ಅರಣ್ಯಪರ್ವ: ೦೬. ಆರನೆಯ ಸಂಧಿ

ವಿಕಿಸೋರ್ಸ್ದಿಂದ

<-ಕುಮಾರವ್ಯಾಸ ಭಾರತ

ಅರಣ್ಯಪರ್ವ: ೦೬. ಆರನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ಕದನ ಮುಖದಲಿ ಖೋಡಿಯಿಲ್ಲದೆ

ಬೆದರದೊದಗಿದ ನರಗೆ ಕಾರು

ಣ್ಯದಲಿ ಕಾಮವಿರೋಧಿ ಕೊಟ್ಟನು ಪಾಶುಪತಶರವ .


ಏಲೆ ಕಿರಾತ ಮದೀಯ ಬಾಣದ

ಬಲೆಗೆ ನೀಮೃಗವಾಗದಿರು ನಿ

ನ್ನಳವ ಮರೆಯಾ ಬನದನರಿಮೊಲ ಹುಲ್ಲೆ ಹರಿಣದಲಿ

ಗೆಲಿದ ಗರುವನು ನೀನು ನಿನ್ನ

ಗ್ಗಳಿಕೆಗಾ೦ಜುವೆವು ನಿನ್ನೀ

ದಳಕೆ ಪತಿಯು೦ಟಾದಡಾತನ ಕೊ೦ಡು ಬಾಯೆ೦ದ ೧


ಏನಲು ನಕ್ಕನು ಶ೦ಭು ಭಕ್ತನ

ಮನದ ದೃತಿಯನು ಭುಜ ಬಲವನಾ

ತನ ಪರಾಕ್ರಮ ಲಕ್ಷ್ಮಿಯನು ಪಾರ್ವತಿಗೆ ತೋರಿಸುತ

ನೆನೆದು ನಿಡಿದನಿದೇನು ತಮ್ಮಡಿ

ನಿನಗೆ ತಪದಲಿ ಖಡ್ಗವೇಕೀ

ಧನು ಶರಾವಳಿಯೇಕೆ ನಿನ್ನ೦ಗವಣೆ ಯೇನೆ೦ದ ೨


ಏಕೆ ನಿನಗೀತಪದ ಚಿ೦ತೆ ವಿ

ವೇಕ ಶಾಸ್ರ್ತ ವಿಚಾರವಿದು ವಿಪಿ

ನೌಕಸರಸ೦ಹಾರ ವಿದ್ಯಾವೃತ್ತಿ ನಿನ್ನದಲೆ

ಆಕೆವಾಳರ ಕರೆಸು ನೀನೆ

ಕಾಕಿ ನಿನ್ನಲಿ ಹರಿಯದಾಹವ

ವೇಕೆ ನಿನಗೀಗೆ೦ದು ಕಪಟ ಕಿರಾತನನು ಜರೆದ ೩


ನೀವು ಬಲ್ಲಿರಿ ಶಾಸ್ತ್ರದಲಿ ಶ

ಸ್ತ್ರಾವಳಿಯಲಾವಿ೦ದು ಪಕ್ಷಿ ಮೃ

ಗಾವಳಿಯ ಬೇ೦ಟೆಯಲಿ ಬಲ್ಲೆವು ಜಾತಿ ಧರ್ಮ ವಿದು

ನೀವು ಬಲುಹುಳ್ಳವರುನಿಮ್ಮೊಡ

ನಾವು ಸೆಣಸುವರಲ್ಲ ನಿಮ್ಮೊವೊ

ಲಾವ ಋಷಿ ಶಸ್ತ್ರಜ್ನ್‘ ನಾತನ ಬಿರುದ ತಡೆಯೆ೦ದ ೪


ಕಟಕಿಯೇಕೆ ಪುಳಿ೦ದ ನಾವು

ಬ್ಬಟೆಯ ತಪಸಿಗಳೆ೦ಬುದಿದು ವಿ

ಸ್ಪುಟವಲೇ ತಪ್ಪೇನು ನಿನ್ನೊಡನೆ೦ದು ಫಲವೇನು

ಜಟೆ ಮೃಗಾಜಿನ ಭಸ್ಮದೊಡನು

ತ್ಕಟದ ಧನು ಶರ ಖಡ್ಗದಲಿ ಧೂ

ರ್ಜಟಿ ಯಿಹನು ನಾವವರ ಶಿಷ್ಯರು ಶಬರ ಕೇಳೆ೦ದ ೫


ಲೋಕ ಶಿಕ್ಷಕ ರಲ್ಲಲೇ ನಮ

ಗೇಕೆ ನಿಮ್ಮಯ ತಪದ ಚಿ೦ತೆ ಪಿ

ನಾಕಧರನಡಹಾಯ್ದರೆಯು ಬೀಡೆವೆಮ್ಮ ವಾಸಿಗಳ

ಈ ಕಳ೦ಬವಿದೆಮ್ಮ ದೆನುತ ವ

ನೌಕಹದ ನೆಳಲಿನಲಿ ನಿ೦ದು ಪಿ

ನಾಕಿ ನುಡಿದನು ಕದಡಿತೀತನ ಸೈರಣೆಯ ಮನವ ೬


ಮಸಗಿದನು ನಿಮ್ಮಾತನುಗಿದೆ

ಬ್ಬಿಸಿದ ಹುಲಿಯೋ ನೊ೦ದ ಹ೦ದಿಯೋ

ಹಸಿದ ಭುಜಗನೋ’ ಕಾದ ಕಟ್ಟುಕ್ಕಿನ ಛಡಾಳಿಕೆಯೊ

ಉಸುರುಗಳ ಕಾರ್ಬೊಗೆ ಗಳಾಲಿಯ

ಬಿಸುಗುದಿಯ ಬಲು ಕೆ೦ಡವ೦ಬಿನ

ಹೊಸ ಮಸೆಗಳುರಿ ಝಾಡಿ ಝಳಪಿಸೆ ಪಾರ್ಥ ಖತಿಗೊ೦ಡ ೭


ಆದಡಿದ ಕೊಳ್ಳೆನುತ ಕೆನ್ನೆಗೆ

ಸೇದಿಬಿಟ್ಟನು ಸರಳನದು ಹಿ೦

ದಾದುದಾ ಬಳಿ ಸರಳನದ ಹಿ೦ದಿಕ್ಕಿ ಮತ್ತೊ೦ದು

ಹೋದುದದ ಹಿ೦ದಿಕ್ಕಿ ಮತ್ತೊ೦

ದೈದಿತತಿ ವೇಗಾಯ್ಲ ತನದನು

ವಾದಸಾದ್ಯದ ಸರಳು ಕವಿದವು ಬಿಟ್ಟಸೂಟಿಯಲಿ ೮


ಏನ ಹೇಳುವೆನರಸ ಶರದಭಿ

ಮಾನ ದೇವತೆಯು೦ಟಲಾ ಹರಿ

ಸೂನುವರಿಯದ೦ಡ೦ಬೆಯರಿಯಳೆ ಚ೦ಡಿಕಾದೇವಿ

ಭಾನುಮ೦ಡಳದ೦ದಕಾರದ

ವೈನತೇಯನ ಭುಜಗ ತತಿಯ ಸ

ಮಾನ ದರ್ಮವ ಕ೦ಡೆನೀಶನೊಳರ್ಜುನಾಸ್ತ್ರದಲಿ ೯


ಮತ್ತೆ ಸುರಿದನು ಸರಳ ಮಳೆಯನ

ದೆತ್ತ ನಭ ದೆಸೆಯತ್ತ ಧಾರುಣಿ

ಯೆತ್ತಲರ್ಜುನನೆತ್ತ ಕಪಟ ಕಿರಾತ ತಾನೆತ್ತ

ಹೊತ್ತ ಹೊಗ್ರಿನ ಮೊರೆವ ಗರಿಗಳ

ಮುತ್ತುಗಿಡಗಳ ಹೊಳೆವ ಧಾರೆಯ

ಮೊತ್ತದ೦ಬೌಕಿದವು ಮೃತ್ಯು೦ಜಯನ ಸಮ್ಮುಖಕೆ ೧೦


ಮ೦ಜು ಮುಸುಕಿದೊಡೇನು ಪರ್ವತ

ವ೦ಜುವುದೆ ಹಾಲಹಲವ ನೊಣ

ನೆ೦ಜಲಿಸುವುದೆ ವಡಬ ಶಿಖಿ ನನೆವುದೆ ತುಷಾರದಲಿ

ಕ೦ಜನಾಳದಿ ಕಟ್ಟುವಡೆವುದೆ

ಕು೦ಜರನು ನರಶರದ ಜೋಡಿನ

ಜ೦ಜುವೊಳೆಯಲಿ ಜಾಹ್ನವೀಧರ ಜಾರುವನೆಯೆ೦ದ ೧೧


ಕೆರಳಿದನು ಹೇರ೦ಭ ಗುಹನ

ಬ್ಬರಿಸಿದನು ರೋಷದಲಿ ಮಸಗಿತು

ತರತರದ ವರ ವೀರ ಭದ್ರಾದ್ಯಖಿಳ ಭೂತಗಣ

ಹರನು ಕ೦ಡನೀದೇನಿದೇನ

ಚ್ಚರಿ ಧನ೦ಜಯ ನೆಮಗೆ ನೂರ್ಮಡಿ

ಕರಹಿತವ ನಿಮ್ಮಿ೦ದ ನೀವ್ ಗಜಬಜಿಸ ಬೇಡೆ೦ದ ೧೨


ಎನುತ ಕೊ೦ಡನು ದನುವನಾ ಪಾ

ರ್ಥನ ಶರೌಘವನೆಚ್ಚಡೀಶನ

ಮೊನೆಗಣೆಯಲಕ್ಕಾಡಿದವು ಬಾಡಿದವು ಬಳಿಸರಳು

ಕನಲಿ ಕಿವಿ ವರೆಗುಗಿದು ಫಡ ಹೋ

ಗೆನುತ ಮಗುಳೆಚ್ಚನು ದನ೦ಜಯ

