ಜೈಮಿನಿ ಭಾರತ/ಎಂಟನೆಯ ಸಂಧಿ
ಎಂಟನೆಯ ಸಂಧಿ[ಸಂಪಾದಿಸಿ]
ಪದ್ಯ :-:ಸೂಚನೆ |:[ಸಂಪಾದಿಸಿ]
ಸೂಚನೆ : ಅದ್ವರೋಪಕ್ರಮದೊಳಮಲಹಯಮೈದೆ ನೀ | ಲಧ್ವಜನ ಪಟ್ಟಣದೊಳಗ್ನಿಯಂ ಕಂಡರಿಬ | ಲಧ್ವಂಸಿ ಪಾರ್ಥನವನಂ ಜಯಿಸೆ ಭಂಗದಿಂ ತನ್ನ ಪುರಮಂ ಪೊಕ್ಕನು || |
[ಆವರಣದಲ್ಲಿ ಅರ್ಥ];=
(ಪದ್ಯ - ಸೂಚನೆ) VI-VIII |
ಪದ್ಯ :-:೧:[ಸಂಪಾದಿಸಿ]
ರಾಯ ಕೇಳನುಸಾಲ್ವನಂ ಕೂಡಿಕೊಂಡು ಕಮ | ಲಾಯತಾಂಬಕನಖಿಳಯಾದವರ ಗಡಣದಿಂ | ದಾ ಯುಧಿಷ್ಠಿರನೃಪನ ಸನ್ಮಾನಮಂ ತಳೆಯತಿರೆ ಜಾಹ್ನವೀತಟದೊಳು || |
[ಆವರಣದಲ್ಲಿ ಅರ್ಥ];=
(ಪದ್ಯ - ೧) |
ಪದ್ಯ :-:೨:[ಸಂಪಾದಿಸಿ]
ಒಂದೆಡೆಯೊಳಂ ತನಗೆ ನಿಲವಿಲ್ಲದತಿವೇಗ | ದಿಂದೆ ನಿರುತಂ ಪ್ರಬಲಮಾಗಿ ಬೀಸುವ ಗಾಳಿ | ಚಂದನದ್ರುಮಮಂ ತೊಡರ್ದಹಿಗಳಾಹಾರವಂ ಕೊಂಡುಕೊಂಡು ಮಿಕ್ಕು || |
[ಆವರಣದಲ್ಲಿ ಅರ್ಥ];=
(ಪದ್ಯ - ೨)(If I am right) |
ಪದ್ಯ :-:೩:[ಸಂಪಾದಿಸಿ]
ಮಿರುಗುವ ತಳಿರ್ದೋರಣಂಗಳಂ ಕಟ್ಟಿಸುತೆ | ಮರಿಗೋಗಿಲೆಗಳ ಬಾಯ್ಗಳ ಬಲಿದ ಬಂಧನದ | ಸೆರೆಗಳಂ ಬಿಡಿಸುತ್ತೆ ತುಂಬಿಗಳ ದಳಕೆ ಕಮ್ಮಲರ್ಗಳಂ ಸೂರೆವಿಡುತೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೩) |
ಪದ್ಯ :-:೪:[ಸಂಪಾದಿಸಿ]
ಫೊಸಮಾವಶೋಕೆಯೊಳ್ ಮರಿದುಂಬಿ ಕೋಗಿಲೆಯೊ | ಳೆಸೆವ ಸಂಪಗೆ ಪೊಚ್ಪ ಪೊಂದಾವರೆಯೊಳೊಳ್ಪವ| ಡಸಿದ ಮಲ್ಲಿಗೆಯಲರ್ ಬೆಳತ ಬೆಳ್ದಿಂಗಳೊಳ್ ಗಿಳಿವಿಂಡು ಬನಸಿರಿಯೊಳು || |
[ಆವರಣದಲ್ಲಿ ಅರ್ಥ];=
(ಪದ್ಯ - ೪) |
ಪದ್ಯ :-:೫:[ಸಂಪಾದಿಸಿ]
ತಳಿತೆಸೆವ ತರುಗಳ ನೆಳಲ್ಗಳಂ ಸಾರ್ದು ಶೀ | ತಳದ ನಿರ್ಮಲಸುವಾರಿಯನೀಂಟಿ ನವ್ಯಪರಿ| ಮಳದಿಂದೆ ಸೊಗಸ ತೀಡುವ ತೆಳುವೆಲರ್ಗೆ ಮೆಯ್ಯೊಡ್ಡಿ ಮಾರ್ಗಶ್ರಮವನು || |
[ಆವರಣದಲ್ಲಿ ಅರ್ಥ];=
(ಪದ್ಯ - ೫) |
ಪದ್ಯ :-:೬:[ಸಂಪಾದಿಸಿ]
ಆ ಚೈತ್ರ ಮಾಸಮೆಸೆದುದು ಧರ್ಮಜನ ಕೀರ್ತಿ | ಭೂಚಕ್ರಮಂ ಮುಸುಕಿದಂತೆ ಬೆಳುದಿಂಗಳಿರೆ | ಯಾಚಕರನೆತ್ತಲುಂ ಕೂಗಿ ಕರೆವಂತುಲಿಯೆ ಕೋಗಿಲೆಗಳಿಳೆಯ ಜನದ || |
