ಜೈಮಿನಿ ಭಾರತ/ಹದಿನಾಲ್ಕನೆಯ ಸಂಧಿ
ಹದಿನಾಲ್ಕನೆಯ ಸಂಧಿ[ಸಂಪಾದಿಸಿ]
ಪದ್ಯ :-:ಸೂಚನೆ:[ಸಂಪಾದಿಸಿ]
ಚಂಡಸುರಥನ ಶಿರವನಸುರಹರನಾಜ್ಞೆಯಿಂ | ಕೊಂಡು ಗರುಡಂ ಪ್ರಯಾಗವನೈದಲೀಶ್ವರಂ | ಕಂಡು ವೃಷರಾಜನಂ ಕಳುಹಿ ತರಸಿದನದಂ ರುಂಡಮಾಲೆಯ ತೊಡವಿಗೆ||. |
[ಆವರಣದಲ್ಲಿ ಅರ್ಥ];=
|
ಪದ್ಯ :-:೧:[ಸಂಪಾದಿಸಿ]
ಕೇಳ್ದೈ ನೃಪಾಲಕ ಸುಧನ್ವನಗ್ಗಳಿಕೆಯಂ | ಪೇಳ್ದಪೆಂ ನಿನಗಾಲಿಪುದು ಸುರಥನಂಕಮಂ | ತಾಳ್ದನತಿರೋಷ ಮಂ ರಥವೇರಿ ವಿನುತಕೋದಂಡಮಂ ಜೇಗೈಯ್ಯುತೆ,, || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨:[ಸಂಪಾದಿಸಿ]
ಸುರಥನೈತಹ ರಣೋತ್ಸಾಹಮಂ ಕಂಡು ಹರಿ | ನರನೊಳಾಲೋಚಿಸಿ ನುಡಿದನಿವಂ ಧರೆಯೊಳಾ | ಚರಿಸದಿಹ ಪುಣ್ಯಕರ್ಮ ಗಳೊಂದಿಲ್ಲವಂ ಮರೆತಾದೊಡಂ ಮಾಡಿದ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩:[ಸಂಪಾದಿಸಿ]
ರಾಜೀವನೇತ್ರನಿಂತೆನುತುಮಂಧಕವೃಷ್ಣಿ | ಭೋಜರೆನಿಪಖಿಳ ಯಾದವಕುಲದ ಪಟುಭಟಸ | ಮಾಜಮಂ ಪ್ರಧ್ಯುಮ್ನನೊಡನೆ ಸುರಥನ ರಥಕ್ಕೆಣೆಯೊಡ್ಡಿ ನರನ ರಥದ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪:[ಸಂಪಾದಿಸಿ]
ಇತ್ತಲಾಹವಕೆ ಮುಂಕೊಂಡು ಬಹ ಸುರಥನಂ | ತೆ ತ್ತಿಸಿದನಂಬಿನಿಂ ಪ್ರದ್ಯುಮ್ನನಾತನಂ | ಮೆತ್ತಿಸಿದನವಂ ಬಾಣದಿಂ ಪಾರ್ಥನೆತ್ತ ಜಾರಿದನೀಗ ಶೌರಿಸಹಿತ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫:[ಸಂಪಾದಿಸಿ]
ತವಕದಿಂ ಪ್ರದ್ಯುಮ್ನನಂ ಗೆಲ್ದು ಸಾತ್ಯಕಿಯ | ನವಗಡಡಿಸಿ ಕೃತವರ್ಮ ಸಾಂಬಾನುಸಾಲ್ವರಂ | ಜವಗೆಡಿಸಿ ಕಲಿಯೌವನಾಶ್ವನಂ ಸದೆದು ನೀಲಧ್ವಜನನುರೆಘಾತಿಸಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೬:[ಸಂಪಾದಿಸಿ]
ಸೊಕ್ಕಾನೆ ಪೊಕ್ಕು ಕಾಸಾರಮಂ ಕಲಕುವಂ | ತಕ್ಕದೊಳೊಕ್ಕಲಿಕ್ಕಿದನಖಿಳಸೈನ್ಯಮಂ | ಮಿಕ್ಕು ನೊಂದೆಕ್ಕಲಂ ಬೀದಿವರಿದಟ್ಟುವಂತೋಡಿಸಿದನತಿಬಲನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೭:[ಸಂಪಾದಿಸಿ]