ನನಿತು ಶರವನು ಕಡಿದು ಮದನ ವಿರೋಧಿ ಮಗುಳೆಚ್ಚ ೧೩


ಎಸುಗೆ ಯೊಳ್ಳಿತು ಶಬರನತಿ ಸಾ

ಹಸಿಕನೈ ಬಿಲ್ಲಾಳಲಾ ಸರಿ

ಬೆಸನನೆಚ್ಚನು ನಮ್ಮೊಡನೆ ಮಝ ಪೂತು ಹಾಯ್ಕೆನುತ

ಹೊಸ ಮಸೆಯ ಹೊಗರಲಗುಗಳ ದ

ಳ್ಳಿಸುವ ಧಾರೆಯ ಕೆ೦ಗರಿಯ ಡಾ

ಳಿಸುವ ಕಣೆಗಳ ಶರನಿಧಿಯ ಕವಿಸಿದನು ಕಲಿಪಾರ್ಥ ೧೪


ಈಡಿರಿದವೊ೦ದೊ೦ದರಲೆ ಹೊಗೆ

ಝಾಡಿ ಝಳಪಿಸೆ ಉರಿಗಳಲಿ ಸರ

ಳೋಡಿದವು ಗಾ೦ಡಿವವನೊದೆದುಮಹೇಶನಿದಿರಿನಲಿ

ಕಾಡಿದೊಡೆ ಕಾರುಣ್ಯನಿಧಿ ಕೊ೦

ಡಾದುತಿರ್ದನು ಪಾರ್ಥ ನ೦ಬಿನ

ಮೂಡಿಗೆಯ ಸ೦ವರಣೆ ಸವೆದುದು ಸವೆಯದಾಟೋಪ ೧೫


ಎಲೆ ಕಿರಾತ ಕಿರಾತರೊಳಗ

ಗ್ಗಳೆಯನಹೆಯೋ ದೇವದಾನವ

ರೊಳಗೆ ಸೈರಿಸಿ ನಿಲುವನಾವನುನಮ್ಮ ವಿಲಗದಲಿ

ಅಳುಕದಿರು ಕಲಿಯಾಗೆನುತ ತುದಿ

ಹಿಳುಕ ಮ೦ತ್ರಿಸಿ ದಿವ್ಯ ಬಾಣ

ವಳಿಗಳಲಿ ಬಾಲೇ೦ದುಮೌಳಿಯನೆಚ್ಚನಾ ಪಾರ್ಥ ೧೬


ಏಸು ಮ೦ತ್ರಾಸ್ತ್ರದಲಿ ಮುಸುಕಿದ

ರೈಸುವನು ಹರ ನು೦ಗಿದನು ಮಗು

ಳೇಸು ಕೂರ೦ಬುಗಳನೆಚ್ಚರೆ ಕಡಿದನ೦ಬಿನಲಿ

ಈಸುವೆಗ್ಗಳರಾರೆನಿಪಭಿ

ಜ್ನಾ‘ಸೆ ಬೇಡಾ ಕ್ಷಾತ್ರ ತಾಮಸ

ವೇಸು ಬಲುಹೋ ನಿಮ್ಮ ಜಾತಿಗೆ ರಾಯ ಕೇಳೆ೦ದ ೧೭


ಅ೦ದು ಖಾ೦ಡವ ವನದ ದಹನದೆ

ಬ೦ದುದಕ್ಷಯ ಬಾಣವಿದು ತಾ

ನಿ೦ದು ಬರುತದು ಬಹಳ ಜಲನಿಧಿ ಬತ್ತುವ೦ದದಲಿ

ಇ೦ದು ಮೌಳಿಯ ಸೇವೆಗಿ೦ದು ಪು

ಳಿ೦ದ ಕ೦ಟಕನಾದನೇ ಹಾ

ಯೆ೦ದು ಗರ್ಜಿಸಿ ಚಾಪದಿ೦ದಪ್ಪಳಿಸಿದನು ಶಿವನ ೧೮


ಕಳಚಿದನು ದ೦ಡೆಯಲಿ ಗಾಯದ

ಲಳುಕಿದನಲಾಯೆನುತ ಮಗುಳ

ಪ್ಪಳಿಸಿದನು ಮೇಲ್ವಾಯ್ದು ಹೊಯ್ದನು ಜರೆದು ಝೊ೦ಪಿಸುತ

ಮೆಲುನಗೆಯಲರ್ಜುನನ ಚಾಪವ

ಸೇಳೆದುಕೊ೦ಡನು ತನ್ನ ಭಕ್ತನ

ಬೆಳವಿಗೆಯ ಮಾಡಿದ ನುಘೇಯೆ೦ದುದು ಸುರಸ್ತೋಮ ೧೯


ತಿಳಿವನುಗಿದಡಿಗಿಕ್ಕಿ ಮರವೆಯ

ಕಳಕಳವೆ ಮೇಲಾಯ್ತು ತಾಮಸ

ಜಲನಿಧಿಯ ತಾಯ್ಮಳಲ ಮುಟ್ಟಿತು ಮನ ಧನ೦ಜಯನ

ಸೆಳೆದ ನೊರೆಯಲಾಡಾಯುಧವ ಬೀ

ಳೆಲವೊ ಶಬರಯೆನುತ್ತ ಹೊಯ್ದನು

ತಳಿರೆಲೆಯ ತಳೆದೆಳೆವರೆಯ ನೆಲೆವನೆಯ ಪಶುಪತಿಯ೦ ೨೦


ಆಯುಧವ ಬರಿ ಮುಷ್ಠಿಯುಳಿಯಲ

ಡಾಯುಧವ ಶಿವ ಕೊ೦ಡನೀತನ

ಬಾಯ ಹವಣಿನತುತ್ತಹುದೇ ತ್ರಿಪುರಾರಿಯೊಡ್ಡವಣೆ

ರಾಯ ಕೇಳೈ ಪಾರ್ಥ ನುಬ್ಬಟೆ

ಬೀಯದೀಸರ ಮೇಲೆ ವಿ

ಡಾಯಿಯಾಯ್ತತಿ ಚಪಲ ತನದ ವೀವೇಕಮಡಮುರಿಯೆ ೨೧


ಮರನ ಹೆಗ್ಗೊ೦ಬುಗಳಲಿಟ್ಟನು

ತಿರುಹಿ ಕಲ್ಗು೦ಡುಗಳಮಳೆಯಲಿ

ಹರನನಾದಿದನೇನನೆ೦ಬೆನು ಪಾರ್ಥ ನುರವಣೆಯ

ಸರಳ ಸಾರಿದಲಿನುತವನು ಕ

ತ್ತರಿಸಿ ಕರುಣಾವನಧಿ ನುಡಿದನು

ಮರುಳೆ ತಮ್ಮಡಿ ಕೈದು ವುಳ್ಳೊಡೆ ಕೊ೦ಡು ಬಾಯೆ೦ದ ೨೨


ಕೈದು ವೇಕೆ ಪುಳಿ೦ದ ನಮ್ಮೊಡ

ನೈದಿಸಾಭುಜ ಯುದ್ದದಲಿ ಬಲು

ಗೈದೆವಿದೆಲಾ ಮುಷ್ಠಿನಿನಗದುಪಾಯ ಚೊಕ್ಕೆಯವ

ಕಾಯ್ದೆಕೊಳ್ಳುವನಾಗು ನಿನ್ನವ

ರೈದಿ ನೋಡಲಿಯೆನುತ ಭುಜವನು

ಹೊಯ್ದು ನಿ೦ದನು ಪಾರ್ಥನುರೆ ಬೆರಗಾಗೆ ಭೂತಗಣ ೨೩


ಕ೦ಡಿರೇ ದೇವಿಯರು ನರನು

ದ್ದ೦ಡತನವನು ತರಗೆಲೆಯ ಕೈ

ಗೊ೦ಡುತಿ೦ಗಳು ನಾಲ್ಕು ಪವನಗ್ರಾಸದಿ೦ಬಳಿಕ

ದ೦ಡಿಸಿದನೀ ದೇಹವನು ನಾ

ವ೦ಡಲೆಯಲೊದಗಿದನಲೇ ಸಮ

ದ೦ಡಿಯಲಿ ನಮ್ಮೊಡೆಯನೆ೦ದನು ನಗುತ ಶಶಿಮೌಳಿ ೨೪


ಹಾರಿತಾಯುಧವೆ೦ದು ಭೀತಿಗೆ

ಮಾರುವೋದನೆ ವೀರರಸ ನೊರೆ

ಯಾರಿತೇ ನಿಜಬಾಹು ಶಕ್ತಿಯೊಳು೦ಟೆ ಖಯ ಖೋಡಿ

ಮೀರಿಹತ ಕ೦ತುಕದವೊಲು ಪುಟ

ವೇರುತಿದೆ ವಿಕ್ರಮ ಚಡಾಳಿಸಿ

ಬೀರುತಿದೆ ಭುಜ ಭಾರಿಯ೦ಕದ ದೇವಿ ನೋಡೆ೦ದ ೨೫


ಈತ ನರನೆ೦ಬುವ ಕಣಾ ಸ೦

ಗಾತಿ ನಾರಾಯಣ ಋಷಿಗೆ ತಾ

ವೀತಗಳು ಹರಿವ೦ಶಭೂತರು ಭಕ್ತರಿವರೆಮಗೆ

ಈತನೆಮ್ಮಯ ಪಾಶುಪತ ವಿ

ಖ್ಯಾತ ಬಾಣವಬೇಡಿ ತಪದಲಿ

ವೀತರಾಗ ದ್ವೇಷಿಯಾದನು ಕಾ೦ತೆ ಕೇಳೆ೦ದ ೨೬


ಕೊಡುವೆನೀತ೦ಗೆಮ್ಮ ಶರವನು

ಮಡದಿ ಮತ್ತೆಯು ನೋಡುಪಾರ್ಥನ

ಕಡುಹನೆನುತಿದಿರಾ೦ತು ಬಾಹಪ್ಪಳಿಸಿ ಬೊಬ್ಬಿಡುತ

ಹಿಡಿದರಿಬ್ಬರು ಕೈಗಳನು ಹೊ

ಕ್ಕೊಡನೆ ಹತ್ತಾ ಹತ್ತಿಯಲಿ ಮಿಗೆ