[ಆವರಣದಲ್ಲಿ ಅರ್ಥ];=
(ಪದ್ಯ - ೬) |
ಪದ್ಯ :-:೭:[ಸಂಪಾದಿಸಿ]
ಧಾತ್ರೀಶ ಕೇಳ್ ಬಳಿಕ ಧರ್ಮಜಂ ತಾಮರಸ | ನೇತ್ರ ವೇದವ್ಯಾಸರಾಜ್ಞೆಯಿಂದಖಿಳರ್ಷಿ | ಗೋತ್ರದ ಮುನಿಗಳೆಲ್ಲರಂ ಕರೆಸಿ ಮೇಲವರನುಜ್ಞೆಯಿಂದಾ ಯಜ್ಞದ || |
[ಆವರಣದಲ್ಲಿ ಅರ್ಥ];=
(ಪದ್ಯ - ೭)VII -VIII |
ಪದ್ಯ :-:೮:[ಸಂಪಾದಿಸಿ]
ಇಂದುಕುಲದಗ್ಗಳೆಯ ಪಾಂಡುವಸುಧಾಪಾಲ | ನಂದನ ಯುಧಿಷ್ಠಿರ ನರೇಂದ್ರನಧ್ವರಹಯಮಿ | ದಂ ದಿಟ್ಟರಾರಾದೊಡಂ ಕಟ್ಟಿಕೊಳಲಾರ್ಪೊಡಿಳೆಯೊಳೆಂಬೀ ಲಿಪಿಯನು || |
[ಆವರಣದಲ್ಲಿ ಅರ್ಥ];=
(ಪದ್ಯ - ೮) |
ಪದ್ಯ :-:೯:[ಸಂಪಾದಿಸಿ]
ಶ್ಲಾಘ್ಯದಿಂದಾದ ಮಜ್ಜನಭೋಜನದ ಸದಾ | ರೋಗ್ಯದಿಂ ತಾಂಬೂಲ ವಸ್ತ್ರ ಭೂಷಣದ ಸೌ | ಭಾಗ್ಯದಿಂ ಕುಸುಮ ಪರಿಮಳಲೇಪನಂಗಳಿಂ ಸ್ತ್ರೀಪುರುಷರೇಕಾಂತಕೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೯) |
ಪದ್ಯ :-:೧೦:[ಸಂಪಾದಿಸಿ]
ತದ್ಯಾಗಮೊಂದು ಬರಿಸಕೆ ಮುಗಿವುದನ್ನೆಗಂ | ಸದ್ಯಾಜಮಾನದೀಕ್ಷೆಯನವನಿಪಂ ತಾಳ್ದ | ನುದ್ಯುಕ್ತರಾದರರ್ಜುನನೊಡನೆ ಹಯರಕ್ಷೆಗಸುರಹರನಾಜ್ಞೆಯಿಂದೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೧೦) |
ಪದ್ಯ :-:೧೧:[ಸಂಪಾದಿಸಿ]
ಇಭಮುಖಾರ್ಚನೆಯಂ ನವಗ್ರಹದ ಪೂಜೆಯಂ | ವಿಭವದಿಂ ಮಾಡಿ ಧರ್ಮಜ ಭೀಮ ಕುಂತಿಗ | ಳ್ಗಭಿನಮಿಸಿ ಕೃಷ್ಣನ ಪದಾಂಬುಜಕ್ಕೆರಗಿ ದಿಕ್ಪಾಲರಂ ಬೇಡಿಕೊಂಡು || |
[ಆವರಣದಲ್ಲಿ ಅರ್ಥ];=
(ಪದ್ಯ - ೧೧) |
ಪದ್ಯ :-:೧೨:[ಸಂಪಾದಿಸಿ]
ಮುರಹರನ ರಾಣಿಯರ್ ಧುರಧೀರ ಕರ್ಣಸುತ | ನರಸಿಯೆಂದೆನ್ನ ಪೊಗಳ್ವಂತೆ ಮಿಗೆ ಸಂಗರದೊ | ಳರಿಗಳಂ ಗೆಲ್ವುದೆಂದಾರತಿಯನೆತ್ತಿ ಮುತ್ತಿನ ಸೇಸೆಗಳನೆ ಸೂಸಿ || |
[ಆವರಣದಲ್ಲಿ ಅರ್ಥ];=
(ಪದ್ಯ - ೧೨) |
ಪದ್ಯ :-:೧೩:[ಸಂಪಾದಿಸಿ]
