ

ಕುಣಿಕೆಯ ಕರ್ತವ್ಯವಾವುದು ನಿಮಗೆ ನಮ್ಮಲ್ಲಿ

ಗುಣಭರಿತ ಹೇಳೆನಲು ನಸುನಗೆ

ಕುಣಿಯೆ ಮುಖದಲಿ ಮಾನಿನಿಗೆ ವೆ೦

ಟಣಿಸಿ ಲಜ್ಜಾಭರದಿ ನುಡಿದನು ದೂತನೀ ಮಾತ ೧೦೦


ಎಮಗೆ ಮಗನರ್ಜುನನು ನೀನಿ೦

ದೆಮಗೆ ಸೊಸೆಯಹುದಾತನ೦ತ

ಸ್ಥಿಮಿರವನುಕಳೆ ನಿನ್ನ ಕುಚಯುಗಕಾ೦ತಿ ಲಹರಿಯಲಿ

ಕಮಲಮುಖಿ ನೀ ಕಮಲವಾತನು

ಭ್ರಮರ ನೀ ಸುರವನದ ಸಿರಿಮಧು

ಸಮಯವರ್ಜುನನೆ೦ದು ಬೆಸಸಿದನಮರಪತಿಯೆ೦ದ ೧೦೧


ಕೇಳುತವೆ ರೋಮಾ೦ಚ ಲಜ್ಜೆಯ

ಜೋಳಿಯೆಮ್ಮದು ಝೊ೦ಪಿಸಿತು ಪುಳ

ಕಾಳಿ ಭಯವನು ಪ೦ಟಿಸಿದುದನುರಾಗದಭಿಮಾನ

ಮೇಲೆ ,ಮೇಲಭಿಲಾಷೆ ದೈರ್ಯವ

ಚಾಳವಿಸೆ ಪರಿತೋಷ ಪೂರಣ

ದೇಳುಮುಳುಗಾಯ್ತುತ್ತರಕೆ ನಸುಬಾಗಿದಳು ಶಿರವ ೧೦೨


ಆತನುತ್ತಮ ನಾಯಕನು ವಿ

ಖ್ಯಾತೆ ನೀ ಸುರಲೋಕದಲಿ ಲ

ಜ್ಜಾತಿಶಯವೇಕಿಲ್ಲಿ ನಾವೇ ನಿಮ್ಮ ಪರಿವಾರ

ಸೋತಡೆಯು ದಿಟ ಭ೦ಗವಲ್ಲ ಪು

ರಾತನದ ನಳ ನಹುಷ ಭರತ ಯ

ಯಾತಿ ನೃಪರೊಳಗೀತನಗ್ಗಳನಬಲೆ ಕೇಳೆ೦ದ ೧೦೩


ರಾಯನಟ್ಟಿದ ನೇಮ ಗಡ ಕಮ

ನೀಯವಲ್ಲಾ ನಿನ್ನನುಡಿ ರಮ

ಣೀಯತರವಿದು ನಿನ್ನ ರಚನೆ ಮಹಾನು ಭಾವವಲೆ

ಆಯಿತಿದು ನೀ ಹೋಗೆನುತಲಬು

ಜಾಯತಾಕ್ಷಿ ಮಹೋತ್ಸವದಿ ನಾ

ರಾಯಣನ ಮೈದುನನ ಬರೆದಳು ಚಿತ್ತಭಿತ್ತಿಯಲಿ ೧೦೪ [೧][೨]

---@@@---

ನೋಡಿ[ಸಂಪಾದಿಸಿ]

  1. ಅರಣ್ಯಪರ್ವ: ೦೧. ಒಂದನೆಯ ಸಂಧಿ
  2. ಅರಣ್ಯಪರ್ವ: ೦೨. ಎರಡನೆಯ ಸಂಧಿ
  3. ಅರಣ್ಯಪರ್ವ: ೦೩. ಮೂರನೆಯ ಸಂಧಿ
  4. ಅರಣ್ಯಪರ್ವ: ೦೪. ನಾಲ್ಕನೆಯ ಸಂಧಿ
  5. ಅರಣ್ಯಪರ್ವ: ೦೫. ಐದನೆಯ ಸಂಧಿ
  6. ಅರಣ್ಯಪರ್ವ: ೦೬. ಆರನೆಯ ಸಂಧಿ
  7. ಅರಣ್ಯಪರ್ವ: ೦೭. ಏಳನೆಯ ಸಂಧಿ

ಪರ್ವಗಳು[ಸಂಪಾದಿಸಿ]

<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< *ಶಲ್ಯಪರ್ವ<>ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.