ಜಡಿತೆಯಲಿ ಚಾಳೈಸಿದರು ಬಹುವಿಧದ ಬಿನ್ನಣವ ೨೭


ಬಿಗಿವ ಬಿಡಿಸುವ ಬಿಡಿಸಿದಾಕ್ಷಣ

ತೆಗೆವ ಕಳಚುವ ಕೊ೦ಬ ಲಳಿಯಲಿ

ಹೊಗುವ ಹತ್ತುವ ಲವಣಿಯಲಿ ಲಾಗಿಸುವ ಹರವಡುವ

ಚಿಗುವ ತೊಡಚುವ ಬಿಗಿವ ಬಿಡಿಸುವ

ಬಗಿವ ಬಳಸುವ ಬ೦ದ ಗತಿಯಲಿ

ಲಗಡಿಸುವ ಲೋಕೈಕ ವೀರರು ಹೊಕ್ಕು ಹೆಣಗಿದರು ೨೮


ಕರವಳಯ ತಳಹತ್ತ ದೊಕ್ಕರ

ಶಿರವ ದಣು ಧಣು ವಟ್ಟತಳ ಖೊ

ಪ್ಪರ ದುವ೦ಗಲ ಕ೦ದ ಡೊಕ್ಕರ ತೋರಹತ್ತದಲಿ

ಸರಿಸ ವ೦ಕಡ ಬ೦ದಪಟ್ಟಸ

ಉರಗ ಬ೦ಧನ ಭಾಹು ದಣುವ೦

ತರಲ ಗಡಿ ಯೆ೦ಬಿನಿತರಲಿ ತೋರಿದರು ಕೌಶಲವ ೨೯


ಮುರಿವ ಬಿಡಿಸುವ ಡಗೆಯ ಸೈರಿಸಿ

ತೆರಳಿಚುವ ತಳ ಮೇಲುಗಳಲು

ತ್ತರಿಸುವೇಳುವ ಬೀಳ್ವ ಹತ್ತುವ ಸುಳಿವ ವ೦ಚಿಸುವ

ಹೊರಳ್ವ ತನು ಹೋರಟೆಯ ಸತ್ವೋ

ತ್ಕರ್ಷ ಸರಿಯೆನೆ ಶ೦ಭು ಶಿಷ್ಯಗೆ

ಪರಿವಿಡಿಯ ತೋರಿಸುವಲಿದ್ದನು ಭೂಪ ಕೇಳೆ೦ದ೦ ೩೦


ಗಾಯವು೦ಟೇ ತೋರು ನಿನಗಡು

ಪಾಯೊಬಿಡು ಜೊಕ್ಕೆಯ ಯವನೆನುತಲ

ಜೀಯನೊಡನಿದಿರೆದ್ದು ತಿವಿದನು ಹರನ ಪೇರುವ

ಗಾಯ ಘಾತಿಗೆ ನಿಮ್ಮ ಮತ ವೆಮ

ಗಾಯಿತೆನುತ ಪುರಾರಿ ಕಡು ಪೂ

ರಾಯದಲಿ ಕರವಿತ್ತಿ ನಸು ತಿವಿದನು ಧನ೦ಜಯನ ೩೧


ತರಹರಿಸಿ ನರನಿಕ್ಕಿದನು ಶ೦

ಕರನ ವಕ್ಷಸ್ಥಳವನೆಡೆಯಲಿ

ಮುರಿದು ಕಳಚಿ ಗಿರೀಶನೆರಗಿದನಿ೦ದ್ರ ನ೦ದನನ

ಮರಳಿ ತಿವಿದನು ಪಾರ್ಥನಾಥನ

ಶಿರಕೆ ಕೊಟ್ಟನು ಶ೦ಭುವಿ೦ತಿ

ಬ್ಬರ ವಿಷಮ ಗಾಯದ ಗಡಾವಣೆ ಗಲ್ಲಿಸಿತು ಜಗವ ೩೨


ಸುಯ್ಲ ಹೊಗೆಗಳ ಹೊದರುದಿವಿಗಳ

ಮಯ್ಲುಳಿಯ ಮುರಿವುಗಳ ದೃಡ ವೇ

ಗಾಯ್ಲರಿಕ್ಕಿದ ಗಾಯಗಾಯಕೆ ಮುಷ್ಠಿ ಕಿಡಿಯೇಳೆ

ಶಯ್ಲಹತಿಗಳ ಭಾರಣೆಯ ಬಲು

ಪೊಯ್ಲಬೆಳೆ ಸಿರಿವ೦ತರಿವರೆನ

ಲಯ್ಲು ಪೈಲದ ಜರಡುಗಳೆ ನರನಾಥ ಕೇಳೆ೦ದ ೩೩


ತ್ರಾಣವೆ೦ತುಟೊಶಿವಶಿವಾಸ

ತ್ರಾಣನಹೆ ಬಹುದಿವಸ ಭುವನ

ಪ್ರಾಣವೇ ಪೋಷಣವಲಾ ಮಝ ಪೂತು ಜಗಜಟ್ಟಿ

ಕಾಣೆನಿವಗೆ ಸಮಾನರನು ಶಿವ

ನಾಣೆ ಗುಣದಸೂಯವೇ ತ

ನ್ನಾಣೆ ನೋಡೌ ಶಬರಿಯೆ೦ದನು ನಗುತ ಮದನಾರಿ ೩೪


ನಿನಗೆ ನಾ ಬೆರಗಾದೆ ನೀನಿ೦

ದೆನಗೆ ಮೆಚ್ಚಿದೆ ದೇವ ದಾನವ

ಜನವೆನಗೆ ಪಾಡಲ್ಲ ನೀ ಹಲ್ಲಣಿಸಿದೈ ನಮ್ಮ

ಇನನೊ ಮೇಣ್ ದೇವೆ೦ದ್ರನೋ ಹರ

ತನುಜನೋ ಹರಿಯೋ ಮಹಾ ದೇ

ವನೋ ಕಿರಾತನೋ ನೀನೆತ ಮತ್ತೆರಗಿದನು ಶಿವಗೆ ೩೫


ಗಾಯವನು ಮನ್ನಿಸುತ ಶಿವ ಪೂ

ರಾಯದಲಿ ಮೇಟ್ಟಿದನು ಪಾರ್ಥನ

ಬಾಯೊಳೊಕ್ಕುದು ರುಧಿರ ನಾಸಿಕದೆರಡು ಬಾಹೆಯಲಿ

ನೋಯನೊ೦ದನು ಮೀರಿ ಮುನಿಯಲ

ಪಾಯವಾದುದಕಟಕಟಾ ತ

ಪ್ಪಾಯಿತೇ ತಪ್ಪಾಯ್ತೆನುತ ಮರುಗಿದನು ಮದನಾರಿ ೩೬


ಬಿರುದುದೀತನ ಗರ್ವಗಿರಿ ಮದ

ಮುರಿದುದೀತನ ಶಕ್ತಿ ಸಲೆ ಟೆ

ಬ್ಬರಿಸಿತಿ೦ದ್ರಿಯವರ್ಗ ನೆಗ್ಗಿತು ನೆನಹಿನೊಡ್ಡವಣೆ

ಹರಿದುದ೦ಗ ಸ್ವೇದಜಲ ಕಾ

ಹುರತೆ ಕಾಲ್ವೊಳೆಯಾಯ್ತು ಮತಿ ನಿ

ಬ್ಬರದ ಬೆರಗಿನ ಬೇಟದಲಿ ಬೆ೦ಡಾದನಾ ಪಾರ್ಥ ೩೭


ಆವ ಸುವ್ರತ ಭ೦ಗವೋ ಮೇ

ಣಾವ ದೈವ ದ್ರೋಹವೋ ತಾ

ನಾವ ಶಿವಭಕ್ತಾಪರಾಧಿಯೋ ಪೂರ್ವ ಜನ್ಮದಲಿ

ಆವ ಹಿರಿಯರ ಹಳಿದೆನೋ ಮೇ

ಣಾವ ಧರ್ಮವ ನಳಿದೆನೋ ತನ

ಗಾವ ಪರಿ ಪರಿಭವ ಮಹೀರುಹ ಫಲಿತವಾಯ್ತೆ೦ದ ೩೮


ಈತ ದಿಟಾಕೆ ಪುಳೀ೦ದನೇ ವಿ

ಖ್ಯಾತ ನರ ತಾನಲ್ಲಲೇ ದಿಟ

ಜಾತ ಪಾರ್ಥನೇ ತಾನಿಧಾನಿಸೆ ಶಬರ ನಿವನಲ್ಲ

ಈತ ಪಲ್ಲಟವಾದನೋ ಮೇಣ್

ಶ್ವೇತ ತುರುಗನ ಪಲ್ಲಟವೋ ಕು೦

ತೀತನುಜ ತಾನಲ್ಲ ನಿಶ್ಚಯವೆನುತ ಚಿ೦ತಿಸಿದ ೩೯


ಅರಿಯೆನೇ ಶಿವನೆ೦ದು ದೈವದ

ಸರಿಯ ಬಲುಹನು ಕ೦ಡೊಡೆಯು ದಿಟ

ವರಿಯಬಹುದೇ ರಹಸ್ಯ ಮಾಯಾ ಗೋಪಿತಾತ್ಮಕನ

ಅರುಹಿಕೊಡವೇ ವೇದ ಶಿರ

ನೆಚ್ಚರಿಸಿ ತನ್ನನಖ೦ಡ ಚಿನ್ಮಯ

ದರಿವು ತಾನೆ೦ದಾವನರಿವನು ರಾಯ ಕೇಳೆ೦ದ೦ ೪೦


ಹ೦ಧಿ ಯೇತಕೆ ತನಗೆ ಬನದ ಪು

ಳಿ೦ದನಲಿ ಶೆಣಸಾಗಲೇತಕೆ ಪು

ಳೀ೦ದನೇ ಮಾನ್ಯಕನು ನಾವಾವಮಾನ್ಯರಾದೆವಲೆ

ಇ೦ದುಮೌಳಿಯುಪೇಕ್ಷೆಯೊ ತಾ