ಅಂಕೆಯಿಂದರ್ಜುನಂಗಂದು ಯಾದವಸೈನ್ಯ | ಮಂ ಕೂಡಿಕೊಟ್ಟು ದಳಪತಿಯಾಗಿ ತನಯನಂ | ಮುಂಕೊಳಿಸಿ ಕರ್ಣಜ ಸುವೇಗಾನುಸಾಲ್ವರ ಸಹಾಯಮಂ ಕೈವರ್ತಿಸಿ || |
[ಆವರಣದಲ್ಲಿ ಅರ್ಥ];=
(ಪದ್ಯ - ೧೩) |
ಪದ್ಯ :-:೧೪:[ಸಂಪಾದಿಸಿ]
ಊಹಿಸುವೊಡರಿದೆನೆ ತುರಂಗಮದ ಕೂಡೆ ಸ | ನ್ನಾಹದಿಂ ಮೇರೆದಪ್ಪಿದ ಮಹಾರ್ಣವದ ಪ್ರ | ವಾಹಮೆನೆ ತಳ್ತಿಡಿದ ತರುಗುಲ್ಮಲತೆಗಳಿಂ ತಡೆಗೊಂಡ ಕಾನನಮೆನೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೧೪) |
ಪದ್ಯ :-:೧೫:[ಸಂಪಾದಿಸಿ]
ಆ ನಗರದರಸು ನೀಲಧ್ವಜಂ ಮೇಣವನ | ಸೂನು ಪ್ರವೀರನೆಂಬವನಾಗಲ್ಲಿಗು | ದ್ಯಾನಕೇಳಿಗೆ ಬಂದನೊಲವಿಂದೆ ಮದನಮಂಜರಿಯೆಂಬ ಕಾಂತೆಯೊಡನೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೧೫)viii - viii |
ಪದ್ಯ :-:೧೬:[ಸಂಪಾದಿಸಿ]
ನೋಡಿ ತಿಲಕವನಪ್ಪಿ ಕುರುವಕವನೆಳನಗೆಯೊ | ಳೂಡಿ ಸಂಪಗೆಯಂ ಪ್ರಿಯಂಗುವಂ ಸೋಂಕಿ ಮುರಿ | ದಾಡಿ ಚೂತಮನೊದೆರಶೋಕೆಯಂ ಬಕುಳಮಂ ಮುಕ್ಕುಳಿಸಿ ಮದ್ಯದಿಂದೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೧೬) |
ಪದ್ಯ :-:೧೭:[ಸಂಪಾದಿಸಿ]
ಮುಟ್ಟಲ್ ಪ್ರಿಯಂಗು ಪೂವಹ ತರಳೆಯರ ಕೈಗೆ | ನಿಟ್ಟಿಸಲ್ ತಿಲಕಮಲರಹ ನೀರೆಯರ ಕಣ್ಗೆ | ಮೆಟ್ಟಿದೊಡಶೋಕಮಂಕುರಮಪ್ಪ ಬಾಲೆಯರ ಮೆಲ್ಲಡಿಗೆ ಮಿಗೆ ಬೆಳ್ನಗೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೧೭) |
ಪದ್ಯ :-:೧೮:[ಸಂಪಾದಿಸಿ]
ಸಣ್ಣನಡು ಸೈನಿಮಿರೆ ತೋಳಮೊದಲೊಳ್ಪೆಸೆಯೆ | ತಿಣ್ಣಮೊಲೆಗಳ್ ಪೊದಳೆ ಬೆನ್ನ ಸೋರ್ಮುಡಿಯಲೆಯೆ | ಕಣ್ಣ ಬೆಳಗಾಗಸವ(ಸಾ)ನಾವರಿಸೆ ಮೊಗಮೆತ್ತಿ ತುದಿಗಾಲ್ಗಳಿಂದೆ ನಿಂದು || |
[ಆವರಣದಲ್ಲಿ ಅರ್ಥ];=
(ಪದ್ಯ - ೧೮)IX-IIX |
ಪದ್ಯ :-:೧೯:[ಸಂಪಾದಿಸಿ]
ನಿಲುಕಿ ಪೂಗೊಯ್ವ ಲಲಿತಾಂಗಿಯರ ಬಟ್ಟಬ | ಲ್ಮೊಲೆಗಳಂ ಪೊರಲಾರದಸಿಯ ಸೆಳೆನಡುವಿದು ಶಿ | ಥಿಲಮೆಂದು ಹರಿನೀಲದೆಸೆವೊಂದು ಸಣ್ಣಸರಳಂ ಮನೋಜಂ ನಿರ್ಮಿಸಿ || |
[ಆವರಣದಲ್ಲಿ ಅರ್ಥ];=