ಘೋರಸಂಸಾರದೊಳ್ ಮುಸುಕುವ ಮರವೆಯಂ ನಿ | ವಾರಿಸಿ ಮಹಾಯೋಗಿ ಜೀವಪರಮಾತ್ಮರ ವಿ |ಚಾರಿಸುವ ತೆರೆದಿಂದೆ ರಿಪುಮೋಹರದೊಳೊತ್ತಿ ಕವಿವ ಭಟರಂ ಗಣಿಸದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೮:[ಸಂಪಾದಿಸಿ]
ಅದ್ಬುತ ಪರಾಕ್ರಮದೊಳಾ ನಿಖಳಸೇನೆಗೆ ಮ | ಹದ್ಭಯವ ಬೀರುತೈತಹ ಸುರಥನಂ ಕಾಣು | ತುದ್ಭವಿಸಿತರ್ಜುನಂಗತಿರೋಪಮೆಂದನಸುರಾಂತಕನೊಳಿವನ ಜಯಕೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೯:[ಸಂಪಾದಿಸಿ]
ಎಲವೊ ಸೋದರನಳಿದಳಲ್ಗಾಗಿ ನಮ್ಮೊಡನೆ | ಕಲಹಕೈದುವ ನಿನ್ನನಿಸುವುದನುಚಿತಮೆಂದು | ತೊಲಗಿದೊಡೆ ನೀನರಿದುದಿಲ್ಲಲಾ ತಲೆ ಬಲ್ಲಿತೆಂದು ಕಲ್ಲಂ ಪಾಯ್ವೆಲಾ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೦:[ಸಂಪಾದಿಸಿ]
ಗಣವೇ ಮತ್ಸಹಭವಂಗೆ ನೀಂ ಹರಿ ಹರ ಹಿ | ರಣ್ಯಗರ್ಭಾದಿಗಳ್ ಮುಳಿದೊಡಳಿದಪನೆ ಕಾ | ರುಣ್ಯದಿಂ ನಿನ್ನನುದ್ಧರಿಸಲೆಂದಚ್ಯುತಂ ಕೊಟ್ಟ ತನ್ನವತಾರದ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೧:[ಸಂಪಾದಿಸಿ]
ಇಸಲುಚ್ಚಳಿಸಿ ಪಾಯ್ವ ಸುರಥನಂಬಿನ ಗರಿಯ | ಬಿಸಿಯ ಗಾಳಿಯ ಬಾಧೆಯಂದುರಿದು ಭುಗಿಲೆಂದು | ಮಸಗಿದತಿಶಯದ ರೋಷಜ್ವಾಲೆಯಿಂ ಧನಂಜಯನಾದನೀ ನರನೆನೆ || :ದೆಸೆಯಾವುದಿಳೆಯಾವುದಿನಬಿಂಬಮಾವುದಾ | ಗಸಮಾವುದೆಂಬಿನಂ ಪೊಸಮಸೆಯ ವಿಶಿಖಮಂ | ಮುಸುಕಿದಂ ಸಾರಧಿ ಧ್ವಜ ಹಯಗಳಡಗೆಡೆದು ಸುರಥಂ ವಿರಥನಾಗಲು ||11|| |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೨:[ಸಂಪಾದಿಸಿ]
ಕೂಡೆ ಮತ್ತೊಂದು ಪೊಸರಥವನಳವಡಿಸಿಕೊಂ | ಡೀಡಿರಿದನಂಬಿನಿಂ ಪಾರ್ಥನ ವರೂಥಮಂ | ಕೂಡೆ ಹಿಂಭಾಗಕೈನೂರ ಬಿಲ್ಲಂತರಕೆ ಪೋದುದು ಸಂಗರದೊಳು | |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೩:[ಸಂಪಾದಿಸಿ]
ಶ:ಪಥಮೇನಿದಕಿನ್ನು ನಿನ್ನನಾಂ ಕೊಲ್ಲದೊಡೆ | ವಿಪುಲಪಾತಕರಾಶೀ ತನಗೆ ಸಂಘಟಿಸದಿ | ರ್ದಪುದೆ ಪೇಳೆನುತ ತೆಗೆದೆಚ್ಚೊಡಾ ಬಾಣಮಂ ಸುರಥಂ ನಡುವೆ ಖಂಡಿಸಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೪:[ಸಂಪಾದಿಸಿ]