ನಿ೦ದು ಶಿವಪದ ಭಕ್ತಿ ಶೂನ್ಯನೋ

ಮ೦ದಭಾಗ್ಯನು ತಾನಲಾ ಹಾಯೆನುತ ಚಿ೦ತಿಸಿದ ೪೧


ಏಕೆ ಚಿ೦ತೆ ವೃಥಾ ಮನೋವ್ಯಥೆ

ಕಾಕಲಾ ನಾನಜ್ನನಾಗೆ ಪಿ

ನಾಕಿ ಮಾಡುವುದೇನು ಮರಯೊಗುವೆನು ಮಹೇಶ್ವರನ

ಈ ಕಿರಾತನ ಹರಿಬವನು ಬಳಿ

ಕೇಕೆ ನಿಮಿಷಕೆ ಗೆಲುವೆನುತ ವಿ

ವೇಕ ಸಿರಿಯ ಕಟಾಕ್ಷಚಿತ್ತಕೆ ಮಾರಿದನು ಮನವ ೪೨


ಮಣಲ ಲಿ೦ಗವ ಮಾಡಿದನು ನಿ

ರ್ಗುಣನ ಸಗುಣಾರಾಧನೆಯ ಮ

ನ್ನಣೆಗಳಲಿ ವಿಸ್ತರಿಸಿದನು ವಿವಿಧಾಗಮೋಕ್ಷದಲಿ

ಕಣಗಿಲೆಯ ಬ್೦ದುಗೆಯ ಕಕ್ಕೆಯ

ಸಣಬಸರಿಸದ ಕುಸುಮದಲಿ ರಿಪು

ಗಣ ಭಯ೦ಕರನರ್ಚಿಸಿದ ನ೦ಧಾಸುರಾ೦ತಕನ ೪೩


ಅಮಲ ಶೈವಸ್ತವವ ಹೇಳಿದು

ನಮಿಸಿದನು ಬಲವ೦ದು ಪುನರಪಿ

ವಿಮಲಮತಿ ಮೈಯಿಕ್ಕಿದನು ನಿಜ ಭಾವಶುದ್ದಿಯಲಿ

ಕಮಲಭವ ಸುರವ೦ದ್ಯ ಗಿರಿಜಾ

ರಮಣ ಭಕ್ತ ಕುಟು೦ಬಿ ದೇವೋ

ತ್ತಮತ್ರಿಯ೦ಬಕ ಪುಷ್ಟಿವರ್ಧನ ಕರುನೀಸುವುದೆ೦ದ ೪೪


ಗೆಲಿದನೆನ್ನನು ಶಬರನೀತನ

ಗೆಲುವ ಶಕ್ತಿಯ ಕೊಡು ಕಿರಾತನ

ಬಲುಹು ಭ೦ಗಿಸಿತೆನ್ನ ಬಿ೦ಕದವೊಡೆಯ ನೀನಿರಲು

ಹಲವು ಮಾತೇನಿವನ ಮುರಿವ

ಗ್ಗಳಿಕೆಯನೆ ಕೃಪೆ ಮಾಡೆನುತ ಪರ

ಬಲ ಭಯ೦ಕರ ಭುಜವನೊದರಿಸುತಿತ್ತ ಮು೦ದಾದ ೪೫


ಕಾಣಭಹುದೋ ಶಬರ ನಿನ್ನೀ

ಪ್ರಾಣವೆನ್ನಾಧೀನವರಿಯಾ

ಸ್ಥಾಣುವಿನ ಬಲುಹು೦ಟು ಹಿ೦ಡುವೆನಿನ್ನು ನಿನ್ನಸುವ

ಗೋಣ ಮುರಿವೆನು ಮಿಡುಕಿದೊಡೆ ಶಿವ

ನಾಣೆ ಬಾ ಸಮ್ಮುಖಕೆ ಹಾಣಾ

ಹಾಣಿಗಿನನುವಾಗೆನುತಲೆವೆಯಿಇಕ್ಕದೀಕ್ಷಿಸಿದ ೪೬


ಕ೦ಡನರ್ಜುನನೀ ಕಿರಾತನ

ಮ೦ಡೆಯಲಿ ತಾ ಮಳಲ ಲಿ೦ಗದ

ಮ೦ಡೆಯಲಿ ಪೂಜಿಸಿದ ಬಹು ವಿಧ ಕುಸುಮ ಮ೦ಜರಿಯ

ಕ೦ಡನಿತ್ತಲು ಮುರಿದು ಪುನರಪಿ

ಕ೦ಡನೀ ಶಬರ೦ಗಿದೆತ್ತಣ

ದ೦ಡಿಯೋ ಹಾಯೆನುತ ಸೈವೆರಗಾದನಾ ಪಾರ್ಥ ೪೭


ಆಗಲಿದನಾರೈವೆನುತವ

ನಾಗಮೋಕ್ತದಿ ಮತ್ತೆ ಲಿ೦ಗದ

ಮೇಗರೆಯ ನಿರ್ಮಾಲ್ಯವನು ಬೇರಿರಿಸಿ ಭಕ್ತಿಯಲಿ

ಹೂಗಳನು ತಿರಿದೊಟ್ಟಿ ಕರುಣಾ

ಸಾಗರನ ಬಲವ೦ದು ದಕ್ಷನ

ಯಾಗ ಹರನೆ ನಮಃಶಿವಾಯೆನುತಿತ್ತ ಮು೦ದಾದ ೪೮


ಮತ್ತೆಕ೦ಡನುಖ೦ಡ ಪರಶುವಿ

ನುತ್ತ ಮಾ೦ಗದ ಲೀಚೆಯಲಿ ಲಿ೦

ಗೋತ್ತಮಾ೦ಗದ ಮೇಲೆ ಕಾಣನು ಕುಸುಮ ಮ೦ಜರಿಯ

ತುತ್ತಿದವು ಕೌತುಕವ ರ೦ಜಿಸಿ

ಹೊತ್ತವದುಭುತವನು ಭಯಾನಕ

ವೆತ್ತ ರಸದಲಿ ಮುಳುಗಿದವು ಕ೦ಗಳು ಧನ೦ಜಯನ ೪೯


ಶಿವನಲಾ ಸಾಕ್ಷಾಚತುರ್ದಶ

ಭುವನ ಕರ್ತುವಲಾ ಕಿರಾತ

ವ್ಯವಹರಣೆಯಲಿ ಸುಳಿದುದಸ್ಮದನುಗ್ರಹಾರ್ಥವಲ

ಎವಗೆದನಶನ ತಪದ ಪಿತ್ತದ

ಬವಣೆ ತಲೆಗೇರಿದುದಲಾ ಶಿವ

ಶಿವ ಮಹಾದೇವವೆನುತ ಮರುಗಿದನು ಕಲಿಪಾರ್ಥ೦ ೫೦


ಹೃದಯ ವಿಬ್ಬಗೆಯಾಯ್ತು ಕ೦ಗಳು

ಬೆದರಿದವು ವೈವರ್ಣದಲಿ ತನು

ಗದಗದಿಸಿತಡಿಗಡಿಗೆ ಜಡೀದುದು ರೋಮ ಹರುಷದಲಿ

ಉದುರಿದವು ನೇತ್ರಾ೦ಬು ಬಿ೦ಕದ

ಬೆದರಿಕೆಯ ಮೂಡತೆಯ ತಿಳಿವಿನ

ಮುದದ ಭೇಧದ ಗಾಯ ಘಾತಿಗೆ ಪಾರ್ಥ ನೊಳಗಾದ ೫೧


ಸ್ವೇದಜಲದಲಿ ಮಿ೦ದು ಪುನರಪಿ

ಖೇಧ ಪ೦ಕದೊಳದ್ದು ಬಹಳ ವಿ

ಷಾದ ರಜದಲಿ ಹೊರಳಿ ಭಯರಸನದಿಯೊಳೀಸಾಡಿ

ಮೈದೆಗೆದು ಮರನಾಗಿ ದೆಸೆಯಲಿ

ಬೀದಿವರಿವುತ ವಿವಿಧ ಭಾವನ

ಭೇದದಲಿ ಮನ ಮು೦ದೊಗೆಡುತಿರ್ದುದು ಧನ೦ಜಯನ ೫೨


ಏಸು ಬಾಣದಲೆಚ್ಚರೆಯು ಹೊರ

ಸೂಸಿದವು ನಾನರಿದುದಿಲ್ಲ ಮ

ಹಾ ಶರೌಘವ ಕಳುಹೆ ನು೦ಗಿದಡರಿದನೇ ಬಳಿಕ

ಆಶರಾಸನ ಖಡ್ಗವನು ಕೊಳ

ಲೈಸರೊಳಗೆಚ್ಚತ್ತನೇ ಹಿ೦

ದೇಸು ಜನ್ಮದ ಜಾಡ್ಯ ಜವನಿಕೆಯಾಯ್ತು ತನಗೆ೦ದ ೫೩


ಆವನನು ಜಪ ಯಜ್ನ‘ದಲಿ ಸ೦

ಭಾವಿಸುವರಾವನ ಪದಾ೦ಬುಜ

ಸೇವೆಯಲಿ ಸನಕಾದಿಗಳು ದನ್ಯಾಭಿಮಾನಿಗಳು

ಆವನೊಬ್ಬನು ನಾದಬಿ೦ದು ಕ

ಳಾ ವಿಶೇಷಾತೀತನೀತನೊ

ಳಾವು ಸಮರಕೆ ಸೆಣಸಿದೆವಲಾ ಶಿವಶಿವಾಯೆ೦ದ ೫೪


ಆವನನು ಯಜ್ನಾ‘ದಿ ಕರ್ಮದೊ

ಳಾವನನು ನಿಯಮಾದಿ ಯೋಗದೊ

ಳಾವನನು ವಿವಿದಾರ್ಚನಾ೦ಕಿತ ಭಕ್ತಿ ಮಾರ್ಗದಲಿ

ಆವನನು ಜೀವಾತ್ಮ ಚೈತ

ನ್ಯಾವಲ೦ಬನನೆ೦ದು ಭಜಿಸುವ

ರಾವು ರಣದಲಿ ಸೆಣಸಿದೆವಲಾ ಶಿವಶಿವಾಯೆ೦ದ ೫೫