(ಪದ್ಯ - ೧೯) |
ಪದ್ಯ :-:೨೦:[ಸಂಪಾದಿಸಿ]
ತುಂಬಿಗಳನೋಡಿಸದ ಚಂಪಕಂ ಸೊಕ್ಕಾನೆ | ಯಂ ಬೆದರಿಸದ ಸಿಂಗಮಿಡಿದಂಧಕಾರಮಂ | ತುಂಬಿಸದಚಂದ್ರಮಂಡಲಮಿರಲ್ ಕಂಡಿಲ್ಲಿ ನಾವುಮಿರ್ದೊಡೆ ನಮ್ಮನು || |
[ಆವರಣದಲ್ಲಿ ಅರ್ಥ];=
(ಪದ್ಯ - ೨೦) |
ಪದ್ಯ :-:೨೧:[ಸಂಪಾದಿಸಿ]
ಮೊಳೆವಲ್ಲ ಮೊಲ್ಲೆಯಂ ಚೆಂದುಟಿಯ ಬಂದುಗೆಯ | ನೆಳನಗೆಯ ಮಲ್ಲಿಗೆಯ ನೆಸಳ್ಗಣ್ಣ ನೈದಿಲಂ | ನಳಿತೋಳ ಸಿರಿಸಮಂ ಸೆಳ್ಳುಗುರು ಕೇತಕಿಯ ನುಣ್ಮೊಗದ(ಆನನದ) ತಾವರೆಯನು || |
[ಆವರಣದಲ್ಲಿ ಅರ್ಥ];=
(ಪದ್ಯ - ೨೧) |
ಪದ್ಯ :-:೨೨:[ಸಂಪಾದಿಸಿ]
ಕರವೀರವರ್ಗಮಂ ಬಾಗಿಸಿದರದಟರಂ | ತಿರದೆ ಪುನ್ನಾಗಮಂ ಪತ್ತಿರಂಜಿಸಿದರ್ ಚ | ದುರಮಾವುಗರಂತೆ ಜಾತಿಯಂತರವನರಿದಾಯ್ದುರವನೀಶರಂತೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೨೨)X-||X |
ಪದ್ಯ :-:೨೩:[ಸಂಪಾದಿಸಿ]
ಜಾತಿ ಸೇವಂತಿಗೆ ಶಿರೀಷಮೊದಲಾದ ಪೂ | ಜಾತಿಗಳೊಳಿಂತಲರ್ಗೊಯ್ಯತುಪವನದೊಳ್ ನಿ | ಜಾತಿಶಯಲೀಲೆಯಿಂದಿರುತಿರ್ದಳಾ ಮದಮಂಜರಿ ಕೆಳೆದಿಯರೊಡನೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೨೩) |
ಪದ್ಯ :-:೨೪:[ಸಂಪಾದಿಸಿ]
ವನಿತೆಯರೊಳಾ ಮದನಮಂಜರಿ ಹಯದ ಪಣಿಯ | ಕನಕಪಟ್ಟದ ಲೇಖನವನೋದಿಕೊಂಡು ಯಮ | ತನುಜನಗ್ಗಳಿಕೆಯಂ ಕಂಡು ನಸುನಗುತೆ ನಿಜಪತಿಗಾಗಳದನುಸಿರಲು || |
[ಆವರಣದಲ್ಲಿ ಅರ್ಥ];=
(ಪದ್ಯ - ೨೪) |
ಪದ್ಯ :-:೨೫:[ಸಂಪಾದಿಸಿ]
ಭೂಲೋಲ ಕೇಳಗ್ನಿ ಮನೆಯಳಿಯನಾಗಿಹಂ | ನೀಲದ್ವಜಂಗದೆಂತೆನೆ ಮುನ್ನವನ ಮಗಳ್ | ಮೂಲೋಕದೊಳ್ ಸುಭಗರಾರೆಂದರಸಿ ನೋಂತು ಪಾವಕನ ನೊಲಿಸೆಮೆಚ್ಚಿ || |
[ಆವರಣದಲ್ಲಿ ಅರ್ಥ];=
(ಪದ್ಯ - ೨೪) |
ಪದ್ಯ :-:೨೬:[ಸಂಪಾದಿಸಿ]
ಕಟ್ಟಿರ್ದ ಕುದುರೆಯಂ ಕಂಡು ಕಾಪಿನ ಭಟರ್ | ದಟ್ಟಿಸಿದೊಡಾ ಪ್ರವೀರಂ ಕೆರಳ್ದಾಹವಂ | ಗೊಟ್ಟೆನಾರ್ಪೊಡೆ ಬರಲಿ ತನ್ನೊಡನೆ ಕಾಳಗಕೆ ಪಡೆಸಹಿತ ಪಾರ್ಥನೆಂದು || |
[ಆವರಣದಲ್ಲಿ ಅರ್ಥ];=