ಸುರಥನಿಸುಗೆಯೊಳರ್ಜುನಂ ನೊಂದು ಮುಂಗಾಣ | ದಿರೆ ಮುರಾಂತಕನಿವನ ತೋಳ್ಗಳಂ ಬೇಗ ಕ | ತ್ತರಿಸು ದಿವ್ಯಾಸ್ತ್ರಮಂ ಪೂಡೆಂದು ತಾಂ ಪಾಂಚಜನ್ಯಮಂ ಪೂರೈಸಲು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೫:[ಸಂಪಾದಿಸಿ]
ಒತ್ತೋಳನುತ್ತರಿಸಲೊತ್ತೋಳ ಸತ್ವದಿಂ | ಮತ್ತಾತನುರವಣಿಸಿ ಮತ್ತ ದಂತಿಯ ತೆರದಿ | ನೊತ್ತಿ ಭರದಿಂ ಪಾರ್ಥನೊತ್ತಿಗೈತರೆ ಕಂಡು ಹರಿ ವಿಜಯನಂ ಜರೆಯಲು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೬:[ಸಂಪಾದಿಸಿ]
ತೋಳ್ಗಳೆರಡುಂ ಕತ್ತರಿಸಿ ಬೀಳೆ ಮತ್ತೆ ಕ | ಟ್ವಾಳ್ಗಳ ಶಿರೋಮಣಿ ಸುರಥನಾ ಕಿರೀಟಯಂ | ಕಾಲ್ಗಂಳಿಂದೊದೆದು ಕೆಡಹುವೆನೆಂದು ಭರದಿಂದೆ ಬೊಬ್ಬಿರಿಯುತೈತರಲ್ಕೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೭:[ಸಂಪಾದಿಸಿ]
ಆಗ ಮುರಹರನಾಜ್ಞೆಯಿಂದೆಚ್ಚು ಫಲಗುಣಂ | ಬೇಗ ಸುರಥನ ಶಿರವನರಿಯಲಾ ತಲೆ ಬಂದು | ತಾಗಿತತಿಭರದೊಳ್ ನರನ ವಕ್ಷವಂ ಕೆಡಹಿತಾ ವರೂಥಾಗ್ರದಿಂದ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೮:[ಸಂಪಾದಿಸಿ]
ಶ್ರೀ ಕರಾಂಬುಜಯುಗ್ಮದಿಂದೆತ್ತಿಕೊಂಡು ಕಮ | ಲಾಕಾಂತನಾ ಶಿರವನೀಕ್ಷಿಸಿ ಕರುಣದಿಂದ | ಮಾಕಾಶದೆಡೆಯೊಳಿಹ ಗರುಡನಂ ಕರೆದಿತ್ತು ಜವದಿಂ ಪ್ರಯಾಗಕೈದಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೯:[ಸಂಪಾದಿಸಿ]
ಎಲ್ಲಿಗೊಯ್ದಪನೀ ಸುರಥನ ತಲೆಯಂ ಗರುಡ | ನಿಲ್ಲಿಹುದು ರುಂಡಮಾಲೆಯೊಳಿವನ ಸೋದರನ | ಸಲ್ಲಲಿತ ಶಿರಮಿದುರ ಸಂಗಡಕೆ ಕೊಂಡು ಬಾರೆಂದು ಮದನಾರಿ ಬೆಸಸೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೦:[ಸಂಪಾದಿಸಿ]
ಗರುಡನ ಗರಿಯ ಗಾಳಿಯೊಳ್ ಸಿಕ್ಕಿ ಬೆಂಡಾಗಿ | ತಿರುಗಿ ಬಂದಭವಂಗೆ ಭೃಂಗಿಪಂ ಬಿನ್ನೈಸು | ತಿರೆ ಕೇಳ್ದು ಗಿರಿಜೆ ನಸುನಗುತೆ ಹರಿವಾಹನನ ಬಲ್ಮೆಯಂ ನೆರೆ ಪೊಗಳ್ದು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೧:[ಸಂಪಾದಿಸಿ]