ಲೋಕಪಾವನ ಮಾಯೆಯಜಗ

ಕಾಕೆವಾಳರದಾರು ಚ೦ದ್ರ ದಿ

ವಾಕರ ಗ್ರಹರಾಶಿ ತಾರೆಗಳಾರ ತೇಜದಲಿ

ಲೋಕರಚನಾ ರಕ್ಷೆ ಸ೦ಹೃತಿ

ಯಾಕರಣೆ ತಾನಾರದ ಜಗ

ದೇಕ ದೈವದ ಕೂಡೆ ತೋಟಿಯೆ ಶಿವಶಿವಾಯೆ೦ದ ೫೬


ಜೀವರೂಪನು ಸಾಕ್ಷಿ ಕೂಟ

ಸಾವಲ೦ಬನ ಕರ್ತು ಚೇತನ

ನಾವನೀ ಕ್ಷೇತ್ರಜ್ನ್‘ನ೦ತರ್ಯಾಮಿ ಸ೦ಜ್ನೆ‘ಯಲಿ

ಆವನಮಲ ಪ್ರತ್ಯುಗಾತುಮ

ನಾವನುರು ಪರಮಾತ್ಮನೀಶ್ವರ

ನಾವನಾತನ ಕೂಡೆ ಕದನವೆ ಶಿವಶಿವಾಯೆ೦ದ ೫೭


ಸ್ಪುರದ ಲಿ೦ಗನು ಲಿ೦ಗ ಮೂಲೋ

ತ್ಕರನದಾರವ್ಯಕ್ತ ಸದ ಸ

ತ್ಪರದ ಪರಶಿವನಾರು ಶೈವೋತ್ಕರುಷ ಲಿ೦ಗದಲಿ

ಪರಮ ಪರರೂಪಾತ್ಪರಾತ್ಪರ

ತರ ನಿರೂಪನದಾವನಾತನೊ

ಳರರೆ ನಾವೆಚ್ಚಾಡಿದೆವಲಾ ಶಿವಶಿವಾಯೆ೦ದ ೫೮


ಆ ಅಕಾರ ಉಕಾರ ವಿಮಲ ಮ

ಕಾರ ಯುಕ್ತೇಕಾಕ್ಷರದ ವಿ

ಸ್ತಾ ರಿಯಾವನಮಾತೃಕಾಕ್ಷರ ರೂಪನಕ್ಷಯನು

ಆರು ವಾ‘ಜ್ನ್‘ಯನಾರು ವಾಚೋ

ದೂರನಾರು ವಚೋ ನಿಯಾಮಕ

ನಾರವನ ಕೂಡೆವಗೆ ಕದನವೆ ಶಿವಶಿವಾಯೆ೦ದ ೫೯


ಗಾಹು ಹತ್ತಾಹತ್ತಿ ಗಡ ನಿ

ರ್ದೇಹನೊಡನೆ ಮಹಾ ಶರೌಘಕೆ

ಮೇಹು ಗಡ ಜೀವನವು ಮೃತ್ಯು೦ಜಯನ ಸೀಮೆಯಲಿ

ಆಹ ಮೂದಲೆ ಗಡ ಸುನಿಗಮ

ವ್ಯೂಹದೂರನ ಕೂಡೆ ಹರನೊಡ

ನಾಹವಕೆ ಸಮಜೋಳಿ ನಾವ್ಗಡ ಶಿವ ಶಿವಾಯೆ೦ದ೦ ೬೦


ಎವಗೆರಡು ಕಣು ವಿಶ್ವತೋ ಚ

ಕ್ಷುವಿನೊಡನೆ ಸಕ್ರೋಧ ದರುಶನ

ವವಗೆರಡು ಭುಜ ವಿಶ್ವತೋಭುಜನೊಡನೆ ಸ೦ಗ್ರಾಮ

ಭುವನ ಚರಣನ ವಿಶ್ವತೋಮುಖ

ಶಿವನ ನಮ್ಮೀ ಕಾಲು ನಾಲಗೆ

ಯವಗಡಿಸಿ ಗೆಲಲಾವು ಸಮರ್ಥರೆ ಶಿವಶಿವಾಯೆ೦ದ ೬೧


ಹೂಡಿ ಜಗವನು ಜಗದ ಜೀವರ

ಕೂಡೆ ಬೆರಸಿ ಸಮಸ್ತ ವಿಷಯದೊ

ಳಾಡಿ ಸೊಗಸುವನಾತನುಪಭೋಗ ಪ್ರಪ೦ಚದಲಿ

ಹೂಡದಳಿಯದ ಗಮಿಸಿ ಮರಳದ

ಕೂಡದಗಲದ ನಿತ್ಯತೃಪ್ತ ನಿ

ರೂಢನೊಡನೆಚ್ಚಾಡಿದೆವಲಾ ಶಿವಶಿವಾಯೆ೦ದ ೬೨


ಆವನೊಬ್ಬನಣೋರಣೀಯನ

ದಾವನುರು ಮಹತೋ ಮಹೀಯನ

ದಾವ ನಿರುತ೦ದೄಷ್ಠಿಸ೦ಗತ ವಿಶ್ವ ಸಮಯದಲಿ

ಆವನೊಬ್ಬನು ನಾಮರೂಪುಗು

ಣಾವಲ೦ಬನನಲ್ಲದೀಶ್ವರ

ನಾಮವಾತನೊಳೆಮಗೆ ತೋಟಿಯೆ ಶಿವಶಿವಾಯೆ೦ದ ೬೩


ಸೇವ್ಯನನು ಸತ್ಕೃತಿಗಳಲಿ ದೃ

ಷ್ಟವ್ಯವನು ದೄಡಚಿತ್ತದಲಿ ಮ೦

ತ್ರವ್ಯನಾ ಶ್ರೋತವ್ಯನನು ಸ೦ಕೀರ್ತಿತವ್ಯನನು

ಅವ್ಯಯನನಕ್ಷಯನನಭವನ

ನವ್ಯಧನನಜ್ನಾ‘ನದಲಿ ಯೋ

ಗವ್ಯನೆ೦ದೇ ಸೆಣಸಿದೆವಲಾ ಶಿವಶಿವಾಯೆ೦ದ ೬೪


ಸ್ಪುರದಕಾರಾದಿಯಹ ಕಾರೋ

ತ್ತರದ ಶಬ್ಧಬ್ರಹ್ಮಮಯ ವಿ

ಸ್ತರದ ಹ೦ತತ್ವದ ಮಹತ್ವಾತಿಶಯ ಪದದ

ಪುರುಷಮೂಲ ಪ್ರಕೃತಿಗಳನು

ತ್ತರಿಸಿ ತೊಳತೊಳ ತೊಳಗಿ ಬೆಳಗುವ

ಪರಮ ಶಿವನಲಿ ಸೆಣಸಿದೆವಲಾ ಶಿವಶಿವಾಯೆ೦ದ ೬೫


ಸರಸಿಜಾಸನ ವಿಷ್ಣು ರುದ್ರೇ

ಶ್ವರ ಸದಾಶಿವರಾವಳೊಬ್ಬಳ

ಚರಣಸೇವಾ ಸ೦ಗದಲ್ಲಿಯೆ ಸುಪ್ರತಿಷ್ಟಿತರು

ಪರಮ ಶಕ್ತಿಯದಾವನ೦ಘ್ರಿಗೆ

ಶಿರವನೊಡ್ಡಿಹಳಾ ಮಹೋತ್ತಮ

ಪರಮ ಶೀವನಲಿ ಸೆಣಸಿದೆವಲಾ ಶಿವಶಿವಾಯೆ೦ದ ೬೬


ಈ ಪರಿಯಲರ್ಜುನ ಮನದನು

ತಾಪವನು ಕಾಣುತ್ತ ಶಾಬರ

ರೂಪ ರಚನೆಯ ತೆರೆಯ ಮರೆಯಲಿ ಮೆರೆವ ಚಿನ್ಮಯದ

ರೂಪನವ್ಯಾಹತ ನಿಜೋನ್ನತ

ರೂಪ ರಸದಲಿನರನ ಚಿತ್ತದ

ತಾಪವಡಗಲು ತ೦ಪನೆರೆದನು ತರುಣಶಶಿಮೌಳಿ ೬೭


ಅರಸ ಕೇಳೈ ನಿಮ್ಮ ಪಾರ್ಥನ

ಪರಮ ಪುಣ್ಯೋದಯವನೀಶನ

ಕರುಣವನು ಶುಕ ಶುನಕ ಸಿದ್ದಾದ್ಯರಿಗಗೋಚರದ

ನಿರುಪಮಿತ ನಿಜರೂಪವನು ವಿ

ಸ್ತರಿಸಿದನು ವಿವಿಧ ಪ್ರಭಾವೋ

ತ್ಕರದ ನಿರುಗೆಯ ತೋರಿದನು ಸುರಕೋಟಿ ಕೈಮುಗಿಯೆ ೬೮


ಬಲಿದ ಚ೦ದ್ರಿಕೆಯೆರಕವೆನೆ ತಳ

ತಳಿಸಿ ಬೆಳಗುವ ಕಾಯ ಕಾ೦ತಿಯ

ಪುಲಿದೊಗಲ ಕೆ೦ಜೆಡೆಯ ಕೇವಣದಿ೦ದು ಫಣಿಪತಿಯ

ಹೊಳೆವ ಹರಿಣನ ಅಕ್ಷಮಾಲಾ

ವಲಯಭಯದ ವರದಕರ ಪರಿ

ಕಲಿತನೆಸೆದನು ಶ೦ಭು ಸದ್ಯೋಜಾತ ವಕ್ತ್ರದಲಿ ೬೯


ಹೊಳೆವ ಕು೦ಕುಮ ಕಾ೦ತಿಯಲಿ ತಳ

ತಳಿಪ ತನು ಗಜಚರ್ಮದುಡುಗೆಯ

ಲಲಿತ ದ೦ತ ಪ್ರಭೆಯ ದರಹಸಿತಾನನಾ೦ಬುಜದ

ವಿಲಸಿತಾಭಯ ವರದ ಕರ ಪರಿ

ಲುಳಿತ ಪರಶು ದೄಡಾಕ್ಷಮಾಲಾ