(ಪದ್ಯ - ೨೬) |
ಪದ್ಯ :-:೨೭:[ಸಂಪಾದಿಸಿ]
ಚೂಳಿಯ ಚತುರ್ಬಲದ ದಾಳಿ ನಗರಿಗೆ ನಭಕೆ | ದೂಳಿ ದೆಸೆದೆಸೆಗಳ್ಗೆ ಘೀಳಿಡುವವಾದ್ಯರವ | ದೋಳಿ ನೆರೆ ಮುಸುಕಿತೊಂದೇ ಬಾರಿ ಪುರಜನಕೆ ರವಿಗೆ ದಿಕ್ಬಾಲಕರ್ಗೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೨೭)X| |
ಪದ್ಯ :-:೨೮:[ಸಂಪಾದಿಸಿ]
ಮೇರೆದಪ್ಪಿದ ಮಹಾರ್ಣವದಂತೆ ಭುವನಸಂ | ಹಾರಕಾಲದ ಮೇಘಚಯದಂತೆ ಭರದಿಂದೆ ಪ್ರ | ವೀರನಂ ಮುಸುಕಿತರ್ಜುನನ ಮುಂಚೂಣಿಯ ಚತುರ್ಬಲಂದೆಸೆದೆಸೆಯೊಳು | |
[ಆವರಣದಲ್ಲಿ ಅರ್ಥ];=
(ಪದ್ಯ - ೨೮) |
ಪದ್ಯ :-:೨೯:[ಸಂಪಾದಿಸಿ]
ಮೇಗೆ ಮುಸುಕಿದ ಚೂಣಿಯನಿತು ಚಾತುರ್ಬಲವ | ನಾಗಳೋರ್ವನೆ ಚಾರಿವರಿವರಿದು ಬಾಣಪ್ರ | ಯೋಗಂಗಳಿಂ ಪ್ರವೀರಂ ಕೊಲ್ವುದಂ ಕಂಡು ಬಿಲ್ಗೊಂಡು ಕೋಪದಿಂದೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೨೯) |
ಪದ್ಯ :-:೩೦:[ಸಂಪಾದಿಸಿ]
ಆ ಪ್ರವೀರಂ ಬಳಿಕನಿಬರೆಲ್ಲರೊಡನೆ ನಾ | ನಾಪ್ರಕಾರದ ಸಮರದೊಳ್ ಕಾದಲಿತ್ತ ಸೇ | ನಾಪ್ರತತಿಸಹಿತ ನೀಲಧ್ವಜಂ ನಗರಮಂ ಪೊರೆಮಟ್ಟನೇವೇಳ್ವೆನು | |
[ಆವರಣದಲ್ಲಿ ಅರ್ಥ];=
(ಪದ್ಯ - ೩೦) |
ಪದ್ಯ :-:೩೦:[ಸಂಪಾದಿಸಿ]
ಮೊಗಸಿದರ್ ಪರಬಲವನಾಗಳ್ ಪ್ರವೀರನಂ | ತೆಗೆಸಿದರ್ ಪಿನ್ನೆಲೆಗೆ ರಿಪುಸೈನ್ಯದಳವಿಯಂ ! ತೆಗೆಸಿದರ್ ತಮತಮಗೆ ಕೈಕೊಂಡು ವಾರಣ ವರೂಥ ವರವಾಜಿಗಳನು || |
[ಆವರಣದಲ್ಲಿ ಅರ್ಥ];=
(ಪದ್ಯ - ೩೦) |
ಪದ್ಯ :-:೩೨:[ಸಂಪಾದಿಸಿ]
ಮಗ್ಗಿದರ್ ಮಸಗಿದಂಬುಧಿಯ ತೆರೆಯಂತೆ ಸಲೆ | ಮುಗ್ಗಿದರ್ ಮುಗಿಲಮೊಗ್ಗರದಂತೆ ಭೋಂಕರಿಸು | ತೊಗ್ಗಿದರ್ ಕವಿದು ಜೇನ್ನೊಣದಂತೆ ಪೊಯ್ದಾಡಿ ರಿಪುಸೈನ್ಯಕಾನನವನು || |
[ಆವರಣದಲ್ಲಿ ಅರ್ಥ];=
(ಪದ್ಯ - ೩೨) |
ಪದ್ಯ :-:೩೩:[ಸಂಪಾದಿಸಿ]
ಪೊಯ್ದಾಡಿ ಮಡಿದ ಕಲಿಗಳ ಶರೀರಂಗಳಂ | ಪೊಯ್ದೆಳೆದು ಪರಿತಿಂಬ ಮರುಳ್ಗಳಂ ಮೇಣವರ | ನೊಯ್ದಲ್ಲಿ ದಿವ್ಯತನುಗಳೊಳಪ್ಪಿ ಚುಂಬಿಸುವ ಸುರಸತಿಯರಂ ಕಾಣುತೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೩೩) |