ಬೇಗದಿಂದೈದಿ ನಂದೀಶ್ವರಂ ಗರುಡನಂ | ಪೋಗದಿರ್ ತಲೆಯನಾಭರಣಕ್ಕೆ ತಾರೆಂದು ನಾಗಭೂಷಣನಟ್ಟಿದಂ ತನ್ನೀಯದೊಡೆ ನಿನಗೆ ಬಹುದುಪಹತಿಯೆನೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೨:[ಸಂಪಾದಿಸಿ]
ತ್ರಿಭುವನವನಲ್ಲಾಡಿಸುವ ಗರಿಯ ಗಾಳಿಗಿಳಿ ರಭಸದಿಂದೈದುವ ಸುಪರ್ಣನಂ ಹಿಂದಣ ವೃ | ಷಭನ ಮುಖದುಚ್ಛ್ವಾಸ ನಿಶ್ವಾಸ ಮಾರುತಂ ತಡೆದತ್ತಲಿತ್ತಲೆಳೆಯೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೩:[ಸಂಪಾದಿಸಿ]
ಆ ಗರುಡನಾ ಶಿರವನಾಪ್ರಯಾಗದ ಜಲದೊ | ಳಾ ಗಗನದಿಂದೆ ಬಿಸುಟಾ ಕೃಷ್ಣನಿದ್ದಬಳಿ | ಗಾಗಿ ತಿರುಗಿದನಾಗಳಾ ತಲೆಯನಲ್ಲಿಂದಮಾ ವೃಷಭನೆತ್ತಿಕೊಂಡು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೪:[ಸಂಪಾದಿಸಿ]
ಇತ್ತಲರ್ಜುನಕೃಷ್ಣರಿಂದೆ ಸುರಥಂ ಮಡಿದ | ಮೃತ್ತಾಂತಮಂ ಕಂಡು ಹಂಸಧ್ವಜಂ ತನ್ನ | ಚಿತ್ತದೊಳ್ ಕಡುನೊಂದಳಲ್ದು ಮಿಗೆ ಮರಣಮಂ ನಿಶ್ಚೈಸಿ ರೋಷದಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೫:[ಸಂಪಾದಿಸಿ]
ಮುಳಿದು ಹಂಸಧ್ವಜಂ ಕಾಳೆಗಕೆ ನಿಲಲಾಗ | ನಳಿನಭವನಳ್ಕಿದಂ ಲೋಕಸೃಷ್ಟಿಗೆ ಮತ್ತೆ | ಬಳಲಬೇಕೆಂದು ರವಿಮಂಡಲಂ ನಡುಗಿತೊಡನೈದುವ ಭಟರ ರಭಸಕೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೬:[ಸಂಪಾದಿಸಿ]
ಹಂಸಧ್ವಜಂ ಕಾದಲೆಂತಹುದೊ ಎನುತಮಾ | ಕಂಸಾಂತಕಂ ನಿದಾನಿಸಿಕೊಂಡು ಶಕ್ರಸುತ | ನಂ ಸೈರಿಸೆನುತೆ ಕುದುರೆಗಳ ವಾಘೆಯನಿಲಿಸಿ ಜಗುಳ್ದ ಪೀತಾಂಬರವನು |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೭:[ಸಂಪಾದಿಸಿ]
ಮಿಸುಪ ಮಕುಟದ ನೊಸಲ ತಿಲಕದಿಂದಲಕದಿಂ | ದೆಸಳುಗಂಗಳ ತೊಳಪ ಕದಪಿನಿಂ ಪದಪಿನಿಂ | ಪಸರಿಸುವ ನಸುನಗೆಯ ವದನದಿಂ ರದನದಿಂ ಪÉÇಳೆವ ಚಬುಕಾಗ್ರದಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೮:[ಸಂಪಾದಿಸಿ]