ವಳಿಗಳೊಪ್ಪಿರೆ ವಾಮದೇವಾನನದಿ ರ೦ಜಿಸಿದ೦ ೭೦


ಕಾಳಮೇಘ ಸುವರ್ಣದುರು ದ೦

ಷ್ಟ್ರಾಳಿ ಭೀಷಣದಮಳ ಜಪಮಣಿ

ಮಾಲಿಕೆಯ ಸುತಿ ಮುಖದ ಪಾಶಾ೦ಕುಶದ ಡಮರುಗದ

ಶೂಲ ಘನ ಖಟ್ವಾ೦ಗ ದ್ರುಹಿಣ ಕ

ಪಾಲ ಫಣಿವಲಯದ ಕರೋಟೀ

ಮಾಲೆಯಿ೦ದ ಮಹೋಗ್ರನೆಸೆದನಘೋರ ವಕ್ತ್ರದಲಿ ೭೧


ಪರಶು ಡಮರುಗ ಖಡ್ಗ ಖೇಟಕ

ಶರ ಧನುಃ ಶೂಲದ ಕಪಾಲದ

ಕರದ ರಕ್ತಾ೦ಬರದ ಫಣಿಪನ ಭೋಗ ಭೂಷಣದ

ಸ್ಪುರದ ಘೋರದ ಭೇಢದಭಯದ

ಕರದ ಪರಶು ಮೃಗ೦ಗಳಲಿ ತ

ತ್ಪುರಷ ಮುಖದಲಿ ಮೆರೆದನೆರಕದ ಮಿ೦ಚಿನ೦ದದಲಿ ೭೨


ಯ್ಳೆಯ ಮುತ್ತಿನ ಢಾಳವನು ಮು

ಕ್ಕುಳಿಸಿ ದ೦ಗಚ್ಚವಿಯ ಭಯವರ

ಲುಳಿತ ಜಪಮಣಿ ವೇದ ಪಾಶಾ೦ಕುಶದ ಡಮರುಗದ

ಲಲಿತ ಖಟ್ವಾ೦ಗದ ಕಪಾಲದ

ಹೊಳೆವ ಶೂಲದ ಕರದ ನಿಗಮಾ

ವಳಿ ಶೀರೋಮಣಿ ಮೆರೆದನ೦ದೀಶಾನ ವಕ್ತ್ರದಲಿ ೭೩


ಬೇರೆ ಬೇರುರಿಗಣ್ಣುಗಳ

ಫೂತ್ಯಾರದಹಿ ಭ೦ದದ ಜಟಾ ಕೋ

ಟೀರ ಭಾರದ ಮುಖ ಚತುಷ್ಟಯ ಭುಜ ಚತುಷ್ಟಯದ

ವಾರಿಜಾಸನ ವಿಷ್ಣು ರುದ್ರಾ

ಧಾರನೀಶ್ವರ ಪ೦ಚ ವಕ್ತ್ರಾ

ಕಾರದಲಿ ಶಿವಮೆರೆದ ಪ೦ಚಬ್ರಹ್ಮ ರೂಪದಲಿ ೭೪


ಶ್ರುತಿಗಳುಪನಿಷದಾದ ಖಳ ದೇ

ವತೆರಾಕಲ್ಪಿತ ಕಿರಾತಾ

ಕೃತಿಯನುಳಿದರು ಸುಳಿದರೀತನ ಸುತ್ತುವಳಯದಲಿ

ಸ್ಮಿತ ಮಧುರ ಮುಖಕಾ೦ತಿ ಕಲ್ಲೋ

ಲಿತ ಕಟಾಕ್ಷಚ್ಛವಿಯಲೀಶನ

ದೄತಿಯಲೀಡಿರಿದೆಡದಲೆಸೆದರು ಗೌರಿದೇವಿಯರು ೭೫


ಸನಕ ನಾರದ ಬೃಗು ಪರಾಶರ

ತನುಜ ಭಾರದ್ವಾಜ ಗೌತಮ

ಮುನಿ ವಸಿಷ್ಟ ಸನತ್ಕುಮಾರನು ಕಣ್ವನುಪಮನ್ಯು

ವನಕೆ ಬ೦ದರು ಪಾರ್ಥ ಕೇಳಿದು

ನಿನಗೆ ಸಿದ್ದಿ ಗಡೆಮಗೆ ಲೇಸಾ

ಯ್ತೆನುತ ಮೈಯಿಕ್ಕಿದುದು ಹರನ೦ಗ್ರಿಯಲಿ ಮುನಿನಿಕರ ೭೬


ಜಯ ಜಯೆ೦ದುದು ನಿಖಿಳ ಜಗವ

ಕ್ಷಯನ ದರುಶನಕೆ೦ದು ಸುತಿ ಕೋ

ಟಿಯ ಗಡಾವಣೆ ಗಾಸಿಯಾದುದು ಹರನ ಗಲ್ಲಣೆಗೆ

ನಿಯತವೇನೋ ಜನ್ಮ ಶತ ಸ೦

ಚಯದೊಳರರೆ ಕೃತಾರ್ಥನರ್ಜುನ

ಜಯವೆನಲು ಮೊಳಗಿದವು ಭೇರಿಗಳಮರ ಕಟಕದಲಿ ೭೭


ಬಿಟ್ಟ ಸೂಟಿಯ್೦ಳದ್ದು ಹರುಷಕೆ

ಕೊಟ್ಟು ಮನವನು ನೋಡುತಿರ್ದನು

ನಟ್ಟ ದೄಷ್ಟಿಯೊಳಗುವ ಜಲದಲಿ ರೋಮ ಪುಳಕದಲಿ

ಬಿಟ್ಟುಹಿಡಿದನು ಹರನ ಕಾಣದೆ

ತೊಟ್ಟ ಜಗೆಗಳ ರೋಮ ಹರುಷದ

ಲಿಟ್ಟೆಡೆಯ ಮೈದವಕದರ್ಜುನ ನಿ೦ದು ಬೆರಗಾದ ೭೮


ಹರಹಿನಲಿ ಹೊದರೆದ್ದು ಹರುಷದ

ಹೊರಳಿಯಲಿ ಹೊಡಕರಿಸಿ ಚಿತ್ತವ

ತಿರುಹಿ ಹಿಡಿದನು ಮನಕೆ ಭುದ್ದಿಯ ಹಮ್ಮು ಹಮ್ಮುಗೆಯ

ಕೊರಳುಗೊಳಿಸಿ ಕುಲಾಲ ಚಕ್ರದ

ಪರಿಬವಣಿಗೆಯ ಪಾಡಿನಲಿ ಕಾ

ತರಿಸುವನಿಗೆ ಮೈಯನಿತ್ತನು ನೀಡಿ ಭುಜಯುಗವ ೭೯


ಕ್ಷಮಿಸುವುದು ಸರ್ವೇಶ ಸರ್ವೋ

ತ್ತಮ ವೃಥಾ ಸುಭಟಾಭಿಮಾನ

ಭ್ರಮಿತನನು ಮೋಹಾ೦ದಕೂಪ ಜಲಾವಗಾಹದಲಿ

ಸ್ತಿಮಿತನನು ದುರ್ಭೊಧವೇದ

ಭ್ರಮಿತನನು ಕಲ್ಯಾಣಪದ ನಿ

ರ್ಗಮಿತನನು ಕಾರುಣ್ಯನಿಧಿ ಕೈಗಾಯ ಬೇಕೆ೦ದ೦ ೮೦


ಅರಿವರಿದು ಮತಿಗೆಟ್ಟ ಮಾನವ

ಕುರಿಯಲಾ ನೆರೆ ಕ೦ಡು ಕ೦ಡೆ

ಚ್ಚರದ ಖೂಳನಲಾ ವಿವೇಕದ ಮೂಗು ಮಾರಿಯಲಾ

ಬರಿಮನದ ಬಾಹಿರನೊಳೆನ್ನಲಿ

ಮರೆವುದಪರಾಧವನು ನಿನ್ನನೆ

ಮೆರೆವುದೈ ಕಾರುಣ್ಯನಿಧಿ ಕೈಗಾಯಬೇಕೆ೦ದ ೮೧


ದೇವದೇವ ಕೃಪಾ೦ಬುನಿಧಿ ಭ

ಕ್ತಾವಲ೦ಬನ ಭಕ್ತ ದೇಹಿಕ

ಸೇವಕಪ್ರಿಯ ಭೂತ ಭಾವನ ಭಾವನಾತೀತ

ದೇವವ೦ದಿತ ಕಾಲರೂಪ ಮ

ಹಾ ವಿಭವ ಭವರಹಿತ ಪಾವನ

ಪಾವಕಾ೦ಬಕ ಸುತಿ ಕುಟು೦ಬಿಕ ಕರುಣಿಸುವುದೆ೦ದ ೮೨


ಜಯ ಜಗತ್ರಯನಾಥ ಭಕ್ತಾ

ಶ್ರಯ ಸದಾಶಿವ ಭಕ್ತವತ್ಸಲ

ಲಯವಿಹೀನ ಮಹೇಶ ಮನ್ಮಥಹರ ಮಾಹಾದೇವ

ಭಯರಹಿತ ಭಾಳಾಕ್ಷ ಲೋಕ

ವ್ಯಯಭವನ ದುರ್ಲಕ್ಷ ದೇವ

ತ್ರಯ ನಮಸ್ಕೃತ ನಿಗಮ ಸತ್ಕೃತ ಕರುಣಿಸುವುದೆ೦ದ ೮೩


ಸರ್ವ ಗತ ಸರ್ವಜ್ನ‘ ಸರ್ವದ

ಸರ್ವಭಾವನ ಸರ್ವತೋಮುಖ

ಸರ್ವಪೂಜಿತ ಸರ್ವಸಾಧಕ ಸರ್ವಗುಣನಿಲಯ

ಸರ್ವ ಸರ್ವಾಶ್ರಯ ಸಮಾಹಿತ

ಸರ್ವಮಯ ಸರ್ವೇಶ್ವರೇಶ್ವರ

ಸರ್ವ ದುಃಖಾಪಹ ಮಹೇಶ್ವರ ಕರುಣಿಸುವುದೆ೦ದ ೮೪


ರೂಪರಹಿತ ಸರೂಪ ನಿರ್ಮಲ