ಪದ್ಯ :-:೩೪:[ಸಂಪಾದಿಸಿ]
ಕೃತವರ್ಮನುರವಣೆಯನನುಸಾಲ್ವನುಬ್ಬಟೆಯ | ನತಿಬಲಸುವೇಗನ ಪರಾಕ್ರಮವನಾದಿತ್ಯ | ಸುತಸುತನ ಶೌರ್ಯಮಂ ಸಾತ್ಯಕಿಯ ವೀರ್ಯಮಂ ವರಯೌವನಾಶ್ವನೃಪನ || |
[ಆವರಣದಲ್ಲಿ ಅರ್ಥ];=
(ಪದ್ಯ - ೩೪) |
ಪದ್ಯ :-:೩೫:[ಸಂಪಾದಿಸಿ]
ಅರ್ಜುನಂ ಕಂಡನಹಿತ ಪ್ರಬಲಬಲಮಸುರ | ನಿರ್ಜರರ್ಗರಿದೆನೆ ಕಠೋರಮಾಗಲ್ ತನ್ನ | ವರ್ಜಯಿಸಲರಿಯರೇನೆಂದು ಕಡುಗೋಪದಿಂ ಚಾಪಮಂ ಪಿಡಿದು ಮಿಡಿದು || |
[ಆವರಣದಲ್ಲಿ ಅರ್ಥ];=
(ಪದ್ಯ - ೩೫) |
ಪದ್ಯ :-:೩೨:[ಸಂಪಾದಿಸಿ]
ಮುರಿದು ಬಹಸೇನೆಯಂ ಕಂಡಾ ಪ್ರವೀರನುರೆ | ಜರೆದು ಕೋದಂಡಮಂ ಕೊಂಡು ಕೌಂತೇಯನಂ | ತರುಬಲಡಹಾಯ್ದು ವೃಷಕೇತು ಬರಲಾತನೊಳ್ ಸರಿಯಾಗಿ ಕಾದುತಿರಲು || |
[ಆವರಣದಲ್ಲಿ ಅರ್ಥ];=
(ಪದ್ಯ - ೩೨)X|| |
ಪದ್ಯ :-:೩೭:[ಸಂಪಾದಿಸಿ]
ವಾನರವರಧ್ವಜಂ ಮುಳಿದು ನೀಲಧ್ವಜನ | ಸೇನೆಯಂ ತಡೆಗಡಿಯುತಾತನಂ ಮುಸುಕಿದನ | ನೂನಶರಜಾಲದಿಂ ಬಳಿಕವಂ ಕಂಗೆಟ್ಟು ಪಾವಕಂ ಪೊರೆಯೊಳಿರಲು || |
[ಆವರಣದಲ್ಲಿ ಅರ್ಥ];=
(ಪದ್ಯ - ೩೭) |
ಪದ್ಯ :-:೩೮:[ಸಂಪಾದಿಸಿ]
ಛತ್ರ ಚಾಮರ ಹರಿಗೆ ಹಕ್ಕರಿಗೆ ಹಲ್ಲಣ ವಿ | ಚಿತ್ರದ ಪತಾಕೆ ಸೀಗುರಿ ಸಿಂಧ ಸೀಸಕ ತ | ನುತ್ರ ರಂಜಿಕೆ ಪಾಶ ವಸ್ತ್ರ ವಾಹನ ವಾದ್ಯ ಕೈದು ಬತ್ತಳಿಕೆ ಬಂಡಿ || |
[ಆವರಣದಲ್ಲಿ ಅರ್ಥ];=
(ಪದ್ಯ - ೩೮) |
ಪದ್ಯ :-:೩೯:[ಸಂಪಾದಿಸಿ]
ಹೊಗೆಹೊಗೆದು ಹೊಗೆ ಸುತ್ತಿ ಹೊಗುವ ದೆಸೆ ದೆಸೆಗಳಂ | ಮೊಗೆಮೊಗೆದು ಮಗಸಿ ಪಲಮೊಗದೊಳವ್ವಳಿಸಿ ಪುಟ | ನೆಗೆನೆಗೆದು ನೆಗಳ್ದು ಸೋನೆಗಳಾಗಿ ಸುರಿವ ಕಿರುಗಿಡಿಗಳ ತುಷಾರದಿಂದೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೩೯) |
ಪದ್ಯ :-:೪೦:[ಸಂಪಾದಿಸಿ]