ರಥದಿಂದಮಿಳಿದು ತನಗಿದಿರಾಗಿ ಬಹ ದನುಜ | ಮಥನನಂ ಕಾಣುತೆ ಮರಾಳಧ್ವಜಂಮನೋ | ವ್ಯಥೆಯೆಲ್ಲಮಂ ಮರೆದು ಹರ್ಷದಿಂ ಪಿಡಿದ ಶರಧನುಗಳಂ ಕೆಲಕೆ ಸಾರ್ಚಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೯:[ಸಂಪಾದಿಸಿ]
ಆ ಮಹೀಪತಿಯ ನುಡಿಗಸುರಾರಿ ನಗುತೆ ಸಂ | ಗ್ರಾಮದೊಳ್ ಪಾರ್ಧನಂ ಗೆಲ್ವೆನೆಂಬೀಕ್ಷಾತ್ರ | ತಾಮಸಮಿದೇಕೆ ವಿಜಯಂಗಾವು ಮಾಡುವ ಸಹಾಯಮಂ ಕಂಡು ಕಂಡು | |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೦:[ಸಂಪಾದಿಸಿ]
ಕ್ಷತ್ರಿಯಂ ಬಿರುದಿನ ಹಯಂ ಬರಲ್ಕಟ್ಟಿದೆ ಧ | ರಿತ್ರಿಯನದೆಂತಾಳ್ದಪಂ ಬಳಿಕೆ ಗೆಲ್ದೊಡಂ | ಶತ್ರುವಿಂದಳಿದೊಡಂ ಕೇಡಾವುದಾತಂಗೆ ಸಾಕದಂತಿರಲಿ ನಿಮ್ಮ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೧:[ಸಂಪಾದಿಸಿ]
ಆ ದೊಡೆಲೆ ನೃಪ ಸಖ್ಯದಿಂದೆಮ್ಮನೀಗ ನೀ | ನಾದರಿಸಿ ಪಾರ್ಧನಂ ಕಂಡು ಧರ್ಮಜನ ಹಯ | ಮೇಧಕೆ ಸಹಾಯಮಾಗಿಹುದೆಂದು ಕೃಷ್ಣನವನಂ ತೆಗೆದು ತಕ್ಕೈಸಲು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೨:[ಸಂಪಾದಿಸಿ]
ಅರಸ ಕೇಳು ಬಳಿಕುಳಿದ ಸೇನೆಯೆಂ ಸುತ ಸಹೋದರ | ಬಂಧು ವರ್ಗಮಂ ಸಚಿವ ಸಾಮಂತರಂ | ಗುರುಪುರೋಹಿತರಂ ಚಮೂಪರಂ ಚತುರಂಗದಗ್ಗಳೆಯ ಪಟುಭಟರನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೩:[ಸಂಪಾದಿಸಿ]
ಕಡೆಯಮಾತೇನವಂ ಸಪ್ತಪ್ರಕೃತಿಗಳಂ | ತಡೆಯದೆಲ್ಲವನಿವರ್ಗೊಪ್ಪಿಸಿದನಾ ನಗರ | ದೆಡೆಯೊಳೈದಿರುಳಿರ್ದು ಹಂಸಧ್ವಜಂ ಸಹಿತ ರ್ಪಾಧನಂ ತುರುಗದೊಡನೆ || |
[ಆವರಣದಲ್ಲಿ ಅರ್ಥ];=
|
ಹೋಗಿ[ಸಂಪಾದಿಸಿ]
ನೋಡಿ[ಸಂಪಾದಿಸಿ]
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ[ಸಂಪಾದಿಸಿ]
ಕನ್ನಡ ವಿಕಿಸೋರ್ಸ್[ಸಂಪಾದಿಸಿ]
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ|
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ[ಸಂಪಾದಿಸಿ]
- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.