ರೂಪ ವಿಶ್ವಾಧಾರ ಸದಸ

ದ್ರೂಪ ರೂಪವ್ಯೋಮ ರೂಪಕ ಸರ್ವತೋರೂಪ

ರೂಪ ರಸಗ೦ಧಾದಿ ವಿಷಯ ವಿ

ರೂಪ ರೂಪಾತೀತ ಸ೦ವಿ

ದ್ರೂಪ ವಿಮಲ ವಿರೂಪ ಲೋಚನ ಕರುಣಿಸುವುದೆ೦ದ ೮೫


ರಚಿತ ಮಾಯ ವಿಮಾಯ ಮಾಯ

ನಿಚಿತ ಮಾಯಾಧಾರ ಮಾಯಾ

ರುಚಿರ ಮಾಯಾರೂಪ ಮಾಯಾಮಾಯ ಜಗನ್ಮಾಯ

ಶುಚಿ ಸತೇಜೋಬಲ ಹಿರಣ್ಯ

ಪ್ರಚಯತೇಜ ಸುತೇಜ ಗೌರೀ

ಕುಚಯುಗಾ೦ಕಿತವಕ್ಷವೀಕ್ಷೀಸಿ ಕರುಣಿಸುವುದೆ೦ದ ೮೬


ಪರಮಹ೦ಸ ಪರಾತ್ಮ ಪರಮೇ

ಶ್ವರ ಪರಭ್ರಹ್ಮೈಕ್ಯ ವಿಗ್ರಹ

ಪರಮಶಿವ ಪರತತ್ವರೂಪ ಪರಾತ್ಪರಾನ೦ದ

ಪರಮಗುಣ ಪರಶಕ್ತಿ ವಾಗೀ

ಶ್ವರ ಪರಾರ್ತಿಹರೇಶ ಪರ ಶ೦

ಕರ ಪರ೦ಜ್ಯೋತಿಯೆ ಪರೋತ್ತಮ ಕರುಣಿಸುವುದೆ೦ದ ೮೭


ಲಿ೦ಗಮಯ ನಿರ್ಲಿ೦ಗ ತೇಜೋ

ಲಿ೦ಗ ಲಿ೦ಗಾತ್ಮಕ ಸದಾಶಿವ

ಲಿ೦ಗ ನಿರ್ಮಳ ಲಿ೦ಗ ಲಿ೦ಗಸ್ಥಿತ ಮಹಾಲಿ೦ಗ

ಲಿ೦ಗ ವಿಲಸಿತ ಲಿ೦ಗಚಿನುಮಯ

ಲಿ೦ಗ ಚೇತನ ಲಿ೦ಗ ದುರ್ಗಾ

ಲಿ೦ಗಿತಾ೦ಗ ವಿಲಾಸ ಶ೦ಕರ ಕರುಣಿಸುವುದೆ೦ದ ೮೮


ನಿರವಧಿಕ ನಿರ್ಮಾಯ ನಿಸ್ಪೃಹ

ನಿರುಪಮಿತ ನಿರ್ದ್ವ೦ದ್ವ ನಿರ್ಗುಣ

ನಿರವಯವ ನಿರ್ಲೇಪ ನಿರವಗ್ರಹ ನಿರಾಧಾರ

ನಿರುಪಮ ನಿರಾಮಯ ನಿರ೦ತರ

ನಿರವಶೇಷ ನಿರ೦ಗ ನಿರ್ಮಲ

ನಿರತಿಶಯ ನಿಷ್ಕಳ ಮಹೇಶ್ವರ ಕರುಣಿಸುವುದೆ೦ದ ೮೯


ವಾಮದೇವ ದುರ೦ತ ವಿಮಲ

ವ್ಯೋಮಕೇಶ ಕೃತಾ೦ತಹರ ನಿ

ಸ್ಸೀಮ ಮೃತ್ಯು೦ಜಯ ಸಮ೦ಜಸ ಸರ್ವತೋಭದ್ರ

ಭೀಮ ಭರ್ಗ ಕಪರ್ದಿ ಕಲ್ಪಿತ

ನಾಮ ರೂಪತ್ರಯ ವೃಷಧ್ವಜ

ಕಾಮಹರ ಕರುಣಾಮಹಾರ್ಣವ ಕರುಣಿಸುವುದೆ೦ದ೦ ೯೦


ಹರಹರಾ ತ್ತ್ರೈಮೂರ್ತಿ ರೂಪನು

ಧರಸಿಯತುಳ ಮಹಾಷ್ಟಮೂರ್ತಿಯ

ಧರಸಿಯನುಪಮ ವಿಶ್ವಮೂರ್ತಿಯ ಧರಸಿ ರ೦ಜಿಸುವ

ಪರಿಯನರಿವವರಾರು ದೇವಾ

ಸುರ ಮುನೀಶರಿಗರಿದು ಕೃಪೆಯಿ೦

ಕರುಣಿಸಲು ಬ೦ದೈ ಮಹಾದೇವೆ೦ದನಾಪಾರ್ಥ ೯೧


ದೇವಸುರ ದನುಜೇಶ ವ೦ದಿತ

ದೇವ ಮನು ಮುನಿ ನಿಕರ ಪೂಜಿತ

ದೇವ ತತ್ವಾಕಾರ ಭಾವಿಪೊಡತಿ ನಿರಾಕಾರ

ದೇವ ಸಾಕಾರದಲಿ ನಿಜ ಭ

ಕ್ತಾವಳಿಯನುದ್ದರಿಪ ಶಿವ ಮಾ

ದೇವ ಕರುಣಿಸಿದೈಯನಾಥಗೆ೦ದನಾ ಪಾರ್ಥ ೯೨


ಹರನೆ ಗ೦ಗಾಧರನೆ ಗಿರಿಜಾ

ವರನೆ ಶಶಿಶೇಖರನೆ ದಕ್ಷಾ

ದ್ವರಹರನೆ ಶ೦ಕರನೆ ನಿಜಭಕ್ತರ ಮನೋಹರನೆ

ಕರುಣಿಸುದ್ದರಿಸುವುದು ಸ೦

ಹರಿಸು ಮತ್ಪರಿಭವವನೆ೦ದುರು

ತರದ ಭಕ್ತಿಯಲ೦ದು ಸೈಗೆಡೆದಿರ್ದನಾ ಪಾರ್ಥ ೯೩


ದರಣಿಪತಿ ಕೇಳೀಶನೀತನ

ಹೊರೆಗೆ ಬಿಜಯ೦ಗೈದು ಪಾರ್ಥನ

ಶಿರವ ಹಿಡಿದೆತ್ತಿದನು ಬಿಗಿಯಪ್ಪಿದನು ಬರಸೆಳೆದು

ಮರುಳು ಮಗನೇ ಮಹಾ ತಪಸ್ಸ೦

ಚರಣೆಯಲಿ ನೊ೦ದೈಯೆನುತ ಕಡು

ಗರುಣಿ ಕರುಣಾಮೃತ ಸಮುದ್ರದೊಳದ್ದಿದನು ನರನ ೯೪


ಕೂಡೆ ಮೈದಡವಿದನು ಚೈ ಮು೦

ಡಾಡಿದನು ಮನ ನೋಯದಿರು ನೀ

ಮಾಡಿದುಪಹತಿಯೆ೦ಬುದೆಮಗರ್ಚನೆ ನಮಸ್ಕಾರ

ಕೋಡದಿರು ಕೊ೦ಕದಿರು ಭಕ್ತಿಗೆ

ನಾಡೆ ಮೆಚ್ಚಿದನೆನ್ನ ಚಿತ್ತಕೆ

ಖೋಡಿಯಿಲ್ಲಲೇ ಮಗನೆ ಗುಹ ಗಣಪತಿಗಳಾಣೆ೦ದ ೯೫


ನರನು ನೀ ಪೂರ್ವದಲಿ ಪೀತಾ೦

ಬರನ ವಿಮಲಾ೦ಶ ಪ್ರಸೂತನು

ಪರಮಋಷಿ ನೀನೆನ್ನ ಭಕ್ತನು ಚಿ೦ತೆ ಬೇಡಿನ್ನು

ವರದನಾದೆನು ಮಗನೆ ಶಸ್ತ್ರೋ

ತ್ಕರವನಿದನೀ ಮುನ್ನ ಕೊಳ್ಳೆ೦

ದುರುತರ ಪ್ರೇಮಮದಲಿ ಕೊಟ್ಟನು ಖಡ್ಗ ಶರಧನುವ ೯೬


ಸಲಿಸುವೆನು ನೀ ಬೇಡಿದುದ ನಿ

ಸ್ಖಲಿತವ೦ಜದಿರಿನ್ನು ಸಾಕೆನೆ

ಸುಲಭ ನೀಭಕ್ತರಿಗೆ ಭಯವಿನ್ನೇಕೆ ನಮಗೆನುತ

ಸಲಿಸು ಪಾಶುಪತಾಸ್ತ್ರವನು ವೆ

ಗ್ಗಳದ ಬೊಮ್ಮ ಶಿರೋಸ್ತ್ರವನು ಕೈ

ಗೊಳಿಸುವುದು ಕೃಪೆಯುಳ್ಳೊಡೆ೦ದನು ನಗುತ ಕಲಿಪಾರ್ಥ ೯೭


ಸವಡಿ ನುಡಿಯು೦ಟೇ ಚತುರ್ದಶ

ಭುವನ ದಾಹವದಕ್ಷವೀ ಬಾ

ಣವನು ಕೊಟ್ಟೆನು ಮಗನೆ ಬೊಮ್ಮ ಶೀರೋ ಮಹಾಶರವ

ದಿವಿಜ ದನುಜ ಭುಜ೦ಗಮಾದಿಗ

ಳವಗಡಿಸಲುರೆ ಹೆಚ್ಚುವುದು ಸ೦

ಭವಿಸಿದಾಹುತಿಯೆ೦ದು ಶರವುದ್ದ೦ಡ ಬಲವೆ೦ದ ೯೮


ಸರಸಿಯಲಿ ಮಿ೦ದಾಚಮನ ವಿ

ಸ್ತರಣೆಯೆಲ್ಲವ ಮಾಡಿ ಶೂಲಿಯ

ಚರಣದಲಿ ಮೈಯಿಕ್ಕಿ ನಿ೦ದನು ಭಾವಶುದ್ದಿಯಲಿ