ಕಟ್ಟುಗ್ರಕೋಪದಿಂ ಮುಳಿದಂದು ರಾಘವಂ | ತೊಟ್ಟ ಬಾಣದ ಮೊನೆಯ ದಳ್ಳುರಿಯ ಜಳಕೆ ಕಂ | ಗೆಟ್ಟು ಸಿಡಿಮಿಡಿಗೊಂಡ ಸಾಗರದ ಜೀವಾಳಿಯಂತೆ ಪಾಂಡವನ ಸೇನೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೪೦) |
ಪದ್ಯ :-:೪೧:[ಸಂಪಾದಿಸಿ]
ಭಗ್ನರಾದರ್ ಕೆಲರ್ ಕವಚಾದಿಗಳ್ ಬೆಂದು | ನಗ್ನರಾದರ್ ಕೆಲರ್ ಪೆಚ್ಚಿದುರಿಗಿಚ್ಚಿನೊಳ್ | ಮಗ್ನರಾದರ್ ಕೆಲರ್ ತನ್ನ ಸೇನೆಯೊಳಕಟ ಧರ್ಮಜನ ಹಯಮೇಧಕೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೪೧) |
ಪದ್ಯ :-:೪೨:[ಸಂಪಾದಿಸಿ]
ಬಳಿಕನಲ ಸೂಕ್ತಗಳಿಂದೆ ನುತಿಗೆಯ್ದು ಭೂ | ತಳಕೊಂದಿ ಸಾಷ್ಟಾಂಗದಿಂದೆರಗಿ ನಿಂದು ನೀಂ | ಮುಳಿಯಲೇಖೀ ಮಖಂ ನಿನಗೈಸಲೇ ನಿನ್ನ ದೆಸೆಯಿಂದಖೀಳ ಸುರರ್ಗೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೪೨) |
ಪದ್ಯ :-:೪೩:[ಸಂಪಾದಿಸಿ]
ದೇವ ನೀನಂದು ಗಾಂಡೀವಮಂ ತನಗಿತ್ತೆ | ಭಾವಿಸಲ್ ಪಾಂಚಾಲೆ ನಿನ್ನೊಳುದ್ಭವಿಸಿದಳ್ | ನಾವು ಲೋಗರೆ ನಿನಗೆ ಪೇಳೆಂದು ನುತಿಸಿ ಕುಂತೀಸುತಂ ಬೇಡಿಕೊಳಲು || |
[ಆವರಣದಲ್ಲಿ ಅರ್ಥ];=
(ಪದ್ಯ - ೪೩) |
ಪದ್ಯ :-:೪೪:[ಸಂಪಾದಿಸಿ]
ಅಹುದು ನೀವೆಂಬುದಂ ಮೀರಬರ್ಪುದೆ ಹರಿಯ | ಸಹವಾಸಮೇ ಸಾಕು ಜಗದೊಳ್ ಸ್ವಧರ್ಮಮಂ | ವಹಯಿಸದವರಾರು ಮುನಿವರನಾಜ್ಞೆಯಾದಪುದು ಮೇಣಂತುಮಲ್ಲದೆಮಗೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೪೪) |
ಪದ್ಯ :-:೪೫:[ಸಂಪಾದಿಸಿ]
ಸಂಗರಂ ಬೇಡ ನರನೊಡನೆ ಸಾಕಾತನ ತು | ರಂಗಮವ ಬಿಡು ನಡೆ ನಗರಕೆಂದು ವೈಶ್ವಾನ | ರಂ ಗುಣದೊಳರಸನಂ ತಿರುಗಿಸಿದನತ್ತಲರ್ಜುನನುರಿಯ ಡಾವರವನು | |
[ಆವರಣದಲ್ಲಿ ಅರ್ಥ];=
(ಪದ್ಯ - ೪೫) |
ಪದ್ಯ :-:೪೬:[ಸಂಪಾದಿಸಿ]
ರಂಜಿಸುವ ಪಶ್ಚಿಮಾಚಲ ಕಿರಾತಂ ತೊಟ್ಟ | ಗುಂಜಾಭರಣಮೊ ಮೇಣ್ ಗಗನಾಂಬುದಿಯ ತಡಿಯ | ಮಂಜು ವಿದ್ರುಮ ಲತೆಯೊ ಮೇಣಪರ ದಿಗ್ವಧುವಿನಂಗ ಕುಂಕುಮ ಲೇಪವೊ || |
[ಆವರಣದಲ್ಲಿ ಅರ್ಥ];=
(ಪದ್ಯ - ೪೬) |
ಪದ್ಯ :-:೪೭:[ಸಂಪಾದಿಸಿ]