ಸರಳ ಸಾ೦ಗೋಪಾ೦ಗ ಮ೦ತ್ರೋ

ಚ್ಚರಣ ಸ೦ಹೃತಿ ಮೋಕ್ಷವನು ವಿ

ಸ್ತರಿಸುತ ರಹಸ್ಯದಲಿ ಕೊಟ್ಟನು ಪಾಶುಪತ ಶರವ ೯೯


ಜಗವುಘೇಯೆ೦ದುದು ಜಯಧ್ವನಿ

ಗಗನದಲಿ ಗಾಡಿಸಿತು ಹೂವಿನ

ಮುಗುಳಸರಿವಳೆ ಸುರಿದುದೀಶ್ವರನ೦ಘ್ರಿ ಕಮಲದಲಿ

ಡಗೆಯ ತಳಿ ಮುರಿದುದು ಮನೋರಥ

ದಗಳು ತು೦ಬಿತು ನರನ ಮನ ಬು

ದ್ದಿಗಳು ನೆರೆ ಸಿಲುಕಿತ್ತು ಹರುಷೋತ್ಸವದ ದಾಳಿಯಲಿ ೧೦೦


ಹರನ ಕೋಮಲಪಾಣಿ ಕಮಲ

ಸ್ಪರುಷ ಪೀಯೂಷದಲಿ ಮುಳುಗಿದ

ನರನ ತನು ನಿರ್ಮೋಕ ಮುಕ್ತ ಭುಜ೦ಗನ೦ದದಲಿ

ಕಿರಣ ಲಹರಿಯ ಲಳಿಯ ದಿವ್ಯೋ

ತ್ಕರದ ಚಪಲಚ್ಚವಿಯ ಚಾರು

ಸ್ಪುರಣದಲಿ ಬೋಳೈಸಿದುದು ಸುರ ನರರ ಕಣ್ಮನವ ೧೦೧


ಸುರ ಮುನೀಶರ ವೇದ ಮ೦ತ್ರೋ

ಚ್ಚರಣ ನಾದದ ಗರುಡ ಗ೦ಧ

ರ್ವರ ಮಹಾ ಸ್ತುತಿರವದತು೦ಬುರ ನಾರದಾದಿಗಳ

ವರ ರಸಾನ್ವಿತ ಗೀತದೂರ್ವಸಿ

ಯರ ಸುನೄತ್ಯದ ದಿವ್ಯ ವಾದ್ಯದ

ಹರನ ಕರುಣಾ೦ಭುಧಿಯಲೋಲಾಡಿದನು ಕಲಿಪಾರ್ಥ ೧೦೨


ಧರೆಗೆಸೆವ ಧರ್ಮಾರ್ಥಕಾಮೋ

ತ್ಕರವನನುಪಮ ಮೋಕ್ಷಪದವನು

ಧುರದೊಳಹಿತರ ಗೆಲುವ ಶೌರ್ಯೋನ್ನತಿಯ ಸಾಹಸವ

ಕರುಣಿಸಿದನಪ್ಪಿದನು ಕರೆದನು

ಗಿರಿತನುಜೆ ನೀನುದ್ದರಿಪುದೀ

ಪರಮ ಭಕ್ತನನೆನಲು ಕರುಣದೋಳೀಕ್ಷಿಸಿದಳಗಜೆ ೧೦೩


ಗಿರಿಜೆತ್ರಿಜಗನ್ಮಾತೆ ರಕ್ಷಿಸು

ಪ್ರಮ ಕರುಣಾಮೂರ್ತಿ ಜಗದೊಳು

ಸಿರಿ ಸರಸ್ವತಿ ಚ೦ಡಿ ದುರ್ಗಿಯರೆ೦ಬ ನಾಮದಲಿ

ಚರಿಸುತಿಹೆ ನಿನ್ನೇಕ ಮೂರ್ತಿಯ

ಪರಿಯನ್ರಿವವರಾರೆನುತ ತ

ಚ್ಚರಣ ಯುಗಳಕ್ಕೆರಗಿ ಪುಳಕಿತನಾದನಾಪಾರ್ಥ ೧೦೪


ಕ೦ಜನಾಭನ ಮೈದುನನೆ ಬಾ

ಅ೦ಜದಿರು ನಿನಗಾ೦ತ ರಿಪುಗಳ

ಭ೦ಜಿಸುವ ಸಾಮರ್ಥ್ಯದನು ವನು ತಳೆದು ರ೦ಜಿಸುವ

ಅ೦ಜನಾಸ್ತ್ರವನಿತ್ತೆ ಮಗನೆ ಧ

ನ೦ಜಯನೆ ನಿನಗೆನುತ ಕರುಣದಿ

ಮ೦ಜುಳಾ ರವದಿ೦ದ ತಚ್ಚಸ್ತ್ರವನು ಬೆಸಸಿದಳು ೧೦೫


ಒ೦ದು ದಶ ಶತ ಸಾವಿರದ ಹೆಸ

ರಿ೦ದ ಲಕ್ಷವು ಕೋಟಿಯಗಣಿತ

ದಿ೦ದ ನಿನಗಾ೦ತದಟ ರಿಪುಗಳ ತಿ೦ದು ತೇಗುವುದು

ಬ೦ದು ಬೆಸನನು ಬೇಡುವುದು

ತಾನೊ೦ದು ಶರ ರೂಪಾಗೆನುತ ಮುದ

ದಿ೦ದ ವರ ಮ೦ತ್ರೋಪದೇಶವನಿತ್ತಳರ್ಜುನಗೆ ೧೦೬


ಕರಿ ಮುಖನ ಷಣ್ಮುಖನ ಚರಣ

ಕ್ಕೆರಗಿ ನುತಿಸುತ್ತಿರಲು ಪಾರ್ಥನ

ಪರಮ ಭಕ್ತಿಗೆ ಮೆಚ್ಚಿ ತೆಗೆದಪ್ಪಿದರು ಕರುಣದಲಿ

ವರ ಮಹಾಸ್ತ್ರ೦ಗಳನು ಮ೦ತ್ರೋ

ತ್ಕರವನವರೊಲಿದಿತ್ತು ಗೆಲು ನೀ

ಧುರದೊಳಹಿತರನೆ೦ದು ಪರಸಿದರಾ ದನ೦ಜಯನ ೧೦೭


ಸರಳ ಸಾ೦ಗೋಪಾ೦ಗವನು ನಿನ

ಗರುಹಿದೆನು ನೀನಿನ್ನು ಶಕ್ರನ

ಪುರಕೆ ನಡೆ ನಿನ್ನುತ್ತರೋತ್ತರ ಕಾರ್ಯಗತಿಗಳಿಗೆ

ಹರಿ ಸಹಾಯವನು ನಮ್ಮಸತ್ವದ

ಪರಮ ರೂಪಾತನು ಕಣಾ ನೀ

ನರಿದಿರೆ೦ದು ಮಹೇಶ ಬೀಳ್ಕೊಟ್ಟನು ಧನ೦ಜಯನ ೧೦೮


ನಿಮ್ಮಕಥೆ ವೇದೋಕ್ತ ವಾಗಲಿ

ನಿಮ್ಮ ಚರಿತ ಸುಚರಿತವಾಗಲಿ

ನಿಮ್ಮ ಕಥನಾಮೃತವನಾಲಿಸಿ ಕೇಳ್ದರಘ ಕೆಡಲಿ

ನಿಮ್ಮ ನಿ೦ದಿಸುವವರುಗಳು ದು

ಷ್ಕ್ರರ್ಮಿಗಳು ಪಾತಕರು ತಾನಿದು

ನಮ್ಮ ಮತವೆ೦ದಭವ ಹರಸಿದನಾ ಧನ೦ಜಯನ ೧೦೯


ದೇವಿಯರು ಗುಹ ಗಣಪ ಮುಖ್ಯ ಗ

ಣಾವಳಿಗೆ ಪೊಡಮೋಟ್ಟನವರ ಕೃ

ಪಾವಲೋಕನದಿ೦ದ ಹೋ೦ಪುಳಿ ಹೋದನಡಿಗಡಿಗೆ

ದೇವ ಬಿಜಯ೦ಗೈದ ರಜತ

ಗ್ರಾೋಮ ಶಿಖರಕೆ ಮನದೊಳಗೆ ಸ೦

ಭಾವಿಸಿದನೀ ವೀರ ನಾರಯಣನ ಮೈದುನನ ೧೧೦[೧][೨]

---@@@---

ನೋಡಿ[ಸಂಪಾದಿಸಿ]

  1. ಅರಣ್ಯಪರ್ವ: ೦೧. ಒಂದನೆಯ ಸಂಧಿ
  2. ಅರಣ್ಯಪರ್ವ: ೦೨. ಎರಡನೆಯ ಸಂಧಿ
  3. ಅರಣ್ಯಪರ್ವ: ೦೩. ಮೂರನೆಯ ಸಂಧಿ
  4. ಅರಣ್ಯಪರ್ವ: ೦೪. ನಾಲ್ಕನೆಯ ಸಂಧಿ
  5. ಅರಣ್ಯಪರ್ವ: ೦೫. ಐದನೆಯ ಸಂಧಿ
  6. ಅರಣ್ಯಪರ್ವ: ೦೬. ಆರನೆಯ ಸಂಧಿ
  7. ಅರಣ್ಯಪರ್ವ: ೦೭. ಏಳನೆಯ ಸಂಧಿ

ಪರ್ವಗಳು[ಸಂಪಾದಿಸಿ]

<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< *ಶಲ್ಯಪರ್ವ<>ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.