ಬಿಚ್ಚುವೆಣೆವಕ್ಕಿಗಳಹೃದಯಮಂಬೇಯಿಸುವ | ಪೊಚ್ಚ ಪೊಸಕೆಂಡಂಗಳೆನೆ ಲೋಕಮಂ ನುಂಗ | ಲಿಚ್ಚಯಿಸಿ ಬಪ್ಪ ಕತ್ತಲೆಯೆಂಬ ಕಾಳರಕ್ಕಸಿ ಕೋಪದಿಂದುಗಳ್ದ || |
[ಆವರಣದಲ್ಲಿ ಅರ್ಥ];=
(ಪದ್ಯ - ೪೭) |
ಪದ್ಯ :-:೪೮:[ಸಂಪಾದಿಸಿ]
ಓಡಿದುವು ಪಕ್ಷಿಗಳ್ ಗೂಡಿಂಗೆ ದೆಸೆಗಳಂ | ನೋಡಿದುವು ಘೂಕಂಗಳಳಿಗಳಂ ಸೆರೆಗೆಯ್ದು | ಪೂಡಿದುವು ಬಾಗಿಲಂ ಕಮಲಂಗಳರಲ್ದು ವಿಂದೀವರಂಗಳ್ ನಭದೊಳು || |
[ಆವರಣದಲ್ಲಿ ಅರ್ಥ];=
ಮೂಡಿದುವು ತಾರೆಗಳ್, ಚಕ್ರವಾಕಂಗಳಂ ಕಾಡಿದುವು ವಿರಹತಾಪಂಗಳು, ಇಳೆಯೆಲ್ಲಮಂ ತೀಡಿದುವು ಕತ್ತಲೆಗಳು, ಅಲ್ಲಿಗಲ್ಲಿಗೆ ಮನೆಮನೆಗೆ ಸೊಡರ್ ಕಣ್ಗೆಸೆದುವು=[ಪಕ್ಷಿಗಳು ಗೂಡಿಗೆ ಓಡಿದುವು , ಘೂಕಂಗಳು/ ಗೂಗೆಗಳು ಕತ್ತಲು ಬಯಸಿ (ಪಶ್ಚಿಮ)ದೆಸೆಗಳನ್ನು ನೋಡಿದುವು , ಬಾಗಿಲನ್ನು ಹೂಡಿದಂತೆ, ಕಮಲಗಳು ಸಂಜೆಗೆ ದಳಗಳು ಮುಚ್ಚಿ ಜೇನುಗಳನ್ನು ಸೆರೆಹಿಡಿದವು, ಅರಳಿದವು ಇಂದೀವರಂಗಳು / ಕನ್ನೈದಿಲೆಗಳು, ನಭದೊಳು ಆಕಾಶದಲ್ಲಿ ಮೂಡಿದುವು ತಾರೆಗಳು, ಚಕ್ರವಾಕಪಕ್ಷಿಗಳನ್ನು ವಿರಹತಾಪ ಕಾಡಿತು, ಹೀಗೆ ಭೂಮಿಯೆಲ್ಲವನ್ನೂ ಆವರಿಸಿತು ಕತ್ತಲೆಗಳು, ಆಗ ಅಲ್ಲಿಗೆ ಅಲ್ಲಿಗೆ (ಬೀದಿ ಬೀಧಿಗಳಲ್ಲಿ) ಮನೆಮನೆಗಯಲ್ಲಿ ಹಣತೆ ದೀಪಗಳು ಕಣ್ಣಿಗೆ ಶೋಭಾಯಮಾನವಾಗಿ ಕಾಣಿಸಿತು.]
(ಪದ್ಯ - ೪೮) |
ಪದ್ಯ :-:೪೯:[ಸಂಪಾದಿಸಿ]
ರವಿ ಪಶ್ಚಿಮಾದ್ರಿಯಂ ಮರೆಗೊಳೆ ತಮಸ್ತೋಮ | ಮವನಿಯಂ ಮುಸುಕಿತೀ ತೆರೆದೊಳಸಿತಧ್ವಜಂ | ಬವರದೊಳ್ ಮುರಿದು ಭಂಗಿತನಾಗಿ ತಿರುಗಿದಂ ತನ್ನ ಪಟ್ಟಣಕಿತ್ತಲು || |
[ಆವರಣದಲ್ಲಿ ಅರ್ಥ];=
(ಪದ್ಯ - ೪೯) |
ಹೋಗಿ[ಸಂಪಾದಿಸಿ]
ನೋಡಿ[ಸಂಪಾದಿಸಿ]
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ[ಸಂಪಾದಿಸಿ]
ಕನ್ನಡ ವಿಕಿಸೋರ್ಸ್[ಸಂಪಾದಿಸಿ]
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ[ಸಂಪಾದಿಸಿ]
